ಮಾವು ಸಂಸ್ಕರಣಾ ಘಟಕಕ್ಕೆ ಕೊನೆಗೂ ಮುಕ್ತಿ

ಭೈರಾಪಟ್ಟಣ ಫಾರಂನಲ್ಲಿ ಸಂಸ್ಕರಣಾ ಘಟಕ ,ಸ್ಥಳ ಗುರುತಿಸಿ ಫಾರಂ ಪ್ರಾರಂಭಿಸಲು ಅಗತ್ಯ ಸಿದ್ಧತೆ

Team Udayavani, Nov 26, 2020, 12:59 PM IST

ಮಾವು ಸಂಸ್ಕರಣಾ ಘಟಕಕ್ಕೆ ಕೊನೆಗೂ ಮುಕ್ತಿ

ಚನ್ನಪಟ್ಟಣದ ತಾಲೂಕಿನಬೈರಾಪಟ್ಟಣಗ್ರಾಮದಲ್ಲಿರುವ ತೋಟಗಾರಿಕೆ ಫಾರಂ.

ಚನ್ನಪಟ್ಟಣ: ಜಾಗದ ವಿವಾದದಿಂದಾಗಿ ಭ್ರೂಣಾವಸ್ಥೆಯಲ್ಲೇ ನಲುಗುತ್ತಿದ್ದ ಮಾವು ಸಂಸ್ಕರಣಾ ಘಟಕಕ್ಕೆ ಕೊನೆಗೂ ಮುಕ್ತಿ ದೊರೆತಿದೆ. ಇದೀಗ ಬದಲಿ ಜಾಗಹುಡುಕುವಲ್ಲಿ ಜಿಲ್ಲಾಡಳಿತ ಹಾಗೂ ತೋಟಗಾರಿಕಾ ಇಲಾಖೆ ಸಫಲಗೊಂಡಿದೆ.

ಮಾವು ಸಂಸ್ಕರಣಾ ಘಟಕ ಸ್ಥಾಪನೆಯಾಗಬೇಕು ಎಂಬುದು ಜಿಲ್ಲೆಯ ಮಾವು ಬೆಳೆಗಾರರ ಬಹುದಿನಗಳ ಬೇಡಿಕೆಯಾಗಿತ್ತು. ಸ್ಪಂದಿಸಿದ ಎಚ್‌.ಡಿ.ಕುಮಾರಸ್ವಾಮಿ ತಾವು ಮುಖ್ಯಮಂತ್ರಿಯಾಗಿದ್ದಾಗ ಮಂಡಿಸಿದ ಚೊಚ್ಚಲ ಬಜೆಟ್‌ನಲ್ಲಿ ಕಣ್ವ ಬಳಿ ಮಾವು ಸಂಸ್ಕರಣಾ ಘಟಕ ಮಂಜೂರು ಮಾಡಿ ಆದೇಶ ಹೊರಡಿಸಿದ್ದರು.

ಜಾಗದ ಗೊಂದಲದಿಂದ ಕಗ್ಗಂಟು: ರೇಷ್ಮೆ ಇಲಾಖೆಗೆ ಸೇರಿದ್ದ 15 ಎಕರೆ ಭೂಮಿಯನ್ನು ಮಾವು ಸಂಸ್ಕರಣಾ ಘಟಕಕ್ಕೆ ಹಸ್ತಾಂತರಿಸುವ ಪ್ರಯತ್ನ ನಡೆದಿತ್ತಾದರೂ, ಪಿಡಬ್ಲ್ಯುಡಿ ಮತ್ತು ರೇಷ್ಮೆ ಕೃಷಿ ಇಲಾಖೆ ನಡುವೆ ಜಾಗಕ್ಕೆಸಂಬಂಧಿಸಿದಂತೆ ಇದ್ದ ಗೊಂದಲದಿಂದಾಗಿ ಹಸ್ತಾಂತರ ಸಾಧ್ಯವಾಗದೆ ಯೋಜನೆ ನಲುಗುತ್ತಿತ್ತು. ಬಳಿಕ ರಾಮನಗರ ತಾಲೂಕಿನ ಕೃಷ್ಣಾಪುರ ದೊಡ್ಡಿ ಬಳಿ ಇರುವ ರೇಷ್ಮೆ ಕೃಷಿ ಕ್ಷೇತ್ರಕ್ಕೆ ಸ್ಥಳಾಂತರಿಸಲು ಜಿಲ್ಲಾಡಳಿತ ಮುಂದಾಗಿತ್ತು. ಆದರೆ, ಕೃಷ್ಣಾಪುರ ದೊಡ್ಡಿ ಗ್ರಾಮದ ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಮಿಶ್ರತಳಿ ರೇಷ್ಮೆ ಗೂಡಿನ ಬಿತ್ತನೆಯನ್ನು ತಯಾರಿಸುವ ಜತೆಗೆ ವಿವಿಧ ರೇಷ್ಮೆ ಕೃಷಿಗೆ ಸಂಬಂಧಿಸಿದ ಸಂಶೋಧನೆಗಳನ್ನು ನಡೆಸುತ್ತಿದ್ದ ಕಾರಣ ಇಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪಿಸಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಈ ಜಾಗದಲ್ಲಿ ಮಾವು ಸಂಸ್ಕರಣಾ ಘಟಕಕ್ಕೆ ಗ್ರಹಣಹಿಡಿದಿತ್ತು.

ಬೈರಾಪಟ್ಟಣದಲ್ಲಿ ನಿರ್ಮಾಣಕ್ಕೆ ಅಸ್ತು: ಕೊನೆಗೂ ತಾಲೂಕಿನ ಬೈರಾಪಟ್ಟಣದಲ್ಲಿ ಮಾವುಸಂಸ್ಕರಣಾ ಘಟಕಸ್ಥಾಪಿಸುವ ನಿರ್ಧಾರಕ್ಕೆ ಜಿಲ್ಲಾಡಳಿತ ಮತ್ತು ತೋಟಗಾರಿಕಾ ಇಲಾಖೆ ಮುಂದಾಗಿದೆ. ಬೈರಾಪಟ್ಟಣಗ್ರಾಮದಸರ್ವೇನಂಬರ್‌ 1019/8 ರಲ್ಲಿ ತೋಟಗಾರಿಕಾ ಇಲಾಖೆಗೆ 50 ಎಕರೆ ಭೂಮಿಯನ್ನು ನೀಡಲಾಗಿದ್ದು,ಈ ಜಾಗದಲ್ಲಿ 15 ಎಕರೆ ಭೂಮಿಯನ್ನು ನೀಡಲು ತೋಟಗಾರಿಕಾ ಇಲಾಖೆ ಸಚಿವರು ಮತ್ತು ಜಂಟಿ ನಿರ್ದೇಶಕರು ಒಪ್ಪಿದ್ದಾರೆ.ಈಗಾಗಲೇ ಸರ್ವೇ ಕಾರ್ಯ ನಡೆಸಿದ್ದು, ಸಿದ್ಧತೆಗಳೂ ಆರಂಭವಾಗಿವೆ.

ತೆಂಗಿನ ಗಿಡಗಳಿಗೆ ಬೇಡಿಕೆ: ತೋಟಗಾರಿಕಾ ಪಿತಾಮಹ ಎಂದು ಕರೆಯಲಾಗುವ ಎಂ.ಎಚ್‌.ಮರೀಗೌಡರ ಪರಿಶ್ರಮದಿಂದಾಗಿ ಹಣ್ಣಿನ ಗಿಡವನ್ನು ಪರಿಚಯಿಸುವ ಉದ್ದೇಶದಿಂದ ಸೀಬೆ ಗಿಡಗಳನ್ನು ನೆಡಲಾಯಿತು. ಸೀಬೆ ಗಿಡಗಳು ಸಾಕಷ್ಟು ಹಳೆಯದಾದ ಕಾರಣ ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಕಳೆದು ಕೊಂಡ ಪರಿಣಾಮ ಗಿಡಗಳನ್ನು ತೆರವು ಗೊಳಿಸಲಾಗಿದ್ದು, ಇದೀಗ ಸುಮಾರು 50 ವರ್ಷಗಳಷ್ಟು ಹಳೆಯದಾದ 950 ಸಪೋಟ ಮರಗಳು ಇವೆ. 3ರಿಂದ7ಲಕ್ಷ ರೂ. ವರೆಗೆ ತೋಟಗಾರಿಕಾ ಇಲಾಖೆಗೆ ಅದಾಯ ಬರುತ್ತಿದೆ. ಆದರೆ, ನಿರ್ವಹಣೆಗೆ ಇದಕ್ಕಿಂತ ಹೆಚ್ಚುಹಣ ಖರ್ಚಾಗುತ್ತಿದೆ. ಉಳಿದಂತೆ ಇತ್ತೀಚಿಗೆ ತೆಂಗು ಗಿಡಗಳ ನರ್ಸರಿ ಕಾರ್ಯ ಆರಂಭಿಸಿದ್ದು ಇಲ್ಲಿನ ತೆಂಗಿನ ಗಿಡಗಳಿಗೆ ಉತ್ತಮ ಬೇಡಿಕೆ ಸಹ ಇದೆ.

ಮಾವು ಬೆಳೆಗಾರರಿಗೆ ಅನುಕೂಲ: ಈಗಾಗಲೇ ಹಳೆಯದಾಗಿರುವ ಸಪೋಟ ಫಾರಂನಿಂದಾಗಿ ರೈತರಿಗೆ ಯಾವುದೇ ಉಪಯೋಗವಾಗುತ್ತಿಲ್ಲ. ತೆಂಗಿನ ನರ್ಸರಿ ಉಳಿಸಿಕೊಂಡು ಸಪೋಟ ಫಾರಂ ತೆರವು ಗೊಳಿಸಿಮಾವು ಸಂಸ್ಕರಣಾ ಘಟಕ ಆರಂಭಿಸುವುದಕ್ಕೆ ಸ್ಥಳೀಯವಾಗಿ ಯಾವುದೇ ವಿರೋಧವಿಲ್ಲ. ಹೀಗಾಗಿ ಮಾವು ಸಂಸ್ಕರಣಾ ಘಟಕ ಆರಂಭಿಸುವುದು ರೈತರಿಗೆ ಹೆಚ್ಚು ಅನುಕೂಲವಾಗಲಿದೆ.

ರೈತರಿಗೆ ವರದಾನ : ರಾಜ್ಯದಲ್ಲಿ ಕೋಲಾರ ಹೊರತು ಪಡಿಸಿದರೆ ಅತಿಹೆಚ್ಚು ಮಾವು ಬೆಳೆಯುವ ಜಿಲ್ಲೆ ಎಂಬ ಹೆಗ್ಗಳಿಕೆ ರಾಮನಗರ ಜಿಲ್ಲೆಗಿದೆ. ಜಿಲ್ಲೆಯಲ್ಲಿ 22 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಪ್ರತಿವರ್ಷ ಸರಿಸುಮಾರು5ಲಕ್ಷ ಟನ್‌ಗೂ ಹೆಚ್ಚು ಮಾವು ಉತ್ಪಾನೆಯಾಗುತ್ತಿದೆ. ಆಂಧ್ರಪ್ರದೇಶ ಚಿತ್ತೂರಿನಲ್ಲಿ ಬೃಹತ್‌ ಸಂಸ್ಕರಣಾಘಟಕವಿದ್ದು, ಈ ಭಾಗದ ಹಣ್ಣು ಬಹುತೇಕ ಅಲ್ಲಿಗೆ ಸರಬರಾಜಾಗುತ್ತದೆ.ಕೆಲವು ಉದ್ಯಮಿಗಳು ಮುಂಬೈಗೂ ಸರಬರಾಜು ಮಾಡುತ್ತಾರೆ. ಸಂಸ್ಕರಣಾ ಘಟಕವನ್ನು ಆರಂಭಿಸಿದಲ್ಲಿ ಮಾವಿನ ಉತ್ಪನ್ನದ ಮೌಲ್ಯವರ್ಧನೆಯಾಗುವ ಮೂಲಕ ರೈತರಿಗೆ ಅನುಕೂಲವಾಗಲಿದೆ.

ಭೈರಾಪಟ್ಟಣ ಫಾರಂ ಸಾಕಷ್ಟು ಹಳೆಯದಾಗಿದ್ದು,ಇದರಿಂದಾಗಿ ರೈತರಿಗೆ ಅನುಕೂಲವಾಗುತ್ತಿಲ್ಲ.ಈ ಜಾಗದಲ್ಲಿ ಮಾವು ಸಂಸ್ಕರಣಾಘಟಕ ಆರಂಭಿಸುವಕ್ರಮ ಸೂಕ್ತವಾಗಿದೆ. ಇದರಿಂದಾಗಿಈ ಭಾಗದ ಮಾವು ಬೆಳೆಗಾರರಿಗೆ ಲಾಭದಾಯವಾಗಲಿದೆ. ರಾಮಚಂದ್ರಯ್ಯ, ನಿವೃತ್ತ ತೋಟಗಾರಿಕೆ ಅಧಿಕಾರಿ, ಚನ್ನಪಟ್ಟಣ

ಸ್ಥಳೀಯರಿಗೆ ಉದ್ಯೋಗ ಸಿಗುವುದಾದರೆ ಮಾವು ಸಂಸ್ಕರಣಾ ಘಟಕ ಸ್ಥಾಪನೆಯಾಗುವುದನ್ನು ಸ್ವಾಗತಿಸುತ್ತೇವೆ. ಮಾವು ಸುಗ್ಗಿಕಾಲದಲ್ಲಿಸಿಗುವಹಣ್ಣಾಗಿದ್ದು, ಉಳಿದಅವಧಿಯಲ್ಲಿ ಬೇರೆಹಣ್ಣು ತರಕಾರಿಗಳ ಸಂಸ್ಕರಣೆಗೆ ಒತ್ತು ನೀಡುವ ರೈತರಿಗೆ ಅನುಕೂಲಮಾಡಲಿ. ಸಂತೋಷ್‌ ಭೈರಾಪಟ್ಟಣ, ಜೆಡಿಎಸ್‌ ವಕ್ತಾರ

 

ಎಂ.ಶಿವಮಾದು

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.