ಮಹಿಳಾ ದೌರ್ಜನ್ಯ ತಡೆಗೆ ಖಾಕಿ ಕಣ್ಣು!
ಮಹಿಳಾ- ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಜಿಲ್ಲಾ ಪೊಲೀಸ್ ಇಲಾಖೆ ಕಠಿಣ ಕ್ರಮ
Team Udayavani, Dec 12, 2019, 2:46 PM IST
ಶರತ್ ಭದ್ರಾವತಿ
ಶಿವಮೊಗ್ಗ: ಜಿಲ್ಲೆಯಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಇಳಿಮುಖವಾಗುತ್ತಿದ್ದರೂ ಅಪ್ರಾಪ್ತೆಯರ ಮೇಲಿನ ದೌರ್ಜನ್ಯದ ಪ್ರಮಾಣ ಏರಿಕೆ ಹಾದಿಯಲ್ಲಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ.
ದೌರ್ಜನ್ಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದ್ದರೂ ಆರೋಪಿಗಳಿಗೆ ಶಿಕ್ಷೆಯಾಗಿರುವ ಪ್ರಮಾಣ ತುಂಬಾ ಕಡಿಮೆ ಹಾಗೂ ನಿಧಾನ. 2015ರಲ್ಲಿ ಮಹಿಳಾ ದೌರ್ಜನ್ಯದ 28 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಎರಡು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಒಂದು ಪ್ರಕರಣವನ್ನು ಸಂಧಾನದ ಮೂಲಕ ಬಗೆಹರಿಸಲಾಗಿದೆ. 1 ಪ್ರಕರಣ ತನಿಖೆ ಹಂತದಲ್ಲಿದೆ. 1 ಪ್ರಕರಣ ಪತ್ತೆಯಾಗಿಲ್ಲ.
9 ಪ್ರಕರಣ ಕೋರ್ಟ್ನಲ್ಲಿದೆ. 14 ಪ್ರಕರಣ ಖುಲಾಸೆಗೊಂಡಿವೆ. 2016ರಲ್ಲಿ 32 ಪ್ರಕರಣ ದಾಖಲಾಗಿದ್ದು 14 ಪ್ರಕರಣ ಖುಲಾಸೆಗೊಂಡಿದ್ದು, 15 ಪ್ರಕರಣಗಳು ಕೋರ್ಟ್ನಲ್ಲಿವೆ. 2017ರಲ್ಲಿ 15 ಪ್ರಕರಣ ದಾಖಲಾಗಿದ್ದು 11 ಪ್ರಕರಣ ಕೋರ್ಟ್ ನಲ್ಲಿವೆ. 3 ದೂರು ವಜಾಗೊಂಡಿವೆ. 2018ರಲ್ಲಿ 18 ದೂರು ದಾಖಲಾಗಿದ್ದು 16 ಪ್ರಕರಣ ವಿಚಾರಣೆ ಹಂತದಲ್ಲಿದೆ. 1 ತನಿಖೆ ಹಂತದಲ್ಲಿದೆ. 1 ವಜಾಗೊಂಡಿದೆ. 2019ರಲ್ಲಿ 10 ಪ್ರಕರಣ ದಾಖಲಾಗಿದ್ದು 4 ಕೋರ್ಟ್ನಲ್ಲಿದ್ದು 6 ದೂರು ತನಿಖೆ ಹಂತದಲ್ಲಿವೆ.
ಮಕ್ಕಳ ಮೇಲಿನ ದೌರ್ಜನ್ಯ: 2015ರಲ್ಲಿ 65 ಪ್ರಕರಣ ದಾಖಲಾಗಿದ್ದು 1 ಪ್ರಕರಣ ಫೇಕ್ ಎಂದು ಸಾಬೀತಾಗಿದ್ದು, 14 ಪ್ರಕರಣ ಸಂಧಾನದ ಮೂಲಕ ಬಗೆಹರಿಸಲಾಗಿದೆ. 42 ಪ್ರಕರಣಗಳು ಖುಲಾಸೆಗೊಂಡಿವೆ. ಐದು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 2016ರಲ್ಲಿ 75 ಪ್ರಕರಣ ದಾಖಲಾಗಿದ್ದು 37 ವಿಚಾರಣೆ ಹಂತದಲ್ಲಿವೆ.
33 ಖುಲಾಸೆಗೊಂಡಿವೆ. ಒಂದು ನಕಲಿ ಎಂದು ಕೈ ಬಿಡಲಾಗಿದೆ. 2017ರಲ್ಲಿ 59 ದೂರು ದಾಖಲಾಗಿದ್ದು 1 ನಕಲಿ, 19 ವಜಾಗೊಂಡಿವೆ. 33 ಕೋರ್ಟ್ ವಿಚಾರಣೆ ಹಂತದಲ್ಲಿವೆ. ಮೂರು ಜನ ಆರೋಪಿಗಳು ಮೃತಪಟ್ಟಿದ್ದಾರೆ. ಎರಡು ಪ್ರಕಣಗಳಲ್ಲಿ ಶಿಕ್ಷೆಯಾಗಿದೆ. 2018ರಲ್ಲಿ 77 ಪ್ರಕರಣ ದಾಖಲಾಗಿದ್ದು 55 ಕೋರ್ಟ್ ವಿಚಾರಣೆಯಲ್ಲಿದೆ.
17 ವಜಾಗೊಂಡಿವೆ. ಇಬ್ಬರು ಆರೋಪಿಗಳು ಸಾವಿಗೀಡಾಗಿದ್ದಾರೆ. 2019ರಲ್ಲಿ ಡಿ.7ರವರೆಗೆ 85 ಪ್ರಕರಣ ದಾಖಲಾಗಿದ್ದು 51 ಪ್ರಕರಣ ಕೋರ್ಟ್ ವಿಚಾರಣೆಯಲ್ಲಿದೆ. 30 ಪ್ರಕರಣ ತನಿಖೆ ಹಂತದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ