ಶಿಕ್ಷಣದಿಂದ ಮನಸ್ಸಿನ ಶ್ರೀಮಂತಿಕೆ ಹೆಚ್ಚಳ: ಡಾ| ರುದ್ರವಾರ
ಜಾಕನಪಲ್ಲಿ ರಂಗ ಶಿಕ್ಷಣ ಕಾರ್ಯ ಇನ್ನೂ ಹೆಚ್ಚಲಿ
Team Udayavani, Jul 8, 2019, 3:52 PM IST
ಸೇಡಂ: ಜಾಕನಪಲ್ಲಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಪಾಸಾದ ಮತ್ತು ಮೈಸೂರು ರಂಗಾಯಣಕ್ಕೆ ರಂಗಶಿಕ್ಷಣ ಪಡೆಯಲು ಆಯ್ಕೆಯಾದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಸೇಡಂ: ವಿದ್ಯಾರ್ಥಿಗಳು ಸೋಮಾರಿಯಾಗದೆ ಮನಸ್ಸಿನ ಶ್ರೀಮಂತಿಕೆ ವೃದ್ಧಿಸಿಕೊಳ್ಳಲು ಶಿಕ್ಷಣ ಪಡೆಯಬೇಕು ಎಂದು ಮನಶಾಸ್ತ್ರಜ್ಞ ಡಾ| ವೆಂಕಟರೆಡ್ಡಿ ರುದ್ರವಾರ ಹೇಳಿದರು.
ತಾಲೂಕಿನ ಜಾಕನಪಲ್ಲಿ ಗ್ರಾಮದ ಗ್ರಂಥಾಲಯದಲ್ಲಿ ತಿಂಗಳ ಸಂಜೆ ವೇದಿಕೆ ಮತ್ತು ನಾನು-ನಮ್ಮೂರು ಶಾಲಾ ಮಕ್ಕಳ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎಸ್ಸೆಸ್ಸೆಲ್ಸಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಮತ್ತು ಮೊಟ್ಟ ಮೊದಲ ಬಾರಿಗೆ ಜಾಕನಪಲ್ಲಿ ಗ್ರಾಮದಿಂದ ಮೈಸೂರು ರಂಗಾಯಣಕ್ಕೆ ರಂಗಶಿಕ್ಷಣ ಪಡೆಯಲು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಕರು ಹೇಳುವ ಪಾಠವನ್ನು ಮೊದಲೇ ಓದಿಕೊಂಡು ಹೋಗಬೇಕು. ವೇಗವಾಗಿ, ಸರಳವಾಗಿ, ಪೂರ್ಣವಾಗಿ ಓದಬೇಕು. ಹೊಸ ಪದಗಳನ್ನು ತಿಳಿದುಕೊಳ್ಳಬೇಕು. ಚರ್ಚಿಸುವುದು, ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜುಗಳಿಗೆ ಹೊದಾಗ ಮಾತ್ರ ಯಶಸ್ವಿ ವಿದ್ಯಾರ್ಥಿಯಾಗಲು ಸಾಧ್ಯ ಎಂದು ಹೇಳಿದರು.
ತಾಲೂಕ ಕ.ರ.ವೇ ಅಧ್ಯಕ್ಷ ರಾಮಚಂದ್ರ ಗುತ್ತೇದಾರ ಮಾತನಾಡಿ, ಜಾಕನಪಲ್ಲಿಯಲ್ಲಿ ನಡೆಯುವ ರಂಗಶಿಕ್ಷಣದ ಚಟುವಟಿಕೆಗಳು ರಾಜ್ಯದ ತುಂಬೆಲ್ಲ ಸುದ್ದಿಗಳಾಗಿವೆ. ಇದೇ ರೀತಿ ನಿಮ್ಮ ಕೆಲಸಗಳು ನಿರಂತರಾಗಿರಲಿ, ಯಶಸ್ಸು ನಿಮ್ಮದಾಗುತ್ತದೆ ಎಂದರು.
ಗ್ರಾಮ ಪಂಚಾಯತಿ ಸದಸ್ಯ ಚಂದ್ರಶೇಖರ ರೆಡ್ಡಿ ಆಡಕಿ, ಜಾಕನಪಲ್ಲಿ ಸಾರ್ವಜನಿಕ ಗ್ರಂಥಾಲಯದ ಗ್ರಂಥಪಾಲಕ ವೆಂಕಟಪ್ಪ ಜೋಗಿ, ಎಸ್ಡಿಎಂಸಿ ಅಧ್ಯಕ್ಷ ವೆಂಕಟರಾಮರೆಡ್ಡಿ ಚಿಟೇಲಿ, ನಾಟಕ ಶಿಕ್ಷಕ ಅಶೋಕ ತೊಟ್ನಳ್ಳಿ, ತಿಂಗಳ ಸಂಜೆ ವೇದಿಕೆ ಅಧ್ಯಕ್ಷ ಸಿದ್ಧಯ್ಯ ಸ್ವಾಮಿ ಮಠಪತಿ ಇದ್ದರು.
ಮೈಸೂರು ರಂಗಾಯಣದ ರಂಗಶಿಕ್ಷಣ ತರಬೇತಿಗೆ ಆಯ್ಕೆಯಾದ ಸಿದ್ಧಪ್ಪ ತಳವಾರ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ಪಾಸಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಅಶೋಕ ತೊಟ್ನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಶ್ರೀ ಪಾಟೀಲ ನಿರೂಪಿಸಿದರು, ಸಿದ್ಧಪ್ಪ ತಳವಾರ ಸ್ವಾಗತಿಸಿದರು, ನವಿರೆಡ್ಡಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalburgi: ಕರೆಂಟ್ ಶಾಕ್ ಪ್ರಕರಣ;ಖಂಡಿಸಿ ಹಿಂದೂ ಜಾಗೃತಿ ಸೇನೆಯಿಂದ ಸರಕಾರದ ಪ್ರತಿಕೃತಿ ದಹನ
Kalaburagi: ಹಣಕ್ಕಾಗಿ ಮೂವರ ವಿವಸ್ತ್ರಗೊಳಿಸಿ ಗುಪ್ತಾಂಗಕ್ಕೆ ಶಾಕ್!: 7 ಮಂದಿ ಸೆರೆ
Revenge: 13 ವರ್ಷದ ಬಾಲಕಿ ಕುತ್ತಿಗೆಗೆ ಚೂರಿ ಇರಿತ ! ಅತ್ಯಾಚಾರಕ್ಕೆ ಅತ್ಯಾಚಾರದ ಪ್ರತಿಕಾರ?
Chincholi: ಸಿಡಿಲು ಬಡಿದು ಕೂಲಿ ಕಾರ್ಮಿಕ ಮಹಿಳೆ ಮೃತ್ಯು,ಪುತ್ರನಿಗೆ ಗಂಭೀರ ಗಾಯ
Kalaburagi; ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆ
MUST WATCH
ಹೊಸ ಸೇರ್ಪಡೆ
Malpe Beach: ಸೆ.15ರ ವರೆಗೆ ಪ್ರವಾಸೀ ಬೋಟ್ ಚಟುವಟಿಕೆ ಸ್ಥಗಿತ
Uppinangady: ಬರಿದಾಗಿದೆ ನೇತ್ರಾವತಿ ನದಿಯ ಒಡಲು
“ಉದಯವಾಣಿ’ ವರದಿಗೆ ಸಹೃದಯಿಗಳ ವ್ಯಾಪಕ ಸ್ಪಂದನೆ ; ಧನ್ಯಾ ಕಲಿಕೆಗೆ ದಾನಿಗಳ ನೆರವು
Kangana Ranaut ಬಳಿ 4.5 ಕೋಟಿ ಮೌಲ್ಯದ 50 ಪಾಲಿಸಿ: ಅಫಿದವಿತ್
ಪರವಾನಿಗೆದಾರರ ಕಷ್ಟಕ್ಕೆ ಸ್ಪಂದಿಸಿದ ನ್ಯಾಯಾಲಯ; ಚುನಾವಣೆ ಸಂದರ್ಭ ಕೋವಿ ಠೇವಣಿ ಬೇಕಿಲ್ಲ