ಆನೆ ದಾಳಿಗೆ ತೆಂಗು, ಮಾವು ಹಾನಿ
Team Udayavani, Mar 6, 2019, 7:25 AM IST
ರಾಮನಗರ: ತಾಲೂಕಿನ ಹೊಸದೊಡ್ಡಿ ಗ್ರಾಮದಲ್ಲಿ ಮೂರು ಆನೆಗಳ ಗುಂಪೊಂದು ದಾಂಧಲೆ ನಡೆಸಿದ ಪರಿಣಾಮ ತೆಂಗಿ ತೋಟ, ಮಾವಿನ ತೋಟಗಳಿಗೆ ಹಾನಿಯಾದ ಪ್ರಸಂಗ ನಡೆದಿದೆ.
ಹೊಸದೊಡ್ಡಿ ಗ್ರಾಮದ ಚಿಕ್ಕೇಗೌಡ, ಗೋವಿಂದೇಗೌಡ, ನರಸಿಂಹಯ್ಯ ಎಂಬುವರ ತೆಂಗಿನ ಮರಗಳು ಚಂದ್ರು, ಅಪ್ಪಾಜಿಗೌಡ, ನಾಗರಾಜು ಎಂಬುವರ ಮಾವಿನ ಮರಗಳಿಗೆ ಹಾನಿಯಾಗಿದೆ. ಕೊಳವೆಬಾವಿಯ ಪೈಪುಗಳನ್ನು ಆನೆಗಳು ಕಿತ್ತು ದಾಂಧಲೆ ನಡೆಸಿವೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಚನ್ನಪಟ್ಟಣ ತಾಲೂಕು ವಲಯ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿ ರೈತರಿಗೆ ಆಗಿರುವ ನಷ್ಟದ ಬಗ್ಗೆ ಮಾಹಿತಿ ಕಲೆಹಾಕಿದರು. ಆನೆಗಳನ್ನು ತಮ್ಮ ಸ್ವಸ್ಥಾನ ಸೇರಿಸುವ ಭರವಸೆ ನೀಡಿದರು.
ಆನೆಗಳು ತೆಂಗಿನಕಲ್ಲು ಆರಣ್ಯ ಪ್ರದೇಶದಿಂದ ಗ್ರಾಮಕ್ಕೆ ಆಗಮಿಸಿವೆ. ಸದ್ಯ ಆನೆಗಳ ಹಿಂಡು ಸದ್ಯ ತೆಂಗಿನ ಕಲ್ಲು ಅರಣ್ಯದಲ್ಲೇ ಇದ್ದು, ಅಲ್ಲಿಂದ ಅವುಗಳನ್ನು ತಮ್ಮ ಸ್ವ ಸ್ವಾನಕ್ಕೆ ಹಿಂದಿರುಗಿಸಲಾಗುವ ಬಗ್ಗೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳಿದ್ದಾರೆ.
ಆನೆಗಳು ತೆಂಗಿನ ತೋಟಕ್ಕೆ ಪದೇ ಪದೇ ಬರುತ್ತಿವೆ, ಅನೇಕ ಬಾರಿ ಇಂತಹ ಹಾನಿ ಉಂಟಾಗಿದೆ. ಕಷ್ಟಪಟ್ಟು ಬೆಳೆಸಿದ ತೆಂಗು, ಮಾವು ಬೆಳೆ ಹೀಗೆ ನಾಶವಾಗುತ್ತಿರುವುದರಿಂದ ತಮಗೆ ನಿರಂತರ ನಷ್ಟವುಂಟಾಗುತ್ತಿದೆ ಎಂದು ಗ್ರಾಮಸ್ಥರು ಅರಣ್ಯ ಅಧಿಕಾರಿಗಳ ಬಳಿ ಅಲವತ್ತುಕೊಂಡರು. ಆನೆಗಳು ಗ್ರಾಮಕ್ಕೆ ಬರದಿರುವಂತೆ ರಕ್ಷಣ ಒದಗಿಸುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ