ಬರ ನಿಭಾಯಿಸಲು 700 ಕೋಟಿ ರೂ.
Team Udayavani, Jul 6, 2019, 5:09 PM IST
ಮಧುಗಿರಿಯ ಚಿನಕವಜ್ರ ಗ್ರಾಮದಲ್ಲಿ ಕುಡಿಯಲು ನೀರು ನೀಡುವ ಬೋರ್ವೇಲ್ ವೀಕ್ಷಿಸಿದ ಸಚಿವ ಆರ್.ವಿ.ದೇಶಪಾಂಡೆ.
ಮಧುಗಿರಿ: ಬರ ಸಮಸ್ಯೆ ನಿಭಾಯಿಸಲು 700 ಕೋಟಿ ಮೀಸಲಿಟ್ಟಿದ್ದು, ಜಿಲ್ಲಾಧಿ ಕಾರಿ ಖಾತೆಯಲ್ಲಿ 12 ಕೋಟಿ ರೂ. ಇದೆ. ಮೇವು ಹಾಗೂ ಕುಡಿಯುವ ನೀರಿಗೆ ಸಮಸ್ಯೆಗೆ ಕ್ರಮವಹಿಸುವಂತೆ ಅಧಿಕಾರಿ ಗಳಿಗೆ ಸೂಚಿಸಿರುವುದಾಗಿ ಸಚಿವ ಆರ್. ವಿ.ದೇಶಪಾಂಡೆ ತಿಳಿಸಿದರು.
ಕಸಬಾ ಚಿನಕವಜ್ರ ಗ್ರಾಮದ ಬರಗಾಲ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದರು.ಎಲ್ಲಿವರೆಗೂ ಮೇವು ಬ್ಯಾಂಕಿನ ಅಗತ್ಯವಿರುತ್ತದೋ ಅಲ್ಲಿಯ ವರೆಗೂ ಮೇವು ಹಾಗೂ ನೀರಿಗೆ ಅನುದಾನ ನೀಡಲಾಗುವುದು.
ಕೇಂದ್ರ ಸರ್ಕಾರ 3 ತಿಂಗಳ ನಂತರ ನೀರು ನೀಡಲು ಹಣಕಾಸು ಕೊಡು ವುದಿಲ್ಲ. ಆದರೆ ರಾಜ್ಯ ಸರ್ಕಾರ ಅಧಿಕಾರ ವಿಕೇಂದ್ರೀಕರಣ ಮಾಡಿ ತಹಶೀಲ್ದಾರ್ರವರಿಗೆ ಅಧಿಕಾರಿ ನೀಡಿದ್ದು, ಸಾಧ್ಯ ವಾದಷ್ಟು ನೀರು ಮೇವು ನೀಡಲು ಆದೇಶಿಸಿದ್ದೇವೆ. ಕನಿಷ್ಠ 40 ಲಕ್ಷ ರೂ. ತಹಶೀಲ್ದಾರ್ ಖಾತೆಯಲ್ಲೇ ಇರುವಂತೆ ಕ್ರಮಕೈಗೊಳ್ಳಲಾಗಿದೆ ಎಂದರು.
ಈ ವೇಳೆ ಶಾಸಕ ಎಂ.ವಿ. ವೀರಭದ್ರಯ್ಯ, ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ, ತಹಶೀಲ್ದಾರ್ ನಂದೀಶ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ನಂದಿನಿ, ಪಶು ಸಂಗೋಪನೆ ಸಹಾಯಕ ನಿರ್ದೇಶಕ ನಾಗಭೂಷಣ್, ತುಂಗೋಟಿ ರಾಮಣ್ಣ, ಪಿಡಿಒ ಉತ್ತಮ್ ಹಾಗೂ ಗ್ರಾಮಕ್ಕೆ ನೀರು ನೀಡಿದ ರೈತ ದಂಪತಿ ಗೌರಮ್ಮ ದೊಡ್ಡತಿಮ್ಮಯ್ಯ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ