ಪಠ್ಯದಲ್ಲಿ ಜನಪದ ಅಳವಡಿಸಿ
ಸಾಹಿತ್ಯ- ಸಂಸ್ಕೃತಿಗೆ ಜನಪದ ತಾಯಿಬೇರು ಇದ್ದಂತೆ: ಜಾನಪದ ಪರಿಷತ್ ಅಧ್ಯಕ್ಷ ತಿಮ್ಮೇಗೌಡ
Team Udayavani, Mar 2, 2020, 1:19 PM IST
ರಿಪ್ಪನ್ಪೇಟೆ: ವಿದೇಶೀಯರ ಆಚಾರ- ವಿಚಾರ, ಸಂಸ್ಕೃತಿಯನ್ನು ಇಂದಿನ ಪಠ್ಯದಲ್ಲಿ ಅಳವಡಿಸಿ ಹೆಚ್ಚು ಆಕಷಿತಗೊಳಿಸುವ ಬದಲು ನಮ್ಮ ನಾಡು-ನುಡಿಯ ಗ್ರಾಮೀಣ ಸಂಸ್ಕೃತಿ- ಸಂಸ್ಕಾರಗಳ ಜನಪದವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿ ಮುಂದಿನ ತಲೆಮಾರಿಗೆ ಪರಿಚಯಿಸಬೇಕಾದ ಕಾರ್ಯ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ.ತೀಮ್ಮೇಗೌಡರು ಹೇಳಿದರು.
ಸಮೀಪದ ಹೆದ್ದಾರಿಪುರ ಗ್ರಾಪಂ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್, ಜಿಲ್ಲಾ ಕನ್ನಡ ಸಾಹಿತ್ಯ ಸಂಸ್ಕೃತಿ ವೇದಿಕೆ, ಜಾನಪದ ಉತ್ಸವ ಸಮಿತಿ, ನೆಹರು ಯುವಕೇಂದ್ರದ ಆಶ್ರಯದಲ್ಲಿ ನಾಡೋಜ ಎಚ್. ಎಲ್. ನಾಗೇಗೌಡ ಸ್ಮರಣಾರ್ಥ ಜಾನಪದ ಲೋಕ ಬೆಳ್ಳಿಹಬ್ಬದ ಅಂಗವಾಗಿ ಅಯೋಜಿಸಲಾಗಿದ್ದ “ಜಿಲ್ಲಾ ಮಟ್ಟದ ಜಾನಪದೋತ್ಸವ’ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಂಪನ್ಮೂಲ ಮುಖ್ಯವಲ್ಲ. ಸಂಘಟನೆ ಮತ್ತು ಪರಸ್ಪರ ಸಹಕಾರದಿಂದ ಎಲ್ಲರೂ ಬೆರೆತು ಜನಪದ ಹಾಡಿನೊಂದಿಗೆ ಗ್ರಾಮೀಣ ಕೃಷಿ, ಮನರಂಜನೆಯ ಮೂಲಕ ತಲೆ ತಲಾಂತರದಿಂದ ಜನಮಾನಸದಲ್ಲಿ ಉಳಿಯುವಂತಹ ಗ್ರಾಮೀಣ ಜನಪದ ಸಾಹಿತ್ಯಕ್ಕೆ ಅಪಾರ ಮಹತ್ವವಿದೆ. ಸಾಹಿತ್ಯ ಸತ್ತಿಲ್ಲ, ಶಾಲಾ- ಕಾಲೇಜುಗಳಲ್ಲಿ ಜನಪದ ಪ್ರಚಾರ ಏರ್ಪಡಿಸಬೇಕಾಗಿದ್ದು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಜನಪದದ ಕಡೆ ಅಕಷಿತರಾಗಿದ್ದಾರೆ. ಇದನ್ನು ಉಳಿಸಿ, ಬೆಳೆಸಿ, ಪ್ರೋತ್ಸಾಹಿಸುವಲ್ಲಿ ಸರಕಾರ ಸಹ ಹೆಚ್ಚು ಅಸಕ್ತಿ ವಹಿಸಿದೆ ಎಂದರು.
ಸಾಹಿತ್ಯ ಸಂಸ್ಕೃತಿಗೆ ಜನಪದ ತಾಯಿ ಬೇರು ಇದ್ದಂತೆ. ಅದನ್ನು ನಶಿಸಿ ಹೋಗದಂತೆ ಮುಂದಿನ ತಲೆಮಾರಿಗೆ ಪರಿಚಯಿಸುವ ಗುರುತರ ಜವಾಬ್ದಾರಿ ಎಲ್ಲರದ್ದಾಗಬೇಕು ಎಂದರು.
ಹೊಸನಗರ ತಾಪಂ ಮಾಜಿ ಅಧ್ಯಕ್ಷ ತೊರೆಗದ್ದೆ ವಾಸಪ್ಪಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜಾನಪದ ಸಮ್ಮೇಳನ ಸಾಂಸ್ಕೃತಿಕ ಉತ್ಸವ ಸಮಿತಿ ಸಮ್ಮೇಳನಾಧ್ಯಕ್ಷ ಹಾಗೂ ಹಿರಿಯ ಜನಪದ ಕಲಾವಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡಪ್ಪ ಜೋಗಿ, ತಾಪಂ ಅಧ್ಯಕ್ಷೆ ಸುಶೀಲ ರಘುಪತಿ, ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಹೇಮಾ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಸತೀಶ, ಜಿಲ್ಲಾ ನೆಹರು ಯುವ ಕೇಂದ್ರದ ಯುವ ಸಮನ್ವಯಾಧಿಕಾರಿ ಕೆ.ಕೆ. ಉಲ್ಲಾಸ, ಗ್ರಾಪಂ ಸದಸ್ಯ ಮಂಜಪ್ಪ, ವಿ.ಡಿ. ಲಿಂಗಪ್ಪ, ಮಂಜುನಾಥ ತಳಲೆ, ನೇತ್ರಾವತಿ, ಚಂದ್ರಶೇಖರ, ಪಾವತಮ್ಮ, ಗೌರಮ್ಮ, ನಾಗರತ್ನಮ್ಮ, ಶೋಭಾ, ಪ್ರವೀಣ್, ತಳಲೆ ಸಹಕಾರ ಬ್ಯಾಂಕ್ ಅಧ್ಯಕ್ಷ ದಿನೇಶ್ ಗೌಡ, ಉಪಾಧ್ಯಕ್ಷ ಮಂಜುನಾಥ ಇದ್ದರು.
ಸತೀಶ ಸ್ವಾಗತಿಸಿದರು. ಜಾನಪದ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ ಅಶಯ ನುಡಿ ಸಲ್ಲಿಸಿದರು. ಕೆ.ಎಸ್. ಲೋಕಪ್ಪ ಗೌಡ ಸ್ತಾವಿಕವಾಗಿ ಮಾತನಾಡಿದರು. ಅಶ್ವಿನಿ ಶಿವ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ