ಕರಡಿ ದಾಳಿಗೆ ಗರ್ಭಿಣಿ ಸಾವು
Team Udayavani, Jan 19, 2018, 6:10 AM IST
ಕನಕಪುರ: ಆಕೆ 9 ತಿಂಗಳ ಗರ್ಭಿಣಿ. ಇನ್ನು 8 ದಿನದಲ್ಲಿ ಆಕೆಯ ಮನೆಯಲ್ಲಿ ತೊಟ್ಟಿಲು ತೂಗಬೇಕಿತ್ತು. ಮನೆ ಮಂದಿಯೆಲ್ಲಾ ಹೊಸ ಕಂದನ ಬರುವಿಕೆಗಾಗಿ ಕಾತುರದಿಂದ ಕಾಯುತ್ತಿದ್ದರು. ಆದರೆ, ಗುರುವಾರ ಬಹಿರ್ದೆಸೆಗೆ ಹೋದವಳು ಕರಡಿ ದಾಳಿಗೆ ಸಿಲುಕಿ ಬಲಿಯಾದಳು. ಜೊತೆಗೆ ಇನ್ನೇನು ಪ್ರಪಂಚ ನೋಡಬೇಕಿದ್ದ ಶಿಶು ಕೂಡ ತಾಯಿಯ ಒಡಲನ್ನು ಸೇರಿಕೊಂಡಿತ್ತು.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಚೌಕಸಂದ್ರದ ಪ್ರದೀಪಕುಮಾರ್ ನಾಯಕ್ ಎಂಬುವರ ಪತ್ನಿ ಸುಮಾಬಾಯಿ(26) ಎಂಬ ಗರ್ಭಿಣಿ ಗುರುವಾರ ಬೆಳಗಿನ ಜಾವ ತಮ್ಮ ಮನೆಯ ಹಿಂದೆ ಬಹಿರ್ದೆಸೆಗೆ ತೆರಳಿದ್ದರು. ಈ ವೇಳೆ, ಕರಡಿ ಏಕಾಏಕಿ ದಾಳಿ ನಡೆಸಿತು. ಕುತ್ತಿಗೆ, ಕಿವಿ ಸೇರಿದಂತೆ ದೇಹದ ಇತರ ಭಾಗಗಳನ್ನು ಗಾಯಗೊಳಿಸಿತು. ತೀವ್ರ ರಕ್ತಸ್ರಾವದಿಂದ ನರಳುತ್ತಾ ಆಕೆ ಚೀರಾಟ ನಡೆದಳು.
ಇದನ್ನು ಕೇಳಿಸಿಕೊಂಡ ಪತಿ ಪ್ರದೀಪಕುಮಾರ್ ನಾಯಕ್ ಸ್ಥಳಕ್ಕೆ ಓಡಿ ಬಂದರು. ಅಷ್ಟೋತ್ತಿಗಾಲೇ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿತ್ತು. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ದಿನೇಶ್ ಭೇಟಿ ನೀಡಿ, 5 ಲಕ್ಷ ರೂ.ಪರಿಹಾರವನ್ನು ಸರ್ಕಾರದಿಂದ
ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ