ಸ್ಫೋಟಕ ಪತ್ತೆ: ನಿವಾಸಿಗಳಲ್ಲಿ ಹೆಚ್ಚಿದ ಆತಂಕ
ವಿದೇಶಿ ನಾಗರಿಕರ ಪತ್ತೆ ಕಾರ್ಯ ಮುಗಿದಿಲ್ಲ • ಮಕ್ಕಳನ್ನು ಶಾಲೆಗೆ ಕಳುಹಿಸಲು ಧೈರ್ಯ ತೋರದ ಪೋಷಕರು
Team Udayavani, Jun 29, 2019, 11:05 AM IST
ರಾಮನಗರದಲ್ಲಿ ಸುಧಾರಿತ ಸ್ಫೋಟಕಗಳು ಪತ್ತೆಯದ ಸ್ಥಳ.
ರಾಮನಗರ: ನಗರದ ಟಿಪ್ಪು ನಗರದಲ್ಲಿ ಪತ್ತೆಯಾದ ಎರಡು ಸುಧಾರಿತ ಸ್ಫೋಟಕಗಳ ಪ್ರಕರಣ ಜಿಲ್ಲಾ ಕೇಂದ್ರದ ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ ಟಿಪ್ಪು ನಗರದ ನಿವಾಸಿಗಳು ಆತಂಕದಿಂದ ಹೊರ ಬಂದಿಲ್ಲ.
ಸ್ಫೋಟಕಗಳು ಪತ್ತೆಯಾದ ಸ್ಥಳದ ಬಳಿಯಲ್ಲೇ ಇರುವ ಖಾಸಗಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ತೀರಾ ವಿರಳವಾಗಿರುವುದು ಇದಕ್ಕೆ ಸಾಕ್ಷಿ. ಶಾಲೆ ನಡೆಯುತ್ತಿದೆ ಎಂದು ಶಿಕ್ಷಕರು ಪೋಷಕರಿಗೆ ತಿಳಿಸಿದರು, ಆತಂಕದಲ್ಲಿ ರುವ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವ ಧೈರ್ಯ ತೋರಲಿಲ್ಲ. ಎನ್ಐಎ ಅಧಿಕಾರಿಗಳು ಸ್ಫೋಟಕಗಳ ಪತ್ತೆಗೆ ಮುನ್ನ ಸದರಿ ಶಾಲೆಯ ತರಗತಿಗಳನ್ನು ಸ್ಥಗಿತಗೊಳಿಸಿ, ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ್ದರು. ತದ ನಂತರ ಈ ಭಾಗದಲ್ಲಿ ವಿಭಿನ್ನವಾದ ವದಂತಿಗಳು ನಗರದಲ್ಲಿ ಹರಡಿದ್ದವು. ಇವು ಪೋಷಕರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಸ್ಫೋಟಕಗಳು ಪತ್ತೆಯಾದ ರಸ್ತೆಯಲ್ಲಿ ಜನ ಸಂಚಾರವೂ ಎಂದಿನಂತೆ ಇರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ನಗರವಾಸಿಗಳಲ್ಲಿ ಹೆಚ್ಚಿದೆ ಆತಂಕ: ದೊಡ್ಡಬಳ್ಳಾಪುರದಲ್ಲಿ ಸಿಕ್ಕಿಬಿದ್ದ ಶಂಕಿತ ಉಗ್ರ ಹಬೀಬುರ್ ಕೊಟ್ಟ ಸುಳಿವಿನ ಮೇರೆಗೆ ರಾಷ್ಟ್ರೀಯ ತನಿಖಾ ದಳ ರಾಮನಗರದ ಟಿಪ್ಪುನಗರದ ಸೀರಹಳ್ಳದ ಸೇತುವೆ ಬಳಿ ಎರಡು ಸುಧಾರಿತ ಸ್ಫೋಟಕಗಳನ್ನು ಪತ್ತೆ ಹಚ್ಚಿದ್ದರು. ಈ ಪ್ರಕರಣ ಜಿಲ್ಲಾ ಕೇಂದ್ರದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಕಳೆದ ವರ್ಷವಷ್ಟೇ ಶಂಕಿತ ಉಗ್ರನೊಬ್ಬ ಇಲ್ಲಿ ಪತ್ತೆಯಾಗಿದ್ದ ಪ್ರಕರಣ ಇನ್ನು ಜನಮಾನಸದಲ್ಲಿ ಮಾಸುವ ಮುನ್ನವೇ ಸ್ಫೋಟಕಗಳು ಪತ್ತೆಯಾಗಿರುವುದು ಜನರ ಆತಂಕವನ್ನು ಹೆಚ್ಚಿಸಿದೆ. ಇಡೀ ನಗರದಲ್ಲಿ ಇದೇ ಚರ್ಚೆಯ ವಸ್ತುವಾಗಿದೆ.
ಬಾಡಿಗೆ ಸಹವಾಸವೇ ಬೇಡ ಎನ್ನುತ್ತಿರುವ ಮಾಲೀಕರು: ಸೀರಳ್ಳ, ಟಿಪ್ಪು ನಗರ ಮತ್ತು ಸುತ್ತಮು ತ್ತಲ ಸ್ಥಳಗಳಲ್ಲಿ ವಾಸಿಸುವ ನಾಗರಿಕರು ಹೊಸಬರನ್ನು ಅನುಮಾನದಿಂದಲೇ ನೋಡುವಂತಾಗಿದೆ. ಕೆಲವು ಮನೆ ಮತ್ತು ಅಂಗಡಿ ಮಳಿಗೆಯ ಮಾಲೀಕರು ಬಾಡಿಗೆ ಸಹವಾಸವೇ ಸಾಕೆನಿಸಿದೆ ಎಂದಿದ್ದಾರೆ. ಗುರುತಿಸಿಕೊಳ್ಳಲು ಇಚ್ಛಿಸದ ವ್ಯಕ್ತಿಯೊಬ್ಬರು, ಈ ಭಾಗದಲ್ಲಿ ಇನ್ನು ಮುಂದೆ ಆಧಾರ್ ಕಾರ್ಡಿನಲ್ಲಿ ಕರ್ನಾಟಕದ ವಿಳಾಸವಿದ್ದರೆ ಮಾತ್ರ ಬಾಡಿಗೆಗೆ ಕೊಡುವ ಬಗ್ಗೆ ಚಿಂತನೆ ನಡೆಸಿರುವ ಬಗ್ಗೆ ತಿಳಿಸಿದ್ದಾರೆ.
● ಬಿ.ವಿ.ಸೂರ್ಯ ಪ್ರಕಾಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ