State Politics: ಲೋಕಸಭಾ ಚುನಾವಣೆಯಲ್ಲಿ ಗೆಲ್ಲುತ್ತೇವೆ: ಕಿಮ್ಮನೆ ರತ್ನಾಕರ್
Team Udayavani, Mar 16, 2024, 11:27 AM IST
ತೀರ್ಥಹಳ್ಳಿ: ಲೋಕಸಭಾ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ, ಒಳ್ಳೆಯ ವಾತಾವರಣ ಇದೆ. ಬಿಜೆಪಿಯವರು ಶ್ರೀಮಂತರ ಪರ ಇದ್ದಾರೆ, ನಾವು ಬಡವರ ಪರ ಇದ್ದೇವೆ. ಖಂಡಿತವಾಗಿ ಈ ಬಾರಿ ಯಶಸ್ವಿಯಾಗುತ್ತೇವೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಪಟ್ಟಣದ ರಥಬೀದಿಯಲ್ಲಿರುವ ಸಮಗೋಡು ಕೋದಂಡರಾಮನ ದೇವಸ್ಥಾನದಲ್ಲಿ ದೇವಸ್ಥಾನದ ಅಭಿವೃದ್ಧಿಗಾಗಿ ಸರ್ಕಾರ 25 ಲಕ್ಷ ಹಣ ಬಿಡುಗಡೆ ಮಾಡಿರುವ ಕಾರಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಶಿವಮೊಗ್ಗದಲ್ಲಿ ಈಶ್ವರಪ್ಪ ಅವರ ಬಂಡಾಯದ ಬಗ್ಗೆ ಈಗಲೇ ಹೇಳಲು ಆಗುವುದಿಲ್ಲ, ಅವರು ನಾಮಪತ್ರ ಸಲ್ಲಿಸಿ ವಾಪಾಸ್ ಪಡೆಯದಿದ್ದಾಗ ಅದರ ಬಗ್ಗೆ ಮಾತನಾಡುತ್ತೇನೆ ಎಂದರು.
ಈ ದೇಶದಲ್ಲಿ ಹಣ ಇದ್ದರೆ ಏನು ಬೇಕಾದರೂ ಮಾಡಬಹುದು. ಈ ಹತ್ತು ವರ್ಷದಲ್ಲಿ ಒಬ್ಬ ಬಿಜೆಪಿಯವನ ಮೇಲೆ ಇ.ಡಿ ಅಥವಾ ಸಿಬಿಐ ಕೇಸ್ ಆಗಿಲ್ಲ. ಅವರೆಲ್ಲಾ ಏನು ಶ್ರೀ ರಾಮನ ವ್ಯಕ್ತಿತ್ವದವರ? ಅವರ ಮನೆಯಲ್ಲಿ ಹಣ, ಬಂಗಾರ, ಬೆಳ್ಳಿ ಇಲ್ಲವೇ? ಅವರೆಲ್ಲಾ ಪರಿಶುದ್ಧರ? ಭಾರತೀಯ ಜನತಾ ಪಾರ್ಟಿ ಎಂದರೆ ಅದೊಂದು ವಾಷಿಂಗ್ ಮೆಷಿನ್ ಎಂದು ವಾಗ್ದಾಳಿ ನಡೆಸಿದರು.
ತೀರ್ಥಹಳ್ಳಿಯಲ್ಲೂ ಬಡವ ಎಂದುಕೊಂಡು ಎಷ್ಟು ರಿಯಲ್ ಎಸ್ಟೇಟ್ ಮಾಡಿದ್ದಾರೆ, ಯಾರೆಲ್ಲರ ಹೆಸರಲ್ಲಿ ಮಾಡುತ್ತಿದ್ದಾರೆ ಎನ್ನುವುದನ್ನು, ತೀರ್ಥಹಳ್ಳಿ ಸುತ್ತಮುತ್ತ ಜಾಗವನ್ನು ಯಾರು ಕಟ್ಟಿಸುತ್ತಿದ್ದಾರೆ ಎಂದು ಕಾಣಿಸುತ್ತಿದೆ. ನಾನು 10 ವರ್ಷ ಶಾಸಕ, ಆದರೆ ಸೈಟ್ ಮಂಜೂರು ಮಾಡಿಸಿಕೊಂಡಿಲ್ಲ. ಜ್ಞಾನೇಂದ್ರ ಅವರು 15 ವರ್ಷದ ಹಿಂದೆ ಸೈಟ್ ಮಂಜೂರು ಮಾಡಿಸಿಕೊಂಡಿದ್ದಾರೆ. 10 ಕೋಟಿ ಮೌಲ್ಯದ್ದು ಬೇಡ 50 ಕೋಟಿ ಮೌಲ್ಯದ ಬದಲಾವಣೆ ಬೇಕು ಎಂದು ಸುಪ್ರೀಂ ಕೋರ್ಟ್ ಗೆ ಹೋಗಿದಕ್ಕೆ ಕಪಾಳಕ್ಕೆ ಹೊಡೆದು ವಾಪಾಸ್ ಕಳುಹಿಸಿದರು ಎಂದು ಆರಗ ವಿರುದ್ಧ ವಾಗ್ದಾಳಿ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ