ತಾರಗೊಳ್ಳಿ ನಾಗರಾಜ ರಾಯರ ಮನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ
Team Udayavani, Aug 8, 2021, 5:04 PM IST
ತೀರ್ಥಹಳ್ಳಿ: ಚಿಕ್ಕ ವಯಸ್ಸಿನಲ್ಲಿ ಬಡತನ ಕಷ್ಟದಲ್ಲಿದ್ದ ಜ್ಞಾನೇಂದ್ರ ರವರಿಗೆ ಸಂಕಷ್ಟದ ಸಮಯದಲ್ಲಿ ಅನ್ನ, ಆಶ್ರಯ ನೀಡಿ ಸಂಘಟನೆಯ ಸಹಕಾರದಿಂದ ಜನನಾಯಕನಾಗಿ ರೂಪಿಸಿದ ತಾರಗೊಳ್ಳಿ ನಾಗರಾಜರಾಯರನ್ನು ಸನ್ಮಾನ್ಯ ಆರಗ ಜ್ಞಾನೇಂದ್ರರವರು ಪದೇ ಪದೇ ಎಲ್ಲ ವೇದಿಕೆಗಳಲ್ಲೂ ಸ್ಮರಿಸಿಕೊಳ್ಳುತ್ತಾರೆ.
ಇದನ್ನೂ ಓದಿ : ಯಾವುದರಲ್ಲಿ ಹೊಡಿತಾರೋ ಅದರಲ್ಲಿಯೇ ಹೊಡೆದು ಒಂದಕ್ಕೆ ಎರಡು ತೆಗೆದುಬಿಡಿ: ಈಶ್ವರಪ್ಪ
ಇಂದು(ಭಾನುವಾರ, ಆಗಸ್ಟ್ 8) ಬೆಳಿಗ್ಗೆ ತಮ್ಮ ಗುಡ್ಡೆಕೊಪ್ಪದ ಮನೆಯ ಎದುರು ಯಾರೂ ನಿರೀಕ್ಷಿಸದೇ ಇರುವ ಖಾತೆ ಪಡೆದಿರುವ ಸಚಿವರಾದ ಸಂತಸದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಅಭಿನಂದನೆ ತಿಳಿಸಲು ಬಂದಿದ್ದು ಗುಡ್ಡೇಕೊಪ್ಪದಿಂದ ಜೈಪುರದವರೆಗೆ ರಸ್ತೆಯ ಎರಡೂ ಬದಿಗಳು ವಾಹನದಿಂದ ಕೂಡಿತ್ತು ಆದರೆ ಆರಗ ಜ್ಞಾನೇಂದ್ರರವರು ಮೊದಲು ತಾನು ಈ ಎತ್ತರಕ್ಕೆ ಬೆಳೆಯಲು ಕಾರಣವಾಗಿದ್ದ ತನ್ನ ಪಾಲಿನ ದೇವರು ತಾರಗೊಳ್ಳಿ ನಾಗರಾಜರಾಯರ ಮನೆಗೆ ತೆರಳಿ ದಂಪತಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ನಂತರ ಗೃಹಸಚಿವರು ನಾಗರಾಜರಾಯರ ಕುಟುಂಬಸ್ಥರೊಂದಿಗೆ ಕುಶಲೋಪರಿ ವಿಚಾರಿಸಿದರು.
ತಮ್ಮ ಕುಟುಂಬದ ಹಿರಿಯರ ಉಪಕಾರವನ್ನು ಗೃಹಸಚಿವರಾದ ಸಂದರ್ಭದಲ್ಲೂ ಮರೆಯದೇ ತಾನು ಬೆಳೆದ ಮನೆಗೆ ಆಗಮಿಸಿದ ಗೃಹ ಸಚಿವ ಜ್ಞಾನೇಂದ್ರರವರನ್ನು ಕುಟುಂಬದ ಸದಸ್ಯರು ಬಹಳ ಸಂತೋಷದಿಂದ ಸಚಿವರನ್ನು ಅಭಿನಂದಿಸಿದರು.
ಇದನ್ನೂ ಓದಿ : ನಿಮ್ಮ ಭಾವನೆಯ ಆ ಮೂರು ಅಂಶಗಳ ಬಗ್ಗೆ ನಿಮಗೆ ಮಾಹಿತಿ ಇಲ್ಲ..! ಆ ಅಂಶಗಳ್ಯಾವುವು..?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು