ಭಾರತೀಯತೆ ಒಪ್ಪದವರು ಇಲ್ಲಿರಬೇಕಿಲ್ಲ: ಅದಮಾರು ಶ್ರೀ
Team Udayavani, Apr 17, 2022, 6:20 AM IST
ರಾಯಚೂರು: ಭಾರತೀಯತೆಗೆ ಯಾರೆಲ್ಲ ವಿರೋಧ ಮಾಡುತ್ತಾರೋ ಅವರು ಇಲ್ಲಿರುವ ಅಗತ್ಯವಿಲ್ಲ. ಇಲ್ಲಿನ ನೆಲ-ಜಲ-ಗಾಳಿ ಬಳಸು ವವರೆಲ್ಲ ಭಾರತೀಯರೇ ಎಂದು ಅದಮಾರು ಪೀಠದ ಶ್ರೀ ವಿಶ್ವಪ್ರಿಯ ತೀರ್ಥರು ಅಭಿಪ್ರಾಯಪಟ್ಟರು.
ನಗರದಲ್ಲಿ ಶನಿವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಎಲ್ಲರೂ ಒಂದಾಗಿ, ಚೆನ್ನಾಗಿ ಬದುಕಬೇಕೆಂಬ ಭಾವನೆ ಕೇವಲ ಹಿಂದೂಗಳು ಮಾಡಿದರೆ ಸಾಲದು; ಎಲ್ಲ ಧರ್ಮೀಯರು ಮಾಡಬೇಕು. ಈಚೆಗೆ ಸಮಾಜದಲ್ಲಿ ನಡೆಯುತ್ತಿರುವ ಧಾರ್ಮಿಕ ಬೆಳವಣಿಗೆಗಳು ಸಮಾಜಕ್ಕೆ ಮಾರಕವಾದದ್ದು. ಇಲ್ಲಿ ನಾವು ಯಾರನ್ನೂ ದೂರಿ ಪ್ರಯೋಜನವಿಲ್ಲ. ಇದು ನನ್ನ ದೇಶ ಎಂಬ ಭಾವನೆ ಪ್ರತಿಯೊಬ್ಬ ಹಿಂದೂವಿನ ಮನಸ್ಸಿಗೆ ಬರಬೇಕು ಎಂದರು.
ಈ ಮಣ್ಣಲ್ಲಿ ಇರುವವರು, ಇಲ್ಲಿ ಉಸಿರಾಡುವವರು, ನೀರು ಕುಡಿಯುವವರು, ಆಹಾರ ಸೇವಿಸುವವರೆಲ್ಲರೂ ಭಾರತೀಯರೇ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅಂಥವರಿಗೆ ಹಿಂದೂ ಗಳು ಮನದಟ್ಟು ಮಾಡಬೇಕು. ನೀವೂ ಬದುಕಬೇಕು, ನಾವೂ ಬದುಕಬೇಕು ಎಂಬ ವಾತಾವರಣ ಸೃಷ್ಟಿಸಬೇಕು. ಅಂದಾಗ ಮಾತ್ರ ನಮ್ಮ ದೇಶ ಇಡೀ ವಿಶ್ವಕ್ಕೆ ಮಾದರಿಯಾಗಲು ಸಾಧ್ಯ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ