ಪಾಲಿಟಿಕ್ಸ್‌ ಎಂಟ್ರಿಗೆ ರೈತ ಹೋರಾಟ ಇಬ್ಭಾಗ?ಬಹಿರಂಗ ವಾಗ್ವಾದಕ್ಕಿಳಿದ ರೈತ ಮುಖಂಡರು

5ಎ ಕಾಲುವೆ ಜಾರಿಗೆ ಆಗ್ರಹಿಸಿ ಕಳೆದ 12 ವರ್ಷಗಳಿಂದ ರೈತರ ಹೋರಾಟ ನಡೆದಿದೆ.

Team Udayavani, Jan 13, 2021, 6:19 PM IST

ಪಾಲಿಟಿಕ್ಸ್‌ ಎಂಟ್ರಿಗೆ ರೈತ ಹೋರಾಟ ಇಬ್ಭಾಗ?ಬಹಿರಂಗ ವಾಗ್ವಾದಕ್ಕಿಳಿದ ರೈತ ಮುಖಂಡರು

ಮಸ್ಕಿ: ಸತತ 53 ದಿನಗಳಿಂದ ನಡೆದ ನಾರಾಯಣಪುರ ಬಲದಂಡೆ 5ಎ ಕಾಲುವೆ ಹೋರಾಟದಲ್ಲಿ ಪಾಲಿಟಿಕ್ಸ್‌ ನುಸುಳಿದ್ದು, ಚಳವಳಿಯ ಗುಂಪು ಚದುರುವ ಸನ್ನಿವೇಶ ನಿರ್ಮಾಣವಾಗಿದೆ!. 5ಎ ಕಾಲುವೆ ಹೋರಾಟ ಸಮಿತಿ ಹೊರತಾಗಿ ಮತ್ತೂಂದು ರೈತರ ಗುಂಪು ನಂದವಾಡಗಿ ಏತ ನೀರಾವರಿ ಬೇಕು ಎನ್ನುವ ವಾದ, ರೈತ ಚಳವಳಿ ಇಬ್ಭಾಗಕ್ಕೆ ಕಾರಣವಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಮಂಗಳವಾರ ಭ್ರಮರಾಂಭ ದೇವಿ ಕಲ್ಯಾಣ ಮಂಟಪದಲ್ಲಿ ಎರಡು ರೈತರ ಗುಂಪಿನ ನಡುವೆ ನಡೆದ ವಾಗ್ವಾದ ಚರ್ಚೆ, ಆಕ್ಷೇಪ, ಆಕ್ರೋಶ ಇದನ್ನು ಪುಷ್ಠಿàಕರಿಸಿದ್ದು, 5ಎ ಕಾಲುವೆ ಹೋರಾಟ ಹಾದಿ ತಪ್ಪುತ್ತಿದೆಯಾ? ಎನ್ನುವ ಅನುಮಾನ ನಿಜ ಮಾಡಿದೆ.

ಆಗಿದ್ದೇನು?: 31ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ನೀರು ಒದಗಿಸುವ 5ಎ ಕಾಲುವೆ ಜಾರಿಗೆ ಆಗ್ರಹಿಸಿ ಕಳೆದ 12 ವರ್ಷಗಳಿಂದ ರೈತರ ಹೋರಾಟ ನಡೆದಿದೆ. ಆದರೆ
ಕಳೆದ 53 ದಿನಗಳಿಂದ ರೈತರು ಚಳವಳಿ ತೀವ್ರವಾಗಿದ್ದು, 5ಎ ಕಾಲುವೆ ಹೋರಾಟ ಸಮಿತಿಯಿಂದ ಅನಿರ್ದಿಷ್ಟ ಧರಣಿ ಪಾಮನಕಲ್ಲೂರಿನಲ್ಲಿ ಆರಂಭವಾಗಿದೆ.

ಈ ಯೋಜನೆ ಬಾಧಿತ ಹಳ್ಳಿಗರ ಶಕ್ತಿ ಪ್ರದರ್ಶನ, ಮಠಾ ಧೀಶರ ಬೆಂಬಲ, ಒಗ್ಗಟ್ಟು ಪ್ರದರ್ಶನದ ಮೂಲಕ 30 ಹಳ್ಳಿಗಳ ಗ್ರಾಪಂ ಚುನಾವಣೆ ಬಹಿಷ್ಕಾರ, ಮಸ್ಕಿ ಬಂದ್‌ ಸೇರಿ ಹಂತ-ಹಂತದ ಹೋರಾಟ ನಡೆದು ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗಿತ್ತು.

ರೈತರ ಈ ಹೋರಾಟಕ್ಕೆ ಮಣಿದ ಸರ್ಕಾರ ಈ ಹಿಂದೆ ಈ ಯೋಜನೆ ಜಾರಿ ಸಾಧ್ಯವೇ ಇಲ್ಲ ಎಂದು ಮತ್ತೂಮ್ಮೆ ಪರಿಶೀಲನೆಗೆ ತಾಂತ್ರಿಕ ಸಲಹಾ ಸಮಿತಿ ನೇಮಕ ಮಾಡಿತ್ತು. ಆದರೀಗ ಇದರ ಬೆನ್ನಲ್ಲೇ ರೈತರ ನಡುವೆ ಭಿನ್ನಮತ ಬಯಲಾಗಿದೆ.

ಮಾತಿನ ಸಂಘರ್ಷ: 5ಎ ಜಾರಿವರೆಗೂ ನಂದವಾಡಗಿ ಏತ ನೀರಾವರಿ ಮೂಲಕವೇ ನೀರು ಕೊಡಿ ಎಂದು ಕೆಲ ರೈತರು ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆ ಇಟ್ಟು ಮಂಗಳವಾರ ಮಸ್ಕಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಆದರೆ ಈ ಸುದ್ದಿ ತಿಳಿದ ಮತ್ತೂಂದು ರೈತರ ಗುಂಪು ಹೋರಾಟ ಸ್ಥಳ ಪಾಮನಕಲ್ಲೂರಿನಿಂದ ಮಸ್ಕಿಗೆ ದೌಡಾಯಿಸಿ, ಸುದ್ದಿಗೋಷ್ಠಿ ನಡೆಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ವ್ಯತಿರಿಕ್ತ ಹೇಳಿಕೆ ಮೂಲಕ ರೈತರ ಹೋರಾಟ ದಾರಿ ತಪ್ಪಿಸುವುದು ಸರಿಯೇ?, ರೈತರ ಧರಣಿ ವೇದಿಕೆಯಲ್ಲೇ ಇವೆಲ್ಲವನ್ನೂ ಚರ್ಚೆ ಮಾಡಬೇಕು. ಆದರೆ ಎಲ್ಲ ಬಿಟ್ಟು ಹೀಗೆ ಇನ್ನೊಬ್ಬರ ಮಾತು ಕೇಳಿ ಹೋರಾಟ ಹೊಡೆಯಬೇಡಿ ಎಂದು ಮನವಿ ಮಾಡಿದರು. ಈ ವೇಳೆ ಎರಡು ರೈತರ ಗುಂಪಿನ ನಡುವೆ ಆರಂಭದಲ್ಲಿ ಮಾತಿನ ಚರ್ಚೆ, ಪರಸ್ಪರ ವಾಗ್ವಾದ ನಡೆಯಿತು. ಬಳಿಕ ಆವೇಶ, ಆಕ್ರೋಶದ ಮೂಲಕ ರೈತರು ಎರಡು ಬಣಗಳಾಗಿ ಚದುರಿದರು.

ತೆರೆಮರೆ ಪಾಲಿಟಿಕ್ಸ್‌
ರೈತರ ಹೋರಾಟ ಹೀಗೆ ಇಬ್ಭಾಗವಾಗಲು ರಾಜಕೀಯ ಎಂಟ್ರಿಯೇ ಕಾರಣ ಎನ್ನುವುದು ಸ್ಪಷ್ಟವಾಗಿದೆ. 5ಎ ಕಾಲುವೆ ಹೋರಾಟಕ್ಕೆ ಕಾಂಗ್ರೆಸ್‌ ಬೆಂಬಲಿಸಿದೆ ಎನ್ನುವ ಗುಮಾನಿ ಆರಂಭದಿಂದಲೂ ಇತ್ತು. ಆದರೆ ಮಸ್ಕಿ ಬಂದ್‌ ವೇಳೆ ಕಾಂಗ್ರೆಸ್‌ನವರೇ ಇದನ್ನು ಬಹಿರಂಗಪಡಿಸಿ ಹೋರಾಟದಲ್ಲೂ ಭಾಗಿಯಾದರು. ಆದರೆ ಇದಕ್ಕೆ ಪ್ರತಿಯಾಗಿಯೇ ಬಿಜೆಪಿ ಗುಂಪು ಪ್ರತಿ ದಾಳ ಉರುಳಿಸಿದೆ ಎನ್ನುವುದು ಸ್ಪಷ್ಟವಾಯಿತು.

ಬಿಜೆಪಿ ಮುಖಂಡರು, ಪದಾಧಿಕಾರಿಗಳು ಇರುವ ರೈತರ ಗುಂಪೇ ನಂದವಾಡಗಿ ಏತ ನೀರಾವರಿ ಬೇಡಿಕೆ ಪುನರುತ್ಛರಿಸಿದೆ. ಅಲ್ಲದೇ ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ಜ.11ರಂದು ಕೆಲ ರೈತರಿಗೆ ಖುದ್ದು ಬಿಜೆಪಿ ಕಚೇರಿಯಿಂದಲೇ ದೂರವಾಣಿ ಸಂದೇಶ ಹೋಗಿದ್ದು ಇದೆಲ್ಲವನ್ನೂ ಹೊರಹಾಕಿದೆ.ಒಟ್ಟಿನಲ್ಲಿ ನೀರಾವರಿ ಬೇಡಿಕೆಗಾಗಿ ನಡೆದ ಚಳವಳಿ ರಾಜಕೀಯ ಎಂಟ್ರಿಯಿಂದ ದಿಕ್ಕಾಪಾಲಾಗುವ ಸನ್ನಿವೇಶ ಮಾತ್ರ ಉಂಟಾಗಿದೆ.

ಮಲ್ಲಿಕಾರ್ಜುನ ಚಿಲ್ಕರಾಗಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.