ಉರುಳಿ ಬಿದ್ದ ಹಣ ತುಂಬಿದ್ದ ಕಂಟೈನರ್
Team Udayavani, Feb 26, 2021, 6:07 PM IST
ರಾಮನಗರ: ಮೈಸೂರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನೋಟು ಮುದ್ರಣ ಘಟಕದಿಂದ ಬೆಂಗಳೂ ರಿನ ಕಡೆಗೆ ಸಾಗುತ್ತಿದ್ದ ನೋಟು ತುಂಬಿದ್ದ ಕಂಟೈನರ್ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಉರುಳಿ ಬಿದ್ದ ಘಟನೆ ನಗರ ಸಮೀಪದ ಕಲ್ಲುಗೋಪಹಳ್ಳಿ ಬಳಿ ನಡೆದಿದೆ.
ಗುರುವಾರ ಮಧ್ಯಾಹ್ನ ಮೈಸೂರಿನ ನೋಟು ಮುದ್ರಣ ಘಟಕದಿಂದ 18 ಕಂಟೈನರ್ ಲಾರಿಗಳು ಕೈಗಾ ರಿಕಾ ಭದ್ರತಾ ಪಡೆಯ ರಕ್ಷಣೆಯಲ್ಲಿ ಬೆಂಗಳೂರಿನ ಕಡೆ ತೆರಳುತ್ತಿತ್ತು. ರಾಷ್ಟ್ರೀಯ ಹೆದ್ದಾರಿ ರಸ್ತೆ 275ರ ವಿಸ್ತ ರಣಾ ಕಾಮಗಾರಿ ನಡೆಯುತ್ತಿದೆ. ರಾಮನಗರ-ಬಿಡದಿ ನಡುವೆ ಕಲ್ಲುಗೋಪಹಳ್ಳಿ ಬಳಿ ಕಾಮಗಾರಿ ಕಾರಣ ದೊಡ್ಡ ತಿರುವು ನಿರ್ಮಾಣವಾಗಿದ್ದು, ಕಂಟೈನರ್ ಒಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದೆ.
ಚಾಲಕನಿಗೆ ಸಣ್ಣ ಪುಟ್ಟ ಗಾಯ: ತಕ್ಷಣ ರಕ್ಷಣಾ ಪಡೆ ಎಲ್ಲ ಲಾರಿಗಳನ್ನು ಅಲ್ಲಿಯೇ ತಡೆದು, ಉರುಳಿ ಬಿದ್ದ ಕಂಟೈನರ್ನ ರಕ್ಷಣೆಗೆ ನಿಂತರು. ಉರುಳಿ ಬಿದ್ದ ಕಂಟೈನರ್ ಲಾರಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾ ಗಿದ್ದು, ಬಿಡದಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಬಿಡದಿ ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಸಿಬ್ಬಂದಿಗೆ ಸಹಕಾರ ನೀಡಿದ್ದಾರೆ. ಕಂಟೈನರ್ಗಳ ಜೊತೆಗೆ ಪ್ರಯಾಣಿಸುತ್ತಿದ್ದ ನೋಟು ಮುದ್ರಣ ಘಟಕದ ಅಧಿಕಾರಿಗಳು ತಮ್ಮ ಹಿರಿಯ ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಅಧಿಕಾರಿಗಳ ಸ್ಥಳ ಭೇಟಿ, ಪರಿಶೀಲನೆ ನಂತರ ಸಂಜೆ ವೇಳೆಗೆ ಉಳಿದ 17 ಕಂಟೈನರ್ಗಳು ತಮ್ಮ ಪ್ರಯಾಣ ಮುಂದುವರೆಸಿವೆ.
ಉರುಳಿ ಬಿದ್ದಿರುವ ಲಾರಿಯನ್ನು ಕ್ರೇನ್ ಮೂಲಕ ಎತ್ತಿ ನಿಲ್ಲಿಸಿ ವಾಪಸ್ ಮೈಸೂರಿಗೆ ತೆಗೆದುಕೊಂಡು ಹೋಗುವುದಾಗಿ, ಲಾರಿಯಲ್ಲಿರುವ ನೋಟುಗಳಿಗೆ ಹಾನಿ ಆಗಿಲ್ಲ ಎಂದು ಖಾತರಿ ಪಡಿಸಿಕೊಂಡ ನಂತರ ಪುನಃ ನೋಟುಗಳನ್ನು ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೆ ತಲುಪಿಸಲಾಗುವುದು ಎಂದು ಪೊಲೀಸರು ತಿಳಿ ಸಿದ್ದಾರೆ.
ಪೊಲೀಸ್ ಬಂದೂಬಸ್ತ್: ಲಾರಿಯನ್ನು ಎತ್ತಿ ನಿಲ್ಲಿಸುವ ಸಾಮರ್ಥ್ಯದ ಕ್ರೇನ್ಗಾಗಿ ಪೊಲೀಸರು ಕಾಯುತ್ತಿ ದ್ದಾರೆ. ಕತ್ತಲಾದ ಪರಿಣಾಮ ಬಹುಶಃ ಶುಕ್ರವಾರ ಬೆಳಗ್ಗೆ ಕಾರ್ಯಾಚರಣೆ ಮುಂದುವರೆಯಬಹುದು ಎನ್ನ ಲಾಗಿದೆ. ಅಲ್ಲಿಯವರೆಗೆ ಸಿಐಎಸ್ಎಫ್ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಯಿಂದ ಬಿಗಿ ಬಂದೂಬಸ್ತ್ ಮುಂದುವರೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ