ಮುಕ್ತಿ ವಾಹನವೀಗ ಕೋವಿಡ್ ಜಾಗೃತಿ ರಥ!
Team Udayavani, Apr 11, 2020, 5:56 PM IST
ಸಾಗರ: ಮಾರಿಕಾಂಬಾ ವ್ಯವಸ್ಥಾಪಕ ಸಮಿತಿಯಿಂದ ಮುಕ್ತಿ ವಾಹಿನಿ ಮೂಲಕ ಕೋವಿಡ್ ಜಾಗೃತಿ ಮೂಡಿಸಲಾಗುತ್ತಿದೆ.
ಸಾಗರ: ಶವಗಳನ್ನು ಸಾಗಿಸುವ ನಗರದ ಮಾರಿಕಾಂಬಾ ಸಮಿತಿಯ ಮುಕ್ತಿ ವಾಹನ ಈಗ ಗಂಟೆ ಬಾರಿಸುತ್ತ ನಗರದ ಬೀದಿ ಬೀದಿಗಳಲ್ಲಿ ಸಂಚರಿಸುತ್ತಿದೆ. ಕೋವಿಡ್ ವೈರಸ್ ಹಿನ್ನೆಲೆಯಲ್ಲಿ ಜನಜಾಗೃತಿ ವಹಿಸದಿದ್ದರೆ ಎದುರಾಗಬಹುದಾದ ಪರಿಸ್ಥಿತಿಯನ್ನು ಈ ವಾಹನ ಸಂಕೇತಿಸುತ್ತಿದೆ.
ತಾಲೂಕು ಆಡಳಿತದ ಅನುಮತಿ ಪಡೆದು ಸಾಗರದ ಮಾರಿಕಾಂಬಾ ಸಮಿತಿ ಮುಕ್ತಿ ವಾಹನವನ್ನು ಕೋವಿಡ್ ಜಾಗೃತಿ ಮೂಡಿಸುವ ರಥವನ್ನಾಗಿ ಪರಿವರ್ತಿಸಿದೆ. ಬೆಳಗ್ಗೆ 7ರಿಂದ 12ರ ವರೆಗೆ, ಸಂಜೆ 6ರಿಂದ 8 ಗಂಟೆ ವರೆಗೆ ಈ ವಾಹನ ಓಡಾಡುತ್ತದೆ. ಶವ ಮಲಗಿಸುವ ಪೆಟ್ಟಿಗೆಯ ಹಿಂಭಾಗದಲ್ಲಿ ಕೋಣನ ಎರಡು ಕೊಂಬುಗಳನ್ನು ಅಳವಡಿಸಲಾಗಿದೆ. ಬಣ್ಣದ ಲೈಟ್ಗಳಿವೆ.
ಸಮಿತಿಯ ಖಜಾಂಚಿ ನಾಗೇಂದ್ರ ಕುಮಟಾ ರಂಗಕರ್ಮಿಯೂ ಆಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಅದ್ಭುತ ವಿವರಣೆಯೊಂದನ್ನು ರೆಕಾರ್ಡಿಂಗ್ ಮಾಡಿಕೊಟ್ಟಿದ್ದಾರೆ. ಬಂಧುಗಳೇ, ಹೊರಗೆ ಬರಬೇಡಿ. ಕೋವಿಡ್ ನಿಮ್ಮನ್ನು ಅಪ್ಪಿಕೊಳ್ಳುತ್ತದೆ. ನಿಮ್ಮ ಸಾವು ಖಚಿತ. ಮುಕ್ತಿ ವಾಹಿನಿಯ ರಥವೇರಬೇಕೇ? ಹೊರಬನ್ನಿ. ಸುಮ್ಮನೇ ತಿರುಗಬೇಡಿ. ನೀವು ಹಾಗೂ ನಿಮ್ಮ ಕುಟುಂಬದ ಬದುಕು ನಿಮ್ಮ ಕೈಯಲ್ಲಿದೆ. ಸರ್ಕಾರ ನಿಮ್ಮ ಜೊತೆಯಲ್ಲಿದೆ. ದಯಮಾಡಿ ಸಹಕರಿಸಿ. ದೇಶವನ್ನು ಕೊರೊನಾ ಮುಕ್ತವನ್ನಾಗಿಸುವಾ ಬನ್ನಿ ಎಂಬ ಜಾಗೃತಿ ವಾಕ್ಯ ಮೈಕ್ನಲ್ಲಿ ಮೊಳಗುತ್ತದೆ.
ಮುಕ್ತಿ ವಾಹನ ಹಲವರಿಗೆ ಅಪಶಕುನ ಸೂಚಕ. ಹಾಗಾಗಿ, ಕೆಲವರು ಇದನ್ನು ನೋಡಿ ದೂರದಿಂದಲೇ ಓಡಿದರೆ, ಕೆಲವರು ರಥ ನೋಡಿ ಕೈ ಮುಗಿದು ಸಾಗುತ್ತಿದ್ದಾರೆ. ಮುಕ್ತಿ ವಾಹನ ಜನರಲ್ಲಿ ಭಯ ಮತ್ತು ಭಕ್ತಿ ಎರಡನ್ನೂ ಮೂಡಿಸುತ್ತಿದ್ದು, ಕೋವಿಡ್ ಜಾಗೃತಿ ಮೂಲಕ ಜನರನ್ನು ಎಚ್ಚರಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ