ನಿತ್ಯ ನರಕದಲ್ಲಿ ಇರುಳಿಗರ ಬದುಕು
ಮಳೆ ಗಾಳಿಗೆ ಹಾರಿಹೋಗುವ ಗುಡಿಸಲು ಮಕ್ಕಳು, ಮಹಿಳೆಯರ ಗೋಳು ಕೇಳ್ಳೋರಿಲ್ಲ
Team Udayavani, Nov 11, 2021, 5:49 PM IST
ರಾಮನಗರ: ಗುಡಿಸಲು ರಹಿತ ಗ್ರಾಮಗಳನ್ನು ಮಾಡ್ತೇವೆ ಎಂದು ಭರವಸೆ ಕೊಟ್ಟು ನಂತರ ಮರೆ ಯುವ ಜನಪ್ರತಿನಿಧಿಗಳು, ಅಧಿಕಾರಿಗಳ ಸಂಖ್ಯೆಗೇನು ಕಡಿಮೆಯಿಲ್ಲ. ಹೀಗೆ ಕೇವಲ ಭರವಸೆಯೊಂದಿಗೆ ಗುಡಿಸಿಲಿನಲ್ಲೇ ಬದುಕು ನೂಕುತ್ತಿರುವ 20ಕ್ಕೂ ಹೆಚ್ಚು ಇರುಳಿಗರ ಕುಟುಂಬಗಳ ವ್ಯಥೆಕಥೆ ಇದು.
ತಾಲೂಕಿನ ಕೂಟಗಲ್ ಗ್ರಾಮದ ಬಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ಗುಂಡು ತೋಪಿನಲ್ಲಿ ತಾತ್ಕಾಲಿಕವಾಗಿ ತೆಂಗಿನ ಮರದ ಗರಿಯಲ್ಲಿ ನಿರ್ಮಿಸಲಾದ ಗುಡಿಸಲುಗಳಲ್ಲಿ ವಾಸಿಸುತ್ತಿರುವ ಕುಟುಂಬಗಳ ನೆರವಿಗೆ ತಾಲೂಕು ಆಡಳಿತವಾಗಲಿ, ಜಿಪಂ ಆಗಲಿ ಧಾವಿಸಿಲ್ಲ. ಇಲ್ಲಿ ವಾಸಿಸುತ್ತಿರುವ ಮಹಿಳೆ ಯರು ಶೌಚಕ್ಕೆ ಹೋಗಲು ಕತ್ತಲು ಆವರಿಸಬೇಕು. ಸ್ನಾನ ಮಾಡಲು ತೆಂಗಿನಗರಿಗಳ ಮರೆ ಸಾಲದು, ಹೀಗಾಗಿ ಸೀರೆ ಕಟ್ಟಿಕೊಂಡು ಸಾನ್ನ ಮಾಡಬೇಕಾದ ಪರಿಸ್ಥಿತಿ. ಈ ಧಾರುಣ ಸ್ಥಿತಿ ಸಂಬಂಧಿಸಿದ ಅಧಿಕಾರಿಗಳಿಗೆ ಅರಿವಿದೆ. ಆದರೆ ಈ ಕುಟುಂಬಗಳಿಗೆ ಆಸರೆಯಾಗಿ ನಿಲ್ಲುವ ಮನಸ್ಸು ಮಾಡಿಲ್ಲವಷ್ಟೆ.
ಸೌದೆ ಮಾರಿಕೊಂಡು ಜೀವನ: ಕಳೆದ ಮೂವತ್ತು – ನಲವತ್ತು ವರ್ಷಗಳಿಂದ ಕೂಲಿ ಮಾಡಿಕೊಂಡು, ಇಲ್ಲವೆ ಸೌದೆ ಮಾರಿಕೊಂಡು ಜೀವನ ನಡೆಸುತ್ತಿರುವ ಕುಟುಂಬಗಳು ಇಲ್ಲಿ ವಾಸವಿದೆ. ಮನೆ ಕಟ್ಟಿಸಿ ಕೊಡಿ ಎಂದು ಹಲವು ಬಾರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇದುವರೆಗೂ ಅವರಿಗೆ ನಿವೇಶನ ಮತ್ತು ಸೂರಿನ ಭಾಗ್ಯ ದೊರೆಯದೆ ಇರುವುದು ದುರ್ದೈವದ ಸಂಗತಿ.
ದಾಖಲೆಯಿದೆ, ನೆಲೆಯಿಲ್ಲ: “ನಮ್ಮೆಲ್ಲರ ಬಳಿ ಚುನಾವಣೆ ಗುರುತಿನ ಚೀಟಿ, ಬಿಪಿಎಲ… ಕಾರ್ಡ್, ಆಧಾರ ಕಾರ್ಡ್ಗಳು ಇವೆ, ಪ್ರತಿ ಭಾರಿ ಚುನಾವಣೆ ಬಂದಾಗ ಮಾತ್ರ ಎಲ್ಲ ಪಕ್ಷದ ಜನಪ್ರತಿನಿಧಿಗಳು ನಮ್ಮ ಬಳಿ ಬಂದು ಮತಯಾಚಿಸುತ್ತಾರೆ.
ಇದನ್ನೂ ಓದಿ:- ಸಮನ್ವಯದಿಂದ ಕರ್ತವ್ಯ ನಿರ್ವಹಿಸಿ
ನಿವೇಶನ, ಮನೆಯ ಭರವಸೆ ಕೊಡುತ್ತಾರೆ. ನಂತರ ಮರೆತು ಹೋಗುತ್ತಿದ್ದಾರೆ ಎಂದು ಇರುಳಿಗ ಸಮುದಾಯದ ಬೋರಮ್ಮ, ಮುನಿಯಮ್ಮ, ಕೆಂಚಯ್ಯ, ಮುನಿಯಮ್ಮ ದೂರುತ್ತಾರೆ. ಶೌಚಾಲಯಗಳು ಇಲ್ಲದಿರುವುದರಿಂದ ಮಹಿಳೆ ಯರು ಮಲ, ಮೂತ್ರ ವಿಸರ್ಜನೆಗೆ ರಾತ್ರಿಯಾಗುವವರೆಗೂ ಕಾಯಬೇಕು. ಜನರ ಕಣ್ಣು ತಪ್ಪಿಸಿ ಹೊಳೆ ಬಳಿಗೆ ಓಡಬೇಕು ಎಂದು ನೊಂದು ನುಡಿದಿದ್ದಾರೆ.
ಮಳೆ ಬಂದರೆ ಯಾತನೆ!: 23ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸವಾಗಿವೆ. ಇವರು ತೆಂಗಿನ ಗರಿಯಿಂದ ಗುಡಿಸಲನ್ನು ನಿರ್ಮಿಸಿಕೊಂಡಿ¨ªಾರೆ. ತಗ್ಗು ಪ್ರದೇಶವಾದ್ದರಿಂದ ಮಳೆ ಬಂದರೆ ಗುಡಿಸಲುಗಳಿಗೆ ನೀರು ನುಗ್ಗುತ್ತದೆ. ಮಕ್ಕಳನ್ನು ಜೋಪಾನ ಮಾಡಿ ಪಾತ್ರೆ, ಬಟ್ಟೆ, ಆಹಾರ ಪದಾರ್ಥಗಳು ಹಾನಿಯಾಗದಂತೆ ಎಚ್ಚರವ ಹಿಸಿ ಜಾಗರಣೆ ಮಾಡಬೇಕಾದ ಪರಿಸ್ಥಿತಿ ಕುಟುಂಬಗಳ ಹಿರಿಯರದ್ದು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಮೂರ್ನಾಲ್ಕು ಗುಡಿಸಲುಗಳು ನೆಲಕ್ಕುರಿಳಿವೆ.
ಇಲ್ಲಿ ನೆಲೆಸಿದ್ದು ಯಾಕೆ?: ರತ್ನಗಿರಿ ಎಂಬಾತ ಪ್ರತಿಕ್ರಿಯಿಸಿ, ತಾತ, ಅಪ್ಪ ಕಾಡಿನಲ್ಲಿ ವಾಸವಾಗಿದ್ದರು.ಅರಣ್ಯ ಇಲಾಖೆ ಒಕ್ಕಲೆಬ್ಬಿಸಿದಾಗ ಬಂದ ನಾವು 40 ವರ್ಷಗಳಿಂದ ಇಲ್ಲೇ ನೆಲೆಸಿದ್ದೇವೆ. ಈ ಜಾಗ ಕೂಟಗಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ್ದು ಎಂದು ಹೇಳುತ್ತಿದ್ದಾರೆ. ನೆಲೆಯಿಲ್ಲದ ನಮಗೆ ಆಡಳಿತಾಧಿಕಾರಿಗಳು ಸೂರಿ ಕಲ್ಪಿಸಿ ಬದುಕಿಗೆ ದಾರಿ ತೋರಿಸಿ ಅಂತಾರೆ ಸಂತ್ರಸ್ತರು.
ಅರಣ್ಯ ಪ್ರದೇಶವೇ ಸಾಕು: ಈ ಕುಟುಂಬಗಳ ಬಗ್ಗೆ ಕಾಳಜಿವಹಿಸಿರುವ ಸಂಶೋಧನಾ ವಿದ್ಯಾರ್ಥಿ ಎಸ್.ರು ದ್ರೇಶ್ವರ ಪತ್ರಿಕೆಯೊಂದಿಗೆ ಪ್ರತಿಕ್ರಿಯಿಸಿ ಇಲ್ಲಿ ವಾಸಿಸುವ ಕುಟುಂಬಗಳಿಗೆ ತಾಲೂಕು ಮತ್ತು ಜಿಲ್ಲಾಡಳಿತ ಉಚಿತವಾಗಿ ಭೂಮಿ ಕೊಟ್ಟು ಮನೆ ನಿರ್ಮಿಸಿಕೊಳ್ಳಲು ಸಹಕಾರ ಕೊಡಬೇಕು. ಯರೇಹಳ್ಳಿ ಗ್ರಾಮದ ಸರ್ವೆ ನಂಬರ್ 43ರಲ್ಲಿ ನಿವೇಶನ ಕೊಡಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ. ತಾಲೂಕು ಆಡಳಿತ ಮತ್ತು ಜಿಪಂ ಅಧಿಕಾರಿಗಳು ತಕ್ಷಣ ಈ ಕುಟುಂಬಗಳ ರಕ್ಷಣೆಗೆ ಬರಬೇಕಾಗಿದೆ.
ಜಮೀನು ಮಂಜೂರಾತಿ ವಿಳಂಬ
ವನವಾಸಿ ಕಲ್ಯಾಣ ಸಂಘಟನೆ ಜಿಪಂ ಸಿಇಒ ಅವರಿಗೆ ಮಾಡಿದ ಮನವಿಯಲ್ಲಿ ಯರೇಹಳ್ಳಿ ಸರ್ವೆ ಸಂಖ್ಯೆ 43ರಲ್ಲಿ 2.30 ಎಕರೆ ಜಮೀನನ್ನು ಕುಟುಂಬಗಳಿಗೆ ಮಂಜೂರು ಮಾಡಲು ಆದೇಶ ಸಿಕ್ಕಿಲ್ಲ ಎಂದು ದೂರಿದ್ದರು. ಈ ಕುರಿತು ಜಿಪಂ ಸಿಇಒ ಅವರು ಕೂಟಗಲ್ ಗ್ರಾಪಂ ಪಿಡಿಒ ಅವರಿಗೆ ಪತ್ರ ಬರೆದಿದ್ದು, ವನವಾಸಿ ಕಲ್ಯಾಣ ಸಂಘಟನೆ ಮನವಿ ಬಗ್ಗೆ ಪರಿಶೀಲಿಸಿ ಸದರಿ ಸರ್ವೆ ನಂ.43ರಲ್ಲಿ ಸುಮಾರು 175.00 ಎ/ಗುಂಟೆ ಇದ್ದು ಸದರಿ ಇರುವ ಜಮೀನಿನಲ್ಲಿ ಆಶ್ರಯ ನಿವೇಶನಕ್ಕೆ 5.00 ಎ/ಗುಂಟೆ ಜಮೀನು ಮಂಜೂರಾತಿಗೆ ಕ್ರಮಕೈಗೊಂಡು ಹಾಗೂ ಕ್ರಮದ ಬಗ್ಗೆ ಈ ಕಚೇರಿಗೆ ಮಾಹಿತಿ ಸಲ್ಲಿಸಲು ಸಿಇಒ ಅವರು ಸೂಚನೆಯನ್ನು 2021ರ ಜುಲೈನಲ್ಲೇ ಪತ್ರ ಬರೆದಿದ್ದಾರೆ. ಆದರೆ ಪಂಚಾಯ್ತಿ ವತಿಯಿಂದ ಇಲ್ಲಿಯವರೆಗೂ ವರದಿ ಹೋಗಿಲ್ಲ ಎಂಬ ದೂರುಗಳು ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ