Illegal Theater: ಚಿತ್ರ ಮಂದಿರದಲ್ಲಿ ಕಾನೂನು ಬಾಹಿರವಾಗಿ ಚಿತ್ರ ಪ್ರದರ್ಶನ ಆಗುತ್ತಿತ್ತಾ ?

ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೇ ಲೈಸೆನ್ಸ್ ನೀಡಿದ್ರಾ!?

Team Udayavani, Aug 25, 2023, 3:52 PM IST

9-theerthhalli

ತೀರ್ಥಹಳ್ಳಿ : 1987 ಅಕ್ಟೋಬರ್ 1 ರಲ್ಲಿ ವಿನಾಯಕ ಚಿತ್ರಮಂದಿರ ಪ್ರಾರಂಭವಾಗಿತ್ತು. ನನ್ನ ತಂದೆ ವೆಂಕಟರಮಣ ಕಾಮತ್ ಹೆಸರಲ್ಲಿ ಲೈಸೆನ್ಸ್ ಇತ್ತು. ಆ ಜಾಗದಲ್ಲಿ ಚಿತ್ರಮಂದಿರಕ್ಕೂ ಮೊದಲು ವಿನಾಯಕ ಸಾಮಿಲ್ ಇತ್ತು. 2002 ರಲ್ಲಿ ನಮ್ಮ ತಂದೆ ತೀರಿಕೊಂಡರು.

ನನ್ನ ತಾಯಿಗೆ ಹಾಗೂ ಸಹೋದರ ರವೀಂದ್ರ ಕಾಮತ್ ಹೆಸರಿಗೆ ತಂದೆಯವರು ವಿಲ್ ಮಾಡಿದ್ದರು. 2002 ರಿಂದ 2006 ರವರೆಗೆ ಅವರ ಹೆಸರಿಗೆ ಖಾತೆ ಬದಲಾವಣೆ ಆಗಿರಲಿಲ್ಲ.

ಜಿಲ್ಲಾಧಿಕಾರಿಗಳ ಬಳಿ ಲೈಸೆನ್ಸ್ ಬಗ್ಗೆ ಕೇಳಿದಾಗ 1 ವರ್ಷದವರೆಗೂ ಅಲೆದಾಡಿಸಿದ್ದರು. ಕೊನೆಗೆ 2008ರಲ್ಲಿ ನನ್ನ ಹೆಸರಿಗೆ ವರ್ಗಾವಣೆ ಆಗಿತ್ತು ಎಂದು ಚಿತ್ರಮಂದಿರದ ಮಾಲೀಕ ಗಣೇಶ್ ಕಾಮತ್ ತಿಳಿಸಿದರು.

ಪಟ್ಟಣದ ವಿನಾಯಕ ಚಿತ್ರಮಂದಿರದ ಕಟ್ಟಡ ಕುಸಿತದ ಬಗ್ಗೆ ಆ.25ರ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಹೆಸರಿಗೆ ವರ್ಗಾವಣೆ ಆಗಿದ್ದರೂ 2022 ಜನವರಿ 1 ರಿಂದ ಲೈಸೆನ್ಸ್ ನವೀಕರಣಗೊಳ್ಳದೆ ಕಾನೂನು ಬಾಹಿರವಾಗಿ ಚಿತ್ರಪ್ರದರ್ಶನ ಮುಂದುವರೆದಿದೆ. ಚಿತ್ರಮಂದಿರದ ಶಿಥಿಲಾವಸ್ಥೆಯ ಬಗ್ಗೆ ಮತ್ತು ಲೈಸನ್ಸ್ ನವೀಕರಣಗೊಳ್ಳದೇ ಕಾನೂನುಬಾಹಿರವಾಗಿ

ಚಿತ್ರ ಪ್ರದರ್ಶನಗೊಳ್ಳುತ್ತಿರುವ ಬಗ್ಗೆ ಎಲ್ಲಾ ವಿವರಣೆಗಳ ಸಹಿತವಾಗಿ ಜಿಲ್ಲಾಧಿಕಾರಿ ಕಚೇರಿಗೆ 2022ರ ಮೇ.13ರಂದು ಲಿಖಿತ ಅರ್ಜಿ ಸಲ್ಲಿಸಿದ್ದೇನೆ ಎಂದರು.

ಆದರೆ ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿ ಯಾವುದೇ ಕ್ರಮ ಕೈಗೊಳ್ಳದಿದ್ದಾಗ ವಕೀಲರ ಮುಖಾಂತರ 2023ರ ಜೂನ್‌ 5 ರಂದು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದೇನೆ. ಆದರೆ 2023ರ ಆಗಸ್ಟ್‌ 22 ರಂದು ರಾತ್ರಿ 9.30 ರ ಸುಮಾರಿಗೆ ಚಿತ್ರಮಂದಿರದ ಕಟ್ಟಡದ ಮುಂಭಾಗದ ಛಾವಣಿಯು ಕುಸಿದು ಹಲವಾರು ಅನಾಹುತಗಳು ಸಂಭವಿಸಿವೆ. ಸಕಾಲದಲ್ಲಿ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ಮಾಡಿ, ಚಿತ್ರಮಂದಿರದ ನಿರ್ವಹಣೆಗೆ ಸಂಬಂಧಪಟ್ಟವರಿಗೆ ಸೂಕ್ತ ಆದೇಶ ನೀಡಿದ್ದಲ್ಲಿ ಈ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ನಮ್ಮ ಭಾವನೆ ಎಂದರು.

ಸಹೋದರರ ಮದ್ಯೆ ಇದ್ದ ಸಮಸ್ಯೆಯೇ ಚಿತ್ರಮಂದಿರಕ್ಕೆ ಮುಳುವಾಯ್ತಾ?

ಸಹೋದರರಿಬ್ಬರ ಹೆಸರಿನಲ್ಲಿ ಚಿತ್ರಮಂದಿರದ ಲೈಸೆನ್ಸ್ ಇದ್ದು ಸಹೋದರರ ಮುನಿಸುಗಳೇ ಚಿತ್ರಮಂದಿರದಲ್ಲಿನ ಸಮಸ್ಯೆಗೆ ಕಾರಣವಾಯ್ತಾ? ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಹಾಗೂ ಇತರೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಅಧಿಕಾರಿಗಳು ಬರದಂತೆ ಸಹೋದರ ರವೀಂದ್ರ ಕಾಮತ್ ತಡೆದಿದ್ದಾರೆ ಎಂಬ ಅನುಮಾನವನ್ನು ಗಣೇಶ್ ಕಾಮತ್ ವ್ಯಕ್ತಪಡಿಸಿದರು.

ಚಿತ್ರಮಂದಿರಕ್ಕೆ ತಾನೊಬ್ಬನೇ ಮಾಲೀಕನಾಗಬೇಕು ಎಂಬ ಆಸೆಯಿಂದ ಲೈಸೆನ್ಸ್ ರಿನೀವಲ್ ಮಾಡಲು ರವೀಂದ್ರ ಕಾಮತ್ ಬಿಟ್ಟಿಲ್ಲಾ ಎಂಬ ಅನುಮಾನ ವ್ಯಕ್ತಪಡಿಸಿದರು.

ಕೋರ್ಟ್ ನಲ್ಲಿ ಚಿತ್ರಮಂದಿರ ಲಾಸ್ ನಲ್ಲಿ ನೆಡೆಯುತ್ತಿದೆ ಎಂದು ಈಗಾಗಲೇ ರವೀಂದ್ರ ಕಾಮತ್ ಹೇಳಿದ್ದಾರೆ. ಪುನಃ ಅದನ್ನು ಕಟ್ಟಲು 35 ಲಕ್ಷ ಹಣ ಬೇಕು. ಈ ಎಲ್ಲಾ ಕಾರಣಕ್ಕೆ ಅದೆಲ್ಲವೂ ಕಷ್ಟವಾಗಲಿದೆ. ಹಾಗಾಗಿ ನಮಗೆ ಚಿತ್ರಮಂದಿರ ನಡೆಸಲು ಇಷ್ಟವಿಲ್ಲ ಎಂದು ತಿಳಿಸಿದ್ದಾರೆ.

ಇನ್ನು ಮುಂದಿನ ದಿನಗಳಲ್ಲಿ ಚಿತ್ರಮಂದಿರ ಪ್ರದರ್ಶನವಾಗುವುದಾದರೆ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಯಾವುದೇ ರೀತಿಯಲ್ಲಿ ಅನಾಹುತ ಜರುಗದಂತೆ ಹಾಗೂ ಲೈಸೆನ್ಸ್ ನವೀಕರಣಗೊಳ್ಳದೇ ಚಿತ್ರಪ್ರದರ್ಶನ ಮುಂದುವರೆಯದಿರುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಟಾಪ್ ನ್ಯೂಸ್

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.