ಮುಖ್ಯಾಧಿಕಾರಿ ಇಲ್ಲದ ಖಾಲಿ ಪುರಸಭೆ
Team Udayavani, Nov 28, 2022, 2:26 PM IST
ಮಾಗಡಿ: ಪುರಸಭೆಗೆ ಯಾವಾಗ ಮುಖ್ಯಾಧಿಕಾರಿ ಬರುತ್ತಾರೆ. ಮುಖ್ಯಾಧಿಕಾರಿಯನ್ನು ನೋಡಲು ನಾವು ಎಷ್ಟು ದಿನ ಅಂತ ಪುರಸಭೆ ಕಚೇರಿಗೆ ಅಲೆಯಬೇಕಿದೆ ಎಂದು ನಿತ್ಯ ಪುರಸಭೆ ಕಚೇರಿ ಬಾಗಿಲಲ್ಲಿ ಕೇಳಿ ಬರುವ ಮಾತಿದು. ಪು
ರಸಭೆ ಅಕ್ಷರಸಃ ಯಜಮಾನನಿಲ್ಲದ ಖಾಲಿ ಮನೆಯಂತಿದೆ. ನಿತ್ಯ ಕಚೇರಿಗೆ ಬರುವವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ನಿರಾಸೆಯಿಂದ ವಾಪಸ್ ಆಗುತ್ತಿದ್ದಾರೆ. ಮಾಗಡಿ ಪುರಸಭೆ ಮುಖ್ಯಾಧಿಕಾರಿಗಳಿಲ್ಲದೆ ದಿನದಿಂದ ದಿನಕ್ಕೆ ಪುರನಾಗರಿಕರ ಸಮಸ್ಯೆ ಹೆಚ್ಚಾಗುತ್ತಿದ್ದು, ಮುಖ್ಯಾಧಿಕಾರಿ ಯಾವಾಗ ಬರುತ್ತಾರೆ, ಅಧಿಕಾರ ಯಾವಾಗ ಸ್ವೀಕರಿಸುತ್ತಾರೆ ಎಂಬ ಪುರನಾಗರಿಕರ ಪ್ರಶ್ನೆಗೆ ಪುರಸಭೆ ಕಚೇರಿಯಲ್ಲಿ ನಿಖರವಾಗಿ ಉತ್ತರಿಸುವವರೇ ಇಲ್ಲದಂತಾಗಿದೆ.
ಮಧ್ಯಾಹ್ನ ಆಗುತ್ತಿದ್ದಂತೆ ಪುರಸಭೆಯ ಕಚೇರಿಯಲ್ಲಿ ಸಿಬ್ಬಂದಿಗಳೇ ಮಾಯವಾಗಿರುತ್ತಾರೆ. ಕಾವಲಿಗೆ ಎನ್ನುವಂತೆ ಯಾರೋ ಒಂದಿಬ್ಬರು ಡಿ.ಗುಂಪು ಸಿಬ್ಬಂದಿ ಕುಳಿತಿರುತ್ತಾರೆ. ಅವರಿಂದ ಸಮರ್ಪಕ ಮಾಹಿತಿ ಸಿಗದ ಕಾರಣ ಮಾಹಿತಿ ನೀಡುವವರೇ ಇಲ್ಲ. ಆಡಳಿತ ಮಂಡಳಿ ಇದ್ದರೂ ಇಲ್ಲದಂತೆ ಇರುವುದು ಪುರನಾಗರಿಕರಲ್ಲಿ ಬೇಸರ ಉಂಟಾಗಿದೆ.
ಅರ್ಜಿ ಸಲ್ಲಿಸಿದರೂ ದಾಖಲೆ ಸಿಕ್ಕಿಲ್ಲ: ಪಟ್ಟಣದಲ್ಲಿ 23 ವಾರ್ಡ್ಗಳಿವೆ. ಸಾಕಷ್ಟು ಕನಸು ಕಟ್ಟಿಕೊಂಡು ಜನಸೇವೆ ಮಾಡಬಹುದು ಎಂಬ ಆಸೆಗಣ್ಣಿನಿಂದ ಗೆದ್ದು ಬಂದವರು ಸಹ ಜನರ ಸೇವೆಯನ್ನು ಮಾಡಲಾಗದ ಪರಿಸ್ಥಿತಿಯಿಂದ ಬಹುತೇಕ ಸದಸ್ಯರು ಸಹ ತಮ್ಮ ವಾರ್ಡ್ಗಳಿಗೆ ಹೋಗಲು ಹಿಂಜರಿಯುತ್ತಾರೆ. ಮಾಗಡಿ ಪುರಸಭೆಯ ಕಚೇರಿಗೆ ನಿತ್ಯ ನೂರಾರು ಮಂದಿ ಪುರನಾಗರಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಬರುತ್ತಾರೆ. ಕಳೆದ ಒಂದೆರಡು ತಿಂಗಳಿನಿಂದ ಮುಖ್ಯಾಧಿಕಾರಿಗಳಿಲ್ಲದೆ, ತಮ್ಮ ದಾಖಲೆಗಳ ತಿದ್ದುಪಡಿ, ಸರಿಪಡಿಸಿಕೊಂಡು ಈ-ಖಾತೆ ಪಡೆಯಲು ಒಂದು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದರೂ ದಾಖಲೆ ಸಿಕ್ಕಿಲ್ಲ.
ಕುಡಿಯುವ ನೀರಿನ ಸಮಸ್ಯೆ: ಮಾಗಡಿ ಪಟ್ಟಣದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಯಾಗದೆ ಪ್ರಮುಖವಾಗಿ ನೀರಿನ ಸಮಸ್ಯೆ ಜನರು ಎದುರಿಸುತ್ತಿದ್ದಾರೆ. ಮಂಚನಬೆಲೆ ಜಲಾಶಯ ದಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಯಾಗುತ್ತಿದೆ. ಆದರೆ, ಜಲಾಶಯದ ಬಳಿ ಇರುವ ಶುದ್ಧೀಕರಣ ಘಟಕದಲ್ಲಿ ನೀರನ್ನು ಶುದ್ಧೀಕರಿಸುತ್ತಿಲ್ಲ. ಜತೆಗೆ ಪೈಪ್ ಹೊಡೆದು ಹೋಗುತ್ತಿದ್ದು, ತಾಂತ್ರಿಕ ಸಮಸ್ಯೆಯಿಂದ ನೀರು ಪೂರೈಕೆ ಮಾಡುತ್ತಿಲ್ಲ ಎಂಬ ಆರೋಪವಿದೆ. ಹೀಗಾಗಿ, ಪಟ್ಟಣದ ಜನರು ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಶುದ್ಧ ನೀರು ಪೂರೈಕೆ ಆಗದಿದ್ದರೂ, ನೀರಿನ ತೆರಿಗೆ ವಸೂಲಿ ಮಾತ್ರ ನಿಂತಿಲ್ಲ ಎಂದು ನಾಗರಿಕರ ಆರೋಪವಾಗಿದೆ.
ಪುರಸಭೆ ಮುಖ್ಯಾಧಿಕಾರಿ ನೇಮಕಕ್ಕೆ ಆಗ್ರಹ : ಮನೆಕಟ್ಟಲು, ಸಾಲ ಪಡೆಯಲೋ, ಮಕ್ಕಳ ಮದುವೆ ಮಾಡಲೋ, ನಿವೇಶನ ಖರೀದಿಸಲೋ ಅವರಿಗೆ ತುರ್ತು ಹಣದ ಅವಶ್ಯಕತೆ ಇರುತ್ತದೆ. ಆದರೆ, ಸರಿಯಾದ ಸಮಯಕ್ಕೆ ತಮ್ಮ ಸ್ವತ್ತಿನ ದಾಖಲೆಗಳು ಮತ್ತು ಲೈಸೆನ್ಸ್ ಸಿಗದೆ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರೂ, ಜವಾಬ್ದಾರಿಯುತ ಪುರಸಭೆ ಅಧ್ಯಕ್ಷರಾಗಲಿ, ಶಾಸಕ ಎ. ಮಂಜುನಾಥ್ ಆಗಲಿ, ಜಿಲ್ಲಾ ಉಸ್ತವಾರಿ ಸಚಿವರಾಗಲಿ ಇತ್ತ ಗಮನಹರಿಸಿ ಪುರಸಭೆಗೆ ಮುಖ್ಯಾಧಿಕಾರಿ ನೇಮಕ ಮಾಡುವ ಮೂಲಕ ಪುರನಾಗರಿಕರ ಸಮಸ್ಯೆಗಳ ನಿವಾರಣೆ ಹಾಗೂ ಪಟ್ಟಣದ ಅಭಿವೃದ್ಧಿಗೆ ಮುಂದಾಗದೆ ಇರುವುದು ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಸದ್ಯಕ್ಕೆ ಮ್ಯಾನೇಜರ್ಗೆ ಇನ್ಚಾರ್ಜ್ ಕೊಡಲಾಗಿದೆ. ಇ-ಖಾತೆ ಲೈಸೆನ್ಸ್ ಕೊಡಲು ಮುಖ್ಯಾಧಿಕಾರಿ ಸಹಿ ಬೇಕಿರುತ್ತದೆ. ಶಾಸಕರು ಬೇರೆಯವರ ನೇಮಕಕ್ಕೆ ಪತ್ರ ಕೊಟ್ಟಿದ್ದಾರೆ. ಶೀಘ್ರದಲ್ಲೇ ಮಾಗಡಿಗೆ ಹೊಸ ಮುಖ್ಯಾಧಿಕಾರಿ ಬರಲಿದ್ದಾರೆ. ಕುಡಿಯುವ ನೀರು, ಒಳಚರಂಡಿ ಹಾಗೂ ಬೀದಿದೀಪದ ಸಮಸ್ಯೆಗಳಿದ್ದು, ಎಲ್ಲವನ್ನು ಸರಿಪಡಿಸುವ ಕೆಲಸಕ್ಕೆ ಶಾಸಕರು ಚಾಲನೆ ನೀಡಲಿದ್ದಾರೆ. -ವಿಜಯಾರೂಪೇಶ್, ಪುರಸಭೆ ಅಧ್ಯಕ್ಷೆ
ಬಸವರಾಜು ಎನ್ನುವವರು ಮಾಗಡಿ ಪುರಸಭೆ ವರ್ಗಾ ವಣೆಯಾಗಿತ್ತು. ಅವರು ಕೆಲ ಕಾರಣದಿಂದ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದಾರೆ. ಮಾಗಡಿ ಪುರಸಭೆಗೆ ಇನ್ನೊಂದು ವಾರದಲ್ಲಿ ಮುಖ್ಯಾಧಿಕಾರಿ ಬರಲಿದ್ದಾರೆ. – ಎ.ಮಂಜುನಾಥ್, ಮಾಗಡಿ ಶಾಸಕ
ಪಟ್ಟಣದ ಬಹುತೇಕ ಕಡೆಗಳಲ್ಲಿ ಬೀದಿದೀಪ ಊರಿಯುತ್ತಿಲ್ಲ, ದೀಪಗಳು ಕೆಟ್ಟಿದ್ದರೂ ಅಳವಡಿಸದೆ ಇರುವುದರಿಂದ ಜನರು ಕತ್ತಲ್ಲಲ್ಲಿ ಓಡಾಡುವಂತಾಗಿದೆ. ಒಳಚರಂಡಿ, ತ್ಯಾಜ್ಯ ವಿಲೇವಾರಿ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಮತ್ತೂಷ್ಟು ಸಮಸ್ಯೆ ಉಲ್ಬಣಗೊಳ್ಳುವ ಮುನ್ನ ಆದಷ್ಟು ಬೇಗ ಮುಖ್ಯಾಧಿಕಾರಿ ನೇಮಕ ಆಗಬೇಕಿದೆ. – ಗೋವಿಂದರಾಜು, ಸ್ಥಳೀಯ ನಾಗರಿಕ
– ತಿರುಮಲೆ ಶ್ರೀನಿವಾಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ
MUST WATCH
ಹೊಸ ಸೇರ್ಪಡೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!