ಮೂರು ತಿಂಗಳ ನಂತರ ಮನೆ ಸೇರಿದ ಮಗ


Team Udayavani, Nov 21, 2020, 8:23 PM IST

ಮೂರು ತಿಂಗಳ ನಂತರ ಮನೆ ಸೇರಿದ ಮಗ

ಸಾಗರ: ಮೂರು ತಿಂಗಳ ಹಿಂದೆ ತನ್ನ ತಾಯಿಯೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ಬಂದಿದ್ದ ರಾಂಚಿಯ ಮಗನೊಬ್ಬ ಪೋಷಕರನ್ನು ಸೇರುವಲ್ಲಿ ಯಾವ ಸಿನೆಮಾಕ್ಕೂ ಕಡಿಮೆಯಿಲ್ಲದ ಘಟನೆಗಳು ನಡೆದು ಕೊನೆಗೂ ಇಲ್ಲಿನ ಆಟೋ ಚಾಲಕರು ಯುವಕನ ಪೋಷಕರಿಗೆ ಅವರ ಹುಡುಗನನ್ನು ಒಪ್ಪಿಸಿದ ಘಟನೆ ಸಾಗರದಲ್ಲಿ ನಡೆದಿದೆ.

ತುಸು ಮಾನಸಿಕ ಅಸ್ವಸ್ಥನಂತೆ ಕಂಡುಬಂದಯುವಕನೊಬ್ಬ ಕರ್ಕಿಕೊಪ್ಪದಲ್ಲಿ ಆಟೋಚಾಲಕ ಶೇಖರ್‌ ಬಳಿ ಒಂದು ದೂರವಾಣಿ ಕರೆ ಮಾಡಿಕೊಡುವಂತೆ ಕೋರಿಕೊಂಡಿದ್ದಾನೆ. ಭಾಷೆ ತೊಡಕಿನ ಕಾರಣ ಶೇಖರ್‌ ತಮ್ಮ ಸ್ನೇಹಿತ ಸುಧಾಕರ ಮೂಲಕ ಫೋನ್‌ ಮಾಡಿಸಿದ್ದಾರೆ.ಆದರೆ ಆ ಕರೆ ಸ್ವೀಕಾರ ಆಗಲಿಲ್ಲ. ಈ ನಡುವೆ ತನ್ನ ಹೆಸರು ಆಶು ಕುಮಾರ್‌ ಎಂದು ತಿಳಿಸಿದ್ದಯುವಕ, ನಾನು ತಾಯಿಯ ಜತೆ ಜಗಳ ಮಾಡಿಕೊಂಡು ಗೂಡ್ಸ್‌ ರೈಲು ಹತ್ತಿ ಊರು ಬಿಟ್ಟು ಬಂದಿದ್ದೇನೆ. ತನ್ನ ಪರ್ಸ್‌, ಮೊಬೈಲ್‌ ಫೋನ್‌ ಕಳೆದುಕೊಂಡು 15 ದಿನಗಳಮೇಲಾಗಿದೆ ಎಂದಿದ್ದಾನೆ. ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಯುವಕನನ್ನು ಕೆಎಸ್‌ಆರ್‌ ಟಿಸಿ ಬಸ್‌ ನಿಲ್ದಾಣ ಬಳಿ ಶೇಖರ್‌ ಮತ್ತವರ ಗೆಳೆಯರು ಬಿಟ್ಟು ಬಂದಿದ್ದಾರೆ.

ಇಷ್ಟೇ ಆಗಿದ್ದರೆ ಈ ಘಟನೆ ಸಿನಿಮೀಯ ಆಗುತ್ತಿರಲಿಲ್ಲ. ಎರಡು ದಿನಗಳ ನಂತರರಾಂಚಿಯಿಂದ ಸುಧಾಕರ್‌ಗೆ ಕರೆಬಂದಿದೆ. ರಾಂಚಿಯಿಂದ ಕರೆ ಮಾಡಿದ ವ್ಯಕ್ತಿ ರೋಷನ್‌ ಕುಮಾರ್‌ ಎಂದು ತಮ್ಮ ಪರಿಚಯ ಹೇಳಿಕೊಂಡಿದ್ದಾರೆ. ತಕ್ಷಣ ಶೇಖರ್‌ಗೆ ಹಾದಿಯಲ್ಲಿ ಸಿಕ್ಕ ಯುವಕನ ನೆನಪಾಗಿದೆ. ಮನೆ ಬಿಟ್ಟು ಬಂದ ಯುವಕನ ವಿವರವನ್ನು ರೋಷನ್‌ ಅವರಿಗೆ ಶೇಖರ್‌ ನೀಡಿದ್ದಾರೆ. ಬೆಂಗಳೂರು ಪೊೂಲೀಸ್‌ ಮೂಲಕ ಹಾಗೂ ಜೋಗದ ಪೊಲೀಸ್‌ ಅಧಿಕಾರಿ ನಿರ್ಮಲ ಮತ್ತು ಶೇಖರ್‌ ಸ್ನೇಹಿತರಾದ ಜನಾರ್ದನ್‌, ಕರ್ಕಿಕೊಪ್ಪದ ಚಂದ್ರು, ದೇವೇಂದ್ರ, ಗಣಪತಿ ಮತ್ತಿತರರು ಯುವಕನನ್ನು ಕುಟುಂಬದವರಿಗೆ ಒಪ್ಪಿಸಲು ಕಾರ್ಯಪ್ರವೃತ್ತರಾಗಿದ್ದಾರೆ.

ಮಂಗಳವಾರ ರಾಂಚಿಯಿಂದ ಆಶುಕುಮಾರ್‌ ಸಂಬಂಧಿ  ಮನೋಜ್‌ ಎಂಬಾತ ಸಾಗರಕ್ಕೆ ಬಂದು ಶೇಖರ್‌ಮತ್ತಿತರರನ್ನು ಸಂಪರ್ಕಿಸಿದ್ದಾರೆ. ಮತ್ತೆ ಆಶು ಕುಮಾರ್‌ ಶೋಧ ಕಾರ್ಯ ನಡೆದಿದೆ.ಅಗ್ರಹಾರದ ವೃತ್ತದ ಎಳನೀರು ಅಂಗಡಿಯಸಮೀಪ ಯುವಕ ಇರುವುದನ್ನು ಕರ್ಕಿಕೊಪ್ಪದ ಚಂದ್ರು ಗಮನಿಸಿದ್ದಾರೆ. ಇದರಿಂದ ಯುವಕನನ್ನು ಕುಟುಂಬದವರಿಗೆ ಒಪ್ಪಿಸಲು ಸಾಧ್ಯವಾಗಿದೆ. ಶೇಖರ್‌ ಮತ್ತು ಸ್ನೇಹಿತರ ಬಳಗವನ್ನು ಜೋಗ ಠಾಣೆಯ ಸಬ್‌ ಇನಸ್ಪೆಕ್ಟರ್‌ ನಿರ್ಮಲ ಅವರು ಶಿವಮೊಗ್ಗದ ಎಸ್‌ಪಿ ಕಚೇರಿಗೆ ಗುರುವಾರ ಕರೆದೊಯ್ದು ಶಾಂತರಾಜ್‌ ಅವರಿಂದ ಅಭಿನಂದಿಸುವ ಕಾರ್ಯ ಸಹ ಮಾಡಿದ್ದಾರೆ. ಆಶುಕುಮಾರ್‌ ರಾಂಚಿ ಸೇರಿದ ಮಾಹಿತಿ ಸಿಕ್ಕಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.