Wild Elephant; ಮಾಗಡಿ: ಒಂಟಿ ಸಲಗ ಹಾವಳಿಗೆ ರೈತರು ಕಂಗಾಲು
Team Udayavani, Mar 9, 2024, 11:47 AM IST
ಮಾಗಡಿ: ಒಂಟಿ ಸಲಗದ ಹಾವಳಿಯಿಂದಾಗಿ ರೈತರು ಕಂಗಾಲಾಗಿದ್ದಾರೆ.
ಮಾಗಡಿ ತಾಲೂಕಿನ ಸಿಂಗದಾಸನಹಳ್ಳಿಯ ನಿವಾಸಿ ನರಸೇಗೌಡರ ಎಂಬ ರೈತರೊಬ್ಬರ ತೋಟಕ್ಕೆ ನುಗ್ಗಿರುವ ಒಂಟಿ ಸಲಗ ತೋಟದ ಗೇಟ್ ಮುರಿದು ತೆಂಗಿನ ಫಸಲು ಮತ್ತು ಬಾಳೆ ಗಿಡ ನಾಶ ಮಾಡಿದೆ.
ಇದರ ಪರಿಣಾಮ ರೈತ ಕಷ್ಟಪಟ್ಟು ಬೆಳೆದ ತೆಂಗು-ಬಾಳೆ ಬೆಲೆ ಕೈಗೆ ಬಾರದ ತುತ್ತಾಗಿದೆ. ಈ ಒಂಟಿ ಸಲಗದ ಸಂಚಾರದಿಂದ ರೈತರು ತಮ್ಮ ಹೊಲ-ಗದ್ದೆ ತೋಟಗಳಿಗೆ ಹೋಗಲಾರದ ಪರಿಸ್ಥಿತಿ ಎದುರಿಸುವಂಥಾಗಿದೆ.
ಅರಣ್ಯ ಇಲಾಖೆ ಒಂಟಿ ಸಲಗವನ್ನು ದೂರದ ಕಾಡಿಗೆ ಓಡಿಸಲು ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಇದರಿಂದ ರೈತರ ಸಾಕಷ್ಟು ಬೆಳೆಗಳು ನಷ್ಟವಾಗುವ ಸಂಭವವಿದ್ದು, ರೈತರು ಆತಂಕಗೀಡಾಗಿದ್ದಾರೆ.
ಕರ್ಲಮಂಗಲ ಗುಡ್ಡಳ್ಳಿಯ ಗಂಗಣ್ಣ ಎಂಬವರ ತೋಟಕ್ಕೂ ಒಂಟಿ ಸಲಗ ಲಗ್ಗೆ ಇಟ್ಟಿದ್ದು, ಅಡಿಕೆ ಗಿಡವನ್ನು ದ್ವಂಸ ಮಾಡಿದೆ. ಮಾವಿನ ಗಿಡಗಳ ಕೊಂಬೆ, ರೆಂಬೆಗಳನ್ನು ಮುರಿದಿದೆ. ಅದು ಮಾತ್ರವಲ್ಲದೇ ಹಲಸಿನ ಮರಕ್ಕೂ ಒಂಟಿ ಸಲಗ ಲಗ್ಗೆ ಇಡುತ್ತಿದೆ.
ಕಾಡಿನಲ್ಲಿ ನೀರು, ಮೇವು ಇಲ್ಲದ ಕಾರಣ ಒಂಟಿ ಸಲಗ ಗ್ರಾಮಗಳಲ್ಲಿ ಎಲ್ಲೆಡೆ ಸಂಚರಿಸುತ್ತಿದೆ. ಇದರಿಂದ ರೈತರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಆಗುವ ಅನಾಹುತ ತಪ್ಪಿಸಲು ಒಂಟಿ ಸಲಗವನ್ನು ಕಾಡಿಗೆ ಓಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರೈತರು ಮನವಿ ಮಾಡಿ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ
MUST WATCH
ಹೊಸ ಸೇರ್ಪಡೆ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ