ಇಂಗ್ಲಿಷ್‌ ಮೀಡಿಯಂ ಶಾಲೆಗೆ ಭರ್ಜರಿ ರೆಸ್ಪಾನ್ಸ್‌!

•ನಿರೀಕ್ಷೆಗೂ ಮೀರಿ ಹರಿದು ಬಂದ ಅರ್ಜಿಗಳು •30 ಶಾಲೆಗಳಿಗೆ ಸಿಕ್ಕಿದ ಅನುಮತಿ

Team Udayavani, Jun 7, 2019, 12:09 PM IST

07-Jun-16

Shivamogga: Huge Response for English Medium High School

ಶಿವಮೊಗ್ಗ: ರಾಜ್ಯ ಸರಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಇಂಗ್ಲಿಷ್‌ ಮೀಡಿಯಂ ಸ್ಕೂಲ್ಗೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ಕೆಲವು ಶಾಲೆಗಳಲ್ಲಿ ನಿರೀಕ್ಷೆಗೂ ಮೀರಿ ಅರ್ಜಿಗಳು ಬಂದಿವೆ.

ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಈ ಯೋಜನೆ ಅನುಕೂಲಕರವಾಗಿರುವ ನಿಟ್ಟಿನಲ್ಲಿ ಪೋಷಕರು ಸರಕಾರಿ ಶಾಲೆಗೆ ಮಕ್ಕಳನು ಕರೆತರುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 30 ಶಾಲೆಗಳಿಗೆ ಅನುಮತಿ ಸಿಕ್ಕಿದ್ದು, ಇನ್ನು ಹೆಚ್ಚಿನ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಶುರು ಮಾಡಬೇಕೆಂಬ ಬೇಡಿಕೆ ಬಂದಿದೆ. ಸರಕಾರ ಮೊದಲ ಬಾರಿಗೆ ಸಾವಿರ ಶಾಲೆಗಳಿಗೆ ಮಾತ್ರ ಅನುಮತಿ ಕೊಟ್ಟಿರುವುದರಿಂದ ಜಿಲ್ಲೆಯಲ್ಲಿ 30 ಶಾಲೆಗಳಿಗೆ ಅವಕಾಶ ಸಿಕ್ಕಿದೆ.

ಇಂಗ್ಲಿಷ್‌ಗೆ ಜೈ, ಕನ್ನಡಕ್ಕೆ ಬೈ: ಇಂಗ್ಲಿಷ್‌ ಮಾಧ್ಯಮಕ್ಕೆ 30 ಶಾಲೆಗಳಲ್ಲೂ ದಾಖಲಾತಿ ಆರಂಭವಾಗಿದ್ದರೆ ಕನ್ನಡ ಮಾಧ್ಯಮಕ್ಕೆ 15 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಆಗಿದೆ. ಇಂಗ್ಲಿಷ್‌ ಮಾಧ್ಯಮಕ್ಕೆ ಭದ್ರಾವತಿಯ ಹೊಸ ಸಿದ್ದಾಪುರ ಶಾಲೆಯಲ್ಲಿ 10 ಮಕ್ಕಳು, ದೊಣಬಘಟ್ಟ ಶಾಲೆಯಲ್ಲಿ 4, ಅಂತರಗಂಗೆ ಶಾಲೆಯಲ್ಲಿ 11, ಅರಳಿಹಳ್ಳಿ ಶಾಲೆಯಲ್ಲಿ 8, ಸಾಗರ ತಾಲೂಕಿನ ಹೊಸನಗರ ಶಾಲೆಯಲ್ಲಿ 17, ನಿಟ್ಟೂರು 3, ಅಮೃತ ಶಾಲೆಯಲ್ಲಿ 30, ತೀರ್ಥಹಳ್ಳಿಯ ಕೊಡೂರು ಸರಕಾರಿ ಶಾಲೆಯಲ್ಲಿ 6, ಸಾಗರದ ಆನಂದಪುರ ಶಾಲೆಯಲ್ಲಿ 30, ಸೂರನಗದ್ದೆ ಶಾಲೆಯಲ್ಲಿ 10, ಶಿಕಾರಿಪುರದ ಹಿತ್ತಲ ಶಾಲೆಯಲ್ಲಿ 15, ಕುಸ್ಕೂರು ಶಾಲೆಯಲ್ಲಿ 3, ಶಿರಾಳಕೊಪ್ಪ ಶಾಲೆಯಲ್ಲಿ 10, ಶಿಕಾರಿಪುರದ ಬಾಲಕಿಯರ ಶಾಲೆಯಲ್ಲಿ 15, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕೊಮ್ಮನಾಳು 9, ಶೆಟ್ಟಿಹಳ್ಳಿ 30, ಐಹೊಳೆ 25, ಸೂಳೆಬೈಲು 18, ಇವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಎನ್‌.ಟಿ. ರಸ್ತೆಯ ಸರಕಾರಿ ಶಾಲೆಯಲ್ಲಿ 25, ಗಾಡಿಕೊಪ್ಪ 22, ಮಿಳಘಟ್ಟ 5, ಕೆ.ಆರ್‌. ಪುರಂ ಶಾಲೆ 6, ತೀರ್ಥಹಳ್ಳಿ ತಾಲೂಕಿನ ಗಾಜನೂರು ಶಾಲೆಯಲ್ಲಿ 11, ಉಂಬ್ಳೆಬೈಲು ಶಾಲೆಯಲ್ಲಿ 4, ಸೊರಬ ವಿಧಾನಸಭಾ ಕ್ಷೇತ್ರದ ಕಮರೂರು ಶಾಲೆಯಲ್ಲಿ 2, ಜಡೆ ಶಾಲೆಯಲ್ಲಿ 4, ಅನವಟ್ಟಿಯಲ್ಲಿ 8, ತೀರ್ಥಹಳ್ಳಿಯ ಮೇಗರವಳ್ಳಿ ಶಾಲೆಯಲ್ಲಿ 10, ಕೋಣಂದೂರು ಸರಕಾರಿ ಶಾಲೆಯಲ್ಲಿ 19 ಮಂದಿ ದಾಖಲಾಗಿದ್ದಾರೆ.

ಗ್ರಾಮಾಂತರ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ನಗರ ಹಾಗೂ ಪಟ್ಟಣದಲ್ಲಿರುವ ಶಾಲೆಗಳಿಗೆ ಉತ್ತಮ ದಾಖಲಾತಿ ಆಗಿದೆ. 15 ಶಾಲೆಗಳಲ್ಲಿ ಕನ್ನಡ ಮಾಧ್ಯಮಕ್ಕೆ ಶೂನ್ಯ ದಾಖಲಾತಿ ಆಗಿರುವುದು ಕುತೂಹಲ ಮೂಡಿಸಿದೆ. ಜೂನ್‌ ಕೊನೆವರೆಗೂ ದಾಖಲಾತಿಗೆ ಅವಕಾಶವಿರುವುದರಿಂದ ಶೂನ್ಯ ದಾಖಲಾತಿ ಶಾಲೆಗಳೂ ಭರ್ತಿಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಅಕಾರಿಗಳು.

ಗರಿಷ್ಠ 30: ಕೆಲ ಶಾಲೆಗಳಲ್ಲಿ ನಿರೀಕ್ಷೆ ಮೀರಿ ಅರ್ಜಿ ಬಂದಿದ್ದರೂ ಅವುಗಳನ್ನು 30ಕ್ಕೆ ಸೀಮಿತಗೊಳಿಸಲು ಸರಕಾರ ಸೂಚಿಸಿದೆ. ಕೆಲ ಪೋಷಕರಿಗೆ ಇದರಿಂದ ದಿಕ್ಕು ತೋಚದಂತಾಗಿದ್ದು ಶಿಕ್ಷಣ ಇಲಾಖೆ ಮೇಲೆ ಒತ್ತಡ ತರುತ್ತಿದ್ದಾರೆ. 30 ಮಕ್ಕಳಿಗೆ ಬೇಕಾಗುವ ಪಠ್ಯಪುಸ್ತಕ, ಶಿಕ್ಷಕರು ಮಾತ್ರ ಇರುವುದರಿಂದ, ಅಲ್ಲದೇ ಪ್ರಾಯೋಗಿಕ ಹಂತದಲ್ಲಿ ಇರುವುದರಿಂದ 30ಕ್ಕಿಂತ ಹೆಚ್ಚು ಅನುಮತಿ ನೀಡುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯಲ್ಲಿ ಇಂಗ್ಲಿಷ್‌ ಮಾಧ್ಯಮಕ್ಕೆ ಉತ್ತಮ ಪ್ರತಿಕ್ರಿಯೆ ಇದೆ. ಸರಕಾರ 30 ಮಕ್ಕಳಿಗೆ ಮಾತ್ರ ಅವಕಾಶ ನೀಡಿರುವುದರಿಂದ ಹೆಚ್ಚುವರಿ ಅರ್ಜಿಗಳು ಬಂದರೂ ಪಡೆಯಲು ಆಗುತ್ತಿಲ್ಲ. ಕನ್ನಡ ಮಾಧ್ಯಮಕ್ಕೆ ಕೆಲ ಕಡೆ ಶೂನ್ಯ ದಾಖಲಾತಿ ಆಗಿದೆ. ದಾಖಲಾತಿ ಇನ್ನೂ ಅವಕಾಶವಿರುವುದರಿಂದ ಭರ್ತಿಯಾಗಬಹುದು.
ಸುಮಂಗಳ ಕುಚಿನಾಡ,
ಡಿಡಿಪಿಐ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.