ವಿಐಎಸ್ಎಲ್ ವಸತಿಗೃಹಗಳ ಬಾಡಿಗೆ ದರ ಇಳಿಕೆ
Team Udayavani, Aug 11, 2020, 1:36 PM IST
ಭದ್ರಾವತಿ: ವಿಐಎಸ್ಎಲ್ ಆಡಳಿತ ಮಂಡಳಿ ನಿವೃತ್ತ ಕಾರ್ಮಿಕರ ವಾಸಕ್ಕೆ ನೀಡಿರುವ ವಾಸದ ಮನೆಗಳ ಬಾಡಿಗೆಯನ್ನು ಪ್ರತಿಶತ ನೂರರಷ್ಟು ಏರಿಸಿರುವುದನ್ನುಕೈಬಿಟ್ಟು ಅದನ್ನು ಶೇ. 50ರಷ್ಟು ಇಳಿಸಬೇಕೆಂದು ಸಂಸದ ಬಿ.ವೈ. ರಾಘವೇಂದ್ರ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಕೆ.ಎಲ್. ರಾವ್ ಅವರೊಂದಿಗೆ ಮಾತನಾಡಿದರು.
ಸೋಮವಾರ ಇಲ್ಲಿಗೆ ಆಗಮಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿದ ಅವರು, ಕೋವಿಡ್ ಸಂಕಷ್ಟದ ಈ ಸ್ಥಿತಿಯಲ್ಲಿ ಬಾಡಿಗೆ ಹೆಚ್ಚಿಸಿರುವ ಕ್ರಮ ಸರಿಯಲ್ಲ. ಕೂಡಲೇ ಹೆಚ್ಚಿಸಿರುವ ಬಾಡಿಗೆ ಆದೇಶವನ್ನು ಹಿಂದೆ ಪಡೆಯುವಂತೆ ಅವರು ಅಧಿಕಾರಿಗಳಿಗೆ ಹೇಳಿದರು. ಸಂಸದರ ಮಾತಿಗೆ ಒಪ್ಪಿದ ಆಡಳಿತ ಮಂಡಳಿ ಹೆಚ್ಚಿಸಿರುವ ಬಾಡಿಗೆಯ ಆದೇಶವನ್ನು ಹಿಂದೆ ಪಡೆಯುವ ಕುರಿತು ಪರಿಶೀಲಿಸುವ ಭರವಸೆ ನೀಡಿದೆ. ಈ ಸಂದರ್ಭದಲ್ಲಿ ಹಾಜರಿದ್ದ ಕಾರ್ಮಿಕರೊಂದಿಗೆ ಸಂಸದರು ಅನೌಪಚಾರಿಕವಾಗಿ ಮಾತನಾಡಿ, ವಿಐಎಸ್ ಎಲ್ ಕಾರ್ಖಾನೆಗೆ ತಕ್ಷಣಕ್ಕೆ ಅಗತ್ಯವಾದ ಸುಮಾರು 20 ಕೋಟಿ ಬಂಡವಾಳ ಹೂಡುವ ಬಗ್ಗೆ ಸೈಲ್ ಚೇರ್ಮನ್ ಅವರ ಬಳಿ ಮಾತನಾಡಲಾಗಿದೆ. ಎಂಪಿಎಂ ಕಾರ್ಖಾನೆ ಪುನಶ್ಚೇತನ ಕುರಿತಂತೆ ಖಾಸಗಿಯವರ ಸಹಬಾಗಿತ್ವದಲ್ಲಿ ಪುನರಾರಂಭ ಮಾಡುವ ಚರ್ಚೆ ಪ್ರಗತಿಯಲ್ಲಿದೆ ಎಂದರು.
ವಿಐಎಸ್ ಎಲ್ ಕಾರ್ಖಾನೆಯ ಮುಖ್ಯ ವ್ಯವಸ್ಥಾಪಕ ವಿಶ್ವನಾಥ್, ನಿವೃತ್ತ ಕಾರ್ಮಿಕ ಮುಖಂಡರಾದ ಹನುಮಂತರಾವ್, ರಾಮಲಿಂಗಯ್ಯ, ನರಸಿಂಹಮೂರ್ತಿ, ಎಸ್.ಎನ್. ಬಾಲಕೃಷ್ಣ, ಚಂದ್ರಹಾಸ, ಕಾರ್ಮಿಕ ಮುಖಂಡರಾದ ಜಗದೀಶ್, ಅಮೃತ್, ಬಿಜೆಪಿ ಮುಖಂಡರಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮಪ್ರಸಾದ್, ಮಂಡಲ ಅಧಕ್ಷ ಪ್ರಭಾಕರ್, ಕದಿರೇಶ್, ಮಂಗೋಟೆ ರುದ್ರೇಶ್, ಮಂಜುನಾಥ್ ಕದಿರೇಶ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ