Holehonnur: ಜಮೀನು ವಿವಾದ; 300 ಅಡಿಕೆ ಗಿಡಗಳನ್ನು ಕಿತ್ತು ಹಾಕಿದ ಸಹೋದರರು
Team Udayavani, Sep 2, 2023, 3:42 PM IST
ಹೊಳೆಹೊನ್ನೂರು: ಜಮೀನಿನಲ್ಲಿ ಹೊಸದಾಗಿ ನಾಟಿ ಮಾಡಿದ 300 ಅಡಿಕೆ ಗಿಡಗಳನ್ನು ಕಿತ್ತು ಹಾಕಿರುವ ಬಗ್ಗೆ ಆನವೇರಿಯ ರೈತ ಲೊಕೇಶಪ್ಪ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆನವೇರಿಯ ಲೊಕೇಶಪ್ಪ ಜಂಗರಮನಹಳ್ಳಿ ತಮಗೆ ಸೇರಿದ ಅರ್ಧ ಎಕರೆ ಜಮೀನಿನಲ್ಲಿ ಕಳೆದ ಒಂದು ತಿಂಗಳ ಹಿಂದೆ 300 ಅಡಿಕೆ ಸಸಿಗಳನ್ನು ನೆಟ್ಟಿದ್ದರು.
ಅಡಿಕೆ ಗಿಡ ನೆಟ್ಟು ನಂತರ ಕ್ಯಾತೆ ತೆಗೆದಿರುವ ಅದೇ ಗ್ರಾಮದ ರಫೀಕ್ ಹಾಗೂ ಅವರ ಸಹೋದರ ಫಯಾಜ್ ಲೋಕೇಶಪ್ಪ ಜೊತೆ ಜಗಳವಾಡಿ ಅವರ ಎದುರೆ ಗಿಡಗಳನ್ನು ಕಿತ್ತುಹಾಕಿ ಹಲ್ಲೆಗೆ ಮುಂದಾಗಿದ್ದರು ಎನ್ನಲಾಗುತ್ತಿದೆ. ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದವರು ಜಗಳ ಬಿಡಿಸಿ ಕಳಿಸಿದ್ದಾರೆ.
ಇದೇ ಜಮೀನಿನ ವಿಚಾರ ಕೆಲ ದಿನಗಳ ಹಿಂದೆ ಗ್ರಾಮ ಮುಖಂಡರೊಬ್ಬರ ಸಮ್ಮುಖದಲ್ಲಿ ರಾಜಿ ಸಂದಾನ ಏರ್ಪಟ್ಟಿತ್ತು ಎನ್ನಲಾಗಿದೆ. ವಿವಾದ ತೀರ್ಮಾನದ ನಂತರ ಲೊಕೇಶಪ್ಪನ ಲಕ್ಷಾಂತರ ರೂ. ಸಾಲ ಮಾಡಿ ಜಮೀನು ಸಮತಟ್ಟು ಮಾಡಿಸಿಕೊಂಡು ಅಡಿಕೆ ಸಸಿಗಳನ್ನು ನೆಟ್ಟಿದ್ದರು.
ಗುರುವಾರ ರಾತ್ರಿ ರಫೀಕ್ ಹಾಗೂ ಫಯಾಜ್ ಸಹೋದರರು ಲೊಕೇಶಪ್ಪನ ತೋಟಕ್ಕೆ ನುಗ್ಗಿ 300 ಅಡಿಕೆ ಸಸಿಗಳನ್ನು ಕಿತ್ತು ಹಾಕಿದ್ದಾರೆ. ಇದರ ಪರಿಣಾಮ ತಮಗೆ ತಮ್ಮ ಜಮೀನು ಉಳಿಸಿಕೊಡಿ ಎಂದು ಲೊಕೇಶಪ್ಪ ಪೊಲೀಸ್ ಠಾಣೆ ಮೊರೆ ಹೋಗಿದ್ದಾರೆ.
ತಮಗೆ ಇಬ್ಬರಿಂದ ಜೀವ ಬೆದರಿಕೆ ಇದೆ ಹಾಗೂ ಅಡಿಕೆ ಗಿಡ ನಾಶವಾಗಿರುವ ನಷ್ಟವನ್ನು ತುಂಬಿಸಿಕೊಡುವಂತೆ ಲೋಕೇಶಪ್ಪನವರು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು