ಪಾದಯಾತ್ರೆ: ಡಿಕೆಶಿ, ಸಿದ್ದರಾಮಯ್ಯ, ಖರ್ಗೆ, ದುನಿಯಾ ವಿಜಯ್ ಸೇರಿ 31 ಜನರ ವಿರುದ್ಧ ಎಫ್ಐಆರ್
Team Udayavani, Jan 10, 2022, 3:12 PM IST
ರಾಮನಗರ: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಆರಂಭಿಸಿರುವ ಪಾದಯಾತ್ರೆ ವೇಳೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ ಹಿನ್ನಲೆಯಲ್ಲಿ ಇಲ್ಲಿನ ಪೊಲೀಸರು 31 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಕೋವಿಡ್ ನಿಯಮ ಉಲ್ಲಂಘಿಸಿ ಪಾದಯಾತ್ರೆ ನಡೆಸಿದ ಆರೋಪ ಹೊರೆಸಲಾಗಿದೆ. ಕನಕಪುರ ತಾಲೂಕಿನ ಸಾತನೂರು ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಕನಕಪುರ ತಹಶೀಲ್ದಾರ್ ವಿಶ್ವನಾಥ್ ದೂರು ಕೊಟ್ಟಿದ್ದಾರೆ.
ಇದನ್ನೂ ಓದಿ:ಪಾದಯಾತ್ರೆಯಿಂದ ಜನಕ್ಕೆ ನೀರು ಸಿಗಲ್ಲ, ಕೋವಿಡ್ ಸಿಗುತ್ತದೆ: ಸಚಿವ ಈಶ್ವರಪ್ಪ
ಎ1 ಡಿ.ಕೆ.ಶಿವಕುಮಾರ್, ಎ2 ಸಿದ್ದರಾಮಯ್ಯ, ಎ3 ಡಿ.ಕೆ.ಸುರೇಶ್,ಎ 4ವೀರಪ್ಪ ಮೊಯ್ಲಿ, 5ಮಲ್ಲಿಕಾರ್ಜುನ ಖರ್ಗೆ, 6 ಪರಮೇಶ್ವರ್, 7 ಈಶ್ವರ್ ಖಂಡ್ರೆ, 8ಉಮಶ್ರೀ, 9 ಬಿ.ಕೆ.ಹರಿಪ್ರಸಾದ್ 10 ಎಂ.ಬಿ.ಪಾಟೀಲ್,11 ರಾಮಲಿಂಗರೆಡ್ಡಿ, 12 ಎಸ್ ರವಿ 13 ಟಿ.ಬಿ.ಜಯಚಂದ್ರ. 14 ಹೆಚ್.ಎಂ.ರೇವಣ್ಣ 15 ಸಲೀಂ ಅಹಮದ್ 16 ಎನ್.ಎ. ಹ್ಯಾರಿಸ್ 17 ಲಕ್ಷ್ಮಿ ಹೆಬ್ಬಾಳ್ಕರ್ 18 ವಿನಯ್ ಕುಲಕರ್ಣಿ 19 ಪ್ರಿಯಾಂಕಾ ಖರ್ಗೆ 20 ಯತಿಂದ್ರ ಸಿದ್ದರಾಮಯ್ಯ ಸೇರಿದಂತೆ ಸಾಧು ಕೋಕಿಲ, ದುನಿಯಾ ವಿಜಯ್ ಸೇರಿ 31 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.