ನಾವೇನು ರಾಮನ ಭಕ್ತರಲ್ವಾ? ಪ್ರಚೋದನಕಾರಿ ಹೇಳಿಕೆ ನೀಡುವವರನ್ನು ಜೈಲಿಗೆ ಹಾಕಿ: ಕುಮಾರಸ್ವಾಮಿ
Team Udayavani, Apr 22, 2022, 3:13 PM IST
ಶಿವಮೊಗ್ಗ: ಲೌಡ್ ಸ್ಪೀಕರ್ ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ಪ್ರತಿಯೊಬ್ಬರು ನಡೆದುಕೊಳ್ಳಬೇಕು. ಆದೇಶದ ವಿರುದ್ದ ಕೆಲವು ಸಂಘಟನೆಗಳು ಕೆಲಸ ಮಾಡುತ್ತವೆ. ಆ ಬಗ್ಗೆ ಮಾಧ್ಯಮದ ಎದುರು ಹೇಳಿಕೆ ಕೊಡುವವರನ್ನು ಮೊದಲು ಅರೆಸ್ಟ್ ಮಾಡಬೇಕು. ಇವರೆಲ್ಲಾ ಚಿಲ್ಲರೆ ಪುಂಡರು, ಇವರೆಲ್ಲಾ ಸಮಾಜ ಕಟ್ಟುವವರಾ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾವೇನು ರಾಮನ ಭಕ್ತರಲ್ವಾ, ಏನು ಇವರೊಬ್ಬರೇ ಗುತ್ತಿಗೆ ಪಡೆದಿದ್ದಾರಾ. ರಾಮ ಈ ರೀತಿ ಕೆಲಸ ಮಾಡಿ ಅಂತಾ ಹೇಳಿದ್ದನೆ? ಪ್ರಚೋದನಕಾರಿ ಹೇಳಿಕೆ ಕೊಡುವವರನ್ನು ಮೊದಲು ಜೈಲಿಗೆ ಹಾಕಬೇಕು. ಆಗ ಸಮಾಜ ನೆಮ್ಮದಿಯಿಂದ ಇರುತ್ತದೆ ಎಂದರು.
ರಾಜ್ಯದಲ್ಲಿ ಕಳೆದ ಒಂದೂವರೆ ಎರಡು ತಿಂಗಳಿನಿಂದ ಅಹಿತಕರ ಘಟನೆ ನಡೆಯುತ್ತಿವೆ. ಸರಕಾರ ಬಿಗಿ ಕ್ರಮ ಕೈಗೊಳ್ಳಬೇಕಿದೆ. ಪ್ರಾರಂಭಿಕ ಹಂತದಲ್ಲೇ ಹಲವು ಬಾರಿ ಸರಕಾರಕ್ಕೆ ಸಲಹೆ ಕೊಟ್ಟಿದ್ದೆ. ಸರಕಾರದ ನಿರ್ಲಕ್ಷ್ಯ ಮನೋಭಾವನೆ ಸಹ ಘಟನೆಗೆ ಕಾರಣ. ಅಹಿತಕರ ಘಟನೆಗೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.
ಸಮಾಜದ ಎಲ್ಲಾ ವರ್ಗದಲ್ಲೂ ವಿಶ್ವಾಸದ ಕೊರತೆ ಕ್ಷೀಣಿಸುವ ವಾತಾವರಣ ಕಾಣುತ್ತಿದೆ. ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟದ ಸಂದೇಶದ ಕಲ್ಪನೆ ನಶಿಸಿ ಪ್ರತಿನಿತ್ಯ ಕಲುಷಿತ ವಾತಾವರಣ ನಿರ್ಮಾಣವಾಗುತ್ತಿದೆ. ಇದು ಇನ್ನು ಒಂದು ವರ್ಷಗಳ ಕಾಲ ಇರಲಿದೆಯೆಂದು ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯೇ ಹೇಳಿದ್ದೆ. ಹುಬ್ಬಳ್ಳಿ ಘಟನೆಯಲ್ಲಿ ಜೀಪ್ ಮೇಲೆ ನಿಂತು ಉದ್ರೇಕಗೊಳಿಸಿದ ವ್ಯಕ್ತಿಯನ್ನು ಮೊದಲು ಹಿಡಿಯಿರಿ ಎಂದಿದ್ದೆ. ನಿನ್ನೆ ಆ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದರು.
ಇದನ್ನೂ ಓದಿ:ಕೋವಿಡ್ ಸೋಂಕು: ದೆಹಲಿ, ಹರ್ಯಾಣ, ಯುಪಿ ಬಳಿಕ ಇದೀಗ ತಮಿಳುನಾಡಿನಲ್ಲೂ ಮಾಸ್ಕ್ ಕಡ್ಡಾಯ
ರಾಜ್ಯದಲ್ಲಿ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬಿಜೆಪಿಯವರು ಬೆಂಕಿ ಹಚ್ಚುತ್ತಿದ್ದಾರೆ. ಕಾಂಗ್ರೆಸ್ ನವರು ಅದಕ್ಕೆ ಪೆಟ್ರೋಲ್ ಸುರಿಯುತ್ತಿದ್ದಾರೆ. ಇದಕ್ಕೆ ನಾಡಿನ ಜನತೆ ಅವಕಾಶ ಕೊಡದೇ ಎಚ್ಚೆತ್ತುಕೊಳ್ಳಬೇಕು. ಈ ವಿಷಯದಲ್ಲಿ ಏನು ಸತ್ಯಾಂಶವನ್ನು ಸರಕಾರ ಪ್ರಾಮಾಣಿಕವಾಗಿ ಜನತೆ ಮುಂದೆ ಇಡಬೇಕು ಎಂದರು.
ರಾಜ್ಯದಲ್ಲಿ ಪ್ರತಿನಿತ್ಯ ಕಾಣದ ಕೈಗಳ ಚಿತಾವಣೆ ನಡೆದುಕೊಂಡು ಹೋದರೆ ಮುಂದೆ ನಮ್ಮ ರಾಜ್ಯದ ಗತಿ ಏನು? ಡಿ.ಜೆ.ಹಳ್ಳಿ ಪ್ರಕರಣಕ್ಕೆ ಯಾರು ಕಾರಣಕರ್ತರು. ಪ್ರಮುಖವಾದ ವ್ಯಕ್ತಿಗಳಿಗೆ ಅಂತಿಮವಾದ ಶಿಕ್ಷೆ ಏನಾದರೂ ಕೊಟ್ಟಿದ್ದೀರಾ. ಆರಾಮವಾಗಿ ಓಡಾಡಿಕೊಂಡು, ಒಂದು ಪಕ್ಷದ ಅಧ್ಯಕ್ಷರ ಜೊತೆ ಓಡಾಡಿಕೊಂಡಿದ್ದಾರೆ. ಅಮಾಯಕರನ್ನು ತೆಗೆದುಕೊಂಡು ಹೋಗಿ ಜೈಲಿಗೆ ಹಾಕಿದ್ದಾರೆ. ಘಟನೆಯಲ್ಲಿ ಸರಕಾರದ ವೈಫಲ್ಯವಿದೆ. ಹಿಜಾಬ್ ಘಟನೆ ಆರಂಭವಾದ ದಿನದಿಂದ ಇಂದಿನವರೆಗೆ ಸರಕಾರದಲ್ಲೂ ಕಾಣದ ಕೈ ಆದೇಶದ ಮೇರೆಗೆ ಕೆಲಸ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.
ಪರ್ಸಂಟೆಜ್ ಕುರಿತು ಕೇಜ್ರಿವಾಲ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆ ವೇದಿಕೆಯಲ್ಲಿ ಕ್ರೇಜಿವಾಲ್ ಅಕ್ಕಪಕ್ಕ ನಿಲ್ಲಿಸಿಕೊಂಡಿದ್ದವರನ್ನುಕಟ್ಟಿಕೊಂಡು ರಾಜ್ಯದಲ್ಲಿ ಜೀರೋ ಪರ್ಸಂಟ್ ಸರಕಾರ ತರಲು ಸಾಧ್ಯವೇ? ರಾಜ್ಯದಲ್ಲಿ ಆಮ್ ಆದ್ಮಿ ಬಂದು ಏನು ಮಾಡುತ್ತದೆ. ಹಲವು ಕೆಲಸ ಕೊಟ್ಟ ನಮ್ಮ ಕೈಯಲ್ಲಿ ಏನು ಮಾಡಲಾಗಲಿಲ್ಲ. ಇನ್ನು ದೆಹಲಿಯಿಂದ ಬಂದು ಏನು ಮಾಡಲಾಗುತ್ತದೆ. ದೆಹಲಿಯ ರಾಜಕೀಯವೆ ಬೇರೆ, ರಾಜ್ಯದ ರಾಜಕೀಯವೆ ಬೇರೆ ಎಂದರು.
ಈ ಸರಕಾರ ಬಂದ ಮೇಲೆ 100 ಕ್ಕೆ 65 ರೂಪಾಯಿ ಮಧ್ಯವರ್ತಿಗಳಿಗೆ ಹೋಗ್ತಿದೆ. ಕೇವಲ 40 ಪರ್ಸೆಂಟ್ ಅಲ್ಲ 65 ಪರ್ಸೆಂಟ್ ಹೋಗುತ್ತೆ. 35 ಪರ್ಸೆಂಟ್ ಕೆಲಸ ಅಗಬಹುದು. ಇದು ಎಲ್ಲವನಿಗೂ ಗೊತ್ತಿರುವ ವಿಷಯ. ಗುತ್ತಿಗೆದಾರರು ಒಂದು ವರ್ಷ ಕೆಲಸ ನಿಲ್ಲಿಸಿದರೆ ಸರಿ ಹೋಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್