ಶೀಘ್ರ ಮೂಲಸೌಕರ್ಯ ಅಭಿವೃದ್ಧಿ
Team Udayavani, Jun 9, 2020, 7:12 AM IST
ಮಾಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನ್ಯಾಕ್ಗೆ ಒಳಪಟ್ಟಿದ್ದು, ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು ಎಂದು ಶಾಸಕ ಎ.ಮಂಜುನಾಥ್ ಭರವಸೆ ನೀಡಿದರು. ಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಲೇಜು ನ್ಯಾಕ್ಗೆ ಒಳಪಟ್ಟಿರುವುದರಿಂದ ಸಂಸ್ಥೆಯಿಂದ ಅತಿಹೆಚ್ಚು ಅಂಕಗಳಿಸಬೇಕಿದೆ. ಸಂಸ್ಥೆಯನ್ನು “ಎ’ ಶ್ರೇಣಿಗೆ ಕೊಂಡೊಯ್ಯಲು ಪೂರಕ ಅಧ್ಯಯನ ಕೇಂದ್ರ, ಸೆಮಿನಾರ್ ಹಾಲ್, ಪೀಠೊಪಕರಣ, ಕಂಪ್ಯೂಟರ್, ಇ- ಗ್ರಂಥಾಲಯ ಸೇವೆ ಸೇರಿ ಅಗತ್ಯ ಸೌಲಭ್ಯ ಒದಗಿಸಬೇಕಿದೆ. ಗ್ರಂಥಾಲಯದ 3,600 ಪುಸ್ತಕ ಗಣಕೀಕರಣಗೊಳಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು.
ಮಾಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು 1,250 ವಿದ್ಯಾ ರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಾವೆಲ್ಲರೂ ಸೇರಿ ಕಾಲೇಜು ಅಭಿವೃದ್ಧಿಗೆ ಶ್ರಮಿಸೋಣ ಎಂದರು. ಬೇಡಿಕೆ ಈಡೇರಿಸಿ: ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಜೆರಾಕ್ಸ್ ಯಂತ್ರ, 4 ಪ್ರಿಂಟರ್ಗಳು, ಕ್ಯಾಂಟಿನ್, ಕಾಂಪೌಂಡ್, ಉದ್ಯಾನವನದ ಅಗತ್ಯವಿದೆ. ಶಾಸಕ ಎ.ಮಂಜು ನಾಥ್, ಕಾಲೇಜು ಅಭಿವೃದ್ಧಿಗೆ ಮನಸು ಮಾಡ ಬೇಕು.
ಸಿಡಿಸಿ ಸದಸ್ಯರು, ಮುಖಂಡರು, ದಾನಿಗಳು ಕೈಜೋಡಿಸಲು ಪ್ರಾಂಶುಪಾಲೆ ಶೈಲಜಾ ಮನವಿ ಮಾಡಿದರು. ಪ್ರಾಧ್ಯಾಪಕ ಜಗದೀಶ್ ನಡುವಿನಮಠ ಮಾತನಾಡಿದರು. ಸಿಡಿಸಿ ಸಮಿತಿ ಸದಸ್ಯ ಕೆ.ಕೃಷ್ಣ ಮೂರ್ತಿ, ಕೆ.ವಿ.ಬಾಲರಘು, ರಮೇಶ್, ರಾಜು, ಟಿ.ಜಿ.ವೆಂಕಟೇಶ್, ಖಂಡಪರಶು, ಪ್ರಾಧ್ಯಾಪಕ ಮಂಜುನಾಥ್, ಮಂಚಯ್ಯ, ಗುರುಮೂರ್ತಿ, ಪಿ.ನಂಜುಂಡ, ನವೀನ್ ಕುಮಾರ್, ಚಲುವ ರಾಜು, ಚಿದಾನಂದಸ್ವಾಮಿ, ಡಾ.ಭವಾನಿ, ಸೀಮಾ ಕೌಶಿರ್, ಜಿ.ವಿ. ಚಂದ್ರಪ್ರಭಾ, ಸುಷ್ಮಾ ಗ್ರಂಥಪಾಲಕಿ ರೂಪಶ್ರೀ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್