ಬಿಡದಿಯ ಪುನೀತ್ ಫಾರಂಗೆ ಜಿಲ್ಲಾಧಿಕಾರಿ ಭೇಟಿ
Team Udayavani, Oct 30, 2021, 4:57 PM IST
ರಾಮನಗರ: ದಿವಂಗತ ನಟ ಪುನಿತ್ ರಾಜ್ ಕುಮಾರ್ ಅವರ ಅಂತ್ಯ ಸಂಸ್ಕಾರ ರಾಮನಗರ ಜಿಲ್ಲೆ ಬಿಡದಿ ಹೋಬಳಿ ಶೇಷಗಿರಿಹಳ್ಳಿಯ ಪುನೀತ್ ಫಾರಂ ನಡೆಯಲಿದೆಯೇ? ಡಾ.ರಾಜ್ ಕುಮಾರ್ ಕುಟುಂಬಕ್ಕೆ ಸೇರಿದ ಪುನೀತ್ ಫಾರಂಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಭೇಟಿ ಕೊಟ್ಟು ಪರೀಶಿಲನೆ ನಡೆಸಿದ್ದು ಈ ಅನುಮಾನಕ್ಕೆ ಕಾರಣವಾಗಿದೆ.
ಫಾರಂಗೆ ಅಧಿಕಾರಗಳ ತಂಡ ಭೇಟಿ: ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಕೇಂದ್ರವಲಯ ಐಜಿಪಿ ಚಂದ್ರಶೇಖರ್ ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ ಎಸ್.ಗಿರೀಶ್ ಮತ್ತು ಕಂದಾಯ ಅಧಿಕಾರಿಗಳ ತಂಡ ಫಾರಂಗೆ ಭೇಟಿ ಕೊಟ್ಟಿದ್ದರು. ಬೆಂಗಳೂರಿನಲ್ಲಿ ಡಾ.ರಾಜ್ ಕುಮಾರ್ ಅವರ ಸಮಾಧಿ ಪಕ್ಕ ದಲ್ಲೇ ಪುನೀತ್ ರಾಜ್ಕುಮಾರ್ ಅವರ ಅಂತ್ಯ ಸಂಸ್ಕಾರಕ್ಕೆ ಸರ್ಕಾರ ಅನುಮತಿ ನೀಡಿದೆ. ಆದರೆ ಅವರ ಕುಟುಂಬ ಸದಸ್ಯರ ಅಭಿಪ್ರಾಯ ಇನ್ನು ವ್ಯಕ್ತವಾಗಿಲ್ಲ. ಕುಟುಂಬ ಸದಸ್ಯರು ಹಾಗೊಮ್ಮೆ ಪುನೀತ್ ಫಾರಂನಲ್ಲಿ ಅಂತ್ಯ ಸಂಸ್ಕಾರ ನಡೆಸಲು ನಿರ್ಧರಿಸಿದರೆ, ಪುನೀತ್ ಫಾರಂನಲ್ಲಿ ಅಗತ್ಯ ವ್ಯವಸ್ಥೆ ಆರಂಭವಾಗಲಿದೆ.
ಫಾರಂ ಮನೆ ನೆನಪು: 1975ರಲ್ಲಿ ಪುನೀತ್ ರಾಜ್ಕುಮಾರ್ ಅವರು ಜನನ ತಾಳಿದ ವರ್ಷದಲ್ಲೇ ಡಾ.ರಾಜ್ಕುಮಾರ್ ಅವರು ಈ ಭೂಮಿಯನ್ನು ಖರೀದಿಸಿದ್ದರು. ಪುನೀತ್ ರಾಜಕುಮಾರ್ ಅವರು ತಮ್ಮ ಬಾಲ್ಯದ ದಿನಗಳಲ್ಲಿ ಇದೇ ಮನೆ ಯಲ್ಲಿ ಹೆಚ್ಚಾಗಿ ಕಳೆದಿದ್ದರು ಎನ್ನಲಾಗಿದೆ. ಶೇಷಗಿರಿಹಳ್ಳಿಯ ಸರ್ವೆ ಸಂಖ್ಯೆ 72 ಮತ್ತು 73ರಲ್ಲಿ ಒಟ್ಟು 22 ಎಕರೆ ಭೂಮಿ ಯನ್ನು ಖರೀದಿಸಿದ್ದರು. ತದನಂತರದ ವರ್ಷಗಳಲ್ಲಿ 7 ಎಕರೆ ಭೂಮಿಯನ್ನು ಡಾ.ರಾಜ್ಕುಮಾರ್ ಮಾರಾಟ ಮಾಡಿದ್ದರು. ಉಳಿದ 15 ಎಕರೆ ಭೂಮಿಯನ್ನು ಅವರು ತಮ್ಮ ಐದೂ ಮಂದಿ ಮಕ್ಕಳಿಗೆ ಭಾಗ ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ:- ಸಾರ್ವಜನಿಕರಿಗೆ ನಿಸ್ವಾರ್ಥ ಸೇವೆ ಒದಗಿಸಿ
ಎಲ್ಲರ ಹೆಸರಿಗೂ ಭೂಮಿ ಖಾತೆಯಾಗಿದೆ. ರಾಘವೇಂದ್ರ ರಾಜಕುಮಾರ್ ಅವರಿಗೆ 2 ಎಕರೆ 19 ಕುಂಟೆ ಭೂಮಿ, ಲಕ್ಷ್ಮಿ ಗೋವಿಂದರಾಜ್ ಅವರಿಗೆ 3 ಎಕರೆ 1 ಕುಂಟೆ, ಪೂರ್ಣಿಮ ರಾಂಕುಮಾರ್ ಅವರಿಗೆ 2 ಎಕರೆ 15 ಕುಂಟೆ, ಶಿವರಾಜ್ ಕುಮಾರ್ ಅವರಿಗೆ 1 ಎಕರೆ, ಪುನೀತ್ರಾಜ್ ಕುಮಾರ್ ಅವರಿಗೆ 2 ಎಕರೆ ಭೂಮಿ ಯನ್ನು ಭಾಗವಾಗಿ ಕೊಡಲಾಗಿದೆ ಎಂಬ ಮಾಹಿತಿ ದೊರಕಿದೆ. ಬೆಂಗಳೂರು ಮೈಸೂರು ಹೆದ್ದಾರಿ ರಸ್ತೆ ವಿಸ್ತರಣೆಯಾಗುತ್ತಿದ್ದು, 1 ಎಕರೆಯಷ್ಟು ಪ್ರಮಾಣದ ಭೂಮಿ ಸ್ವಾಧೀನವಾಗಿದ್ದು, 13.8 ಎಕರೆ ಭೂಮಿ ಮಾತ್ರ ಕುಟುಂಬದ ಬಳಿ ಇದೆ.
ವಿಶ್ರಾಂತಿ ಪಡೆಯುತ್ತಿದ್ದ ಅಪ್ಪಾಜಿ: ಪುನೀರ್ ಫಾರಂನಲ್ಲಿ ಡಾ.ರಾಜ್ ಕುಟುಂಬ ಮನೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ಡಾ.ರಾಜ್ಕುಮಾರ್ ಅವರು ಆಗಾಗ್ಗೆ ಇಲ್ಲಿಗೆ ಭೇಟಿ ಕೊಟ್ಟು ವಿಶ್ರಾಂತಿ ಪಡೆಯುತ್ತಿದ್ದರು. ಈ ಜಮೀನು ಪುನೀತ್ ರಾಜ್ಕುಮಾರ್ ಅವರ ಮೆಚ್ಚಿನ ಸ್ಥಳವೂ ಆಗಿತ್ತು. ರಾಜ್ ಕುಮಾರ್ ಅವರ ತಾಯಿ ಲಕ್ಷ್ಮಮ್ಮ ಮತ್ತು ಸಹೋದರ ವರದರಾಜು ಅವರ ಸಮಾಧಿಯೂ ಇದೇ ಫಾರಂನಲ್ಲಿದೆ. ಡಾ. ರಾಜ್ಕುಮಾರ್ ಅವರು ನಿಧನ ಹೊಂದಿದಾಗ ಅವರ ಪಾರ್ಥಿವ ಶರೀರವನ್ನು ಪುನೀತ್ ಫಾರಂನಲ್ಲೇ ಸಮಾಧಿ ಮಾಡಬೇಕು ಎಂಬ ಕಾರಣಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಅಂತ್ಯ ಸಂಸ್ಕಾರವನ್ನು ಬೆಂಗಳೂರಿನಲ್ಲಿ ನೆರೆವೇರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ
MUST WATCH
ಹೊಸ ಸೇರ್ಪಡೆ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ