ಬುದ್ಧ ವಿಹಾರ ಅಭಿವೃದ್ಧಿಗಾಗಿ ಹಲವಾರು ಯೋಜನೆ
Team Udayavani, Jul 12, 2019, 4:30 PM IST
ಸುರಪುರ: ಡಾ| ಅಂಬೇಡ್ಕರ್ ವೃತ್ತದಲ್ಲಿ ಬುದ್ಧ ವಿಹಾರ ಕಮಿಟಿ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿತು.
ಸುರಪುರ: ವರಜ್ಯೋತಿ ಭಂತೇಜಿ ಮಾರ್ಗದರ್ಶನದಲ್ಲಿ ನಗರದ ಬುದ್ಧ ವಿಹಾರದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹೊಂದಲಾಗಿದೆ ಎಂದು ಅಂಬೇಡ್ಕರ್ ಜಯಂತ್ಯು ತ್ಸವ ಸಮಿತಿ ಅಧ್ಯಕ್ಷ ವೆಂಕಟೇಶ ಹೊಸ್ಮನಿ ಹೇಳಿದರು.
ನಗರದ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಗೋಲ್ಡನ್ ಕ್ಲೇವ್ ಬುದ್ಧ ವಿಹಾರ ಟ್ರಸ್ಟ್ ರಚನೆ ಭಿತ್ತಿ ಪತ್ರಗಳ ಬಿಡಿಗಡೆ ಮಾಡಿ ಅವರು ಮಾತನಾಡಿದರು.
ಬುದ್ಧ ವಿಹಾರದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಎಲ್ಲೆಂದರಲ್ಲಿ ಬಾಟಲಿಗಳನ್ನು ಬಿಸಾಡಿ ವಿಹಾರವನ್ನು ಅಂದಗೆಡಿಸುತ್ತಿದ್ದಾರೆ.ಇದಕ್ಕೆ ಕಡಿವಾಣ ಹಾಕಲು ಸಮಿತಿಯು ಬುದ್ಧ ವಿಹಾರದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಇದೇ ಉದ್ದೇಶದಿಂದ ವಿಹಾರದ ಅಭಿವೃದ್ಧಿ ಕುರಿತು ಜವಾಬ್ದಾರಿ ವಹಿಸಲು ಜು. 13ರಂದು ಬೆಳಗ್ಗೆ 10:00ಕ್ಕೆ ಬುದ್ಧ ವಿಹಾರದಲ್ಲಿ ಸಭೆ ಕರೆಯಲಾಗಿದೆ. ದಲಿತ ಸಮುದಾಯ ಬಾಂಧವರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡುವಂತೆ ಮನವಿ ಮಾಡಿದರು.
ರಾಹುಲ್ ಹುಲಿಮನಿ ಮಾತನಾಡಿ, ಸಮುದಾಯದ ಅಭಿವೃದ್ಧಿಗಾಗಿ ಸಹಕಾರಿ ಸಂಘ, ಶಿಕ್ಷಣ ಸಂಸ್ಥೆ, ವಸತಿ ನಿಲಯ, ಸಂತ್ರಸ್ತರ ಸಾಂತ್ವಾನ ಕೇಂದ್ರ ಸ್ಥಾಪನೆ ಸೇರಿದಂತೆ ಸಮಾಜಮುಖೀ ಕಾರ್ಯಚಟುವಟಿಕೆ ಆಯೋಜನೆ ಜತೆಗೆ ಗೌತಮ್ ಬುದ್ಧರ 1011 ಅಡಿ ಎತ್ತರದ ಮೂರ್ತಿ ಪ್ರತಿಷ್ಠಾನೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದು ವಿವರಿಸಿದರು.
ದೇವಿಂದ್ರಪ್ಪ ಪತ್ತಾರ, ಶಂಕರಪ್ಪ ಶಾಖಾನವರ, ನಿಂಗಣ್ಣ ಗೋನಾಲ, ಮಾಳಪ್ಪ ಕಿರದಹಳ್ಳಿ, ರಾಮಚಂದ್ರ ವಾಗಣಗೇರಾ, ರಮೇಶ ಅರಕೇರಿ, ಮಲ್ಲಿಕಾರ್ಜುನ ವಾಗಣಗೇರಾ, ವಿಶ್ವನಾಥ ಹೊಸ್ಮನಿ, ಆಕಾಶ ಕಟ್ಟಿಮನಿ, ಶಂಕರ ಬೊಮ್ಮನಹಳ್ಳಿ, ರಮೇಶ ಬಡಿಗೇರ, ಮಲ್ಲು ಮುಷ್ಠಳ್ಳಿ, ಮಲ್ಲಿಕಾರ್ಜುನ ತಳ್ಳಳ್ಳಿ, ರಾಜು ದೊಡ್ಮನಿ, ಮಲ್ಲು ಜಾಲಿಬೆಂಚಿ, ಮಲ್ಲಪ್ಪ ಮೇಟಿ, ಪರಮಣ್ಣ ನಾಗರಾಳ, ಬಸವರಾಜ ಪೂಜಾರಿ, ಮಾನಪ್ಪ ಬಳಬಟ್ಟಿ,ಅಂಬ್ರೇಶ ಮಾವಿನಮಟ್ಟಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ