ಅಕ್ರಮ ಸಂಬಂಧದ ಜಗಳ; ಕುತ್ತಿಗೆ ಬಿಗಿದು ಪ್ರೇಯಸಿಯ ಹತ್ಯೆ
ಮೂರು ವರ್ಷದಿಂದ ಗಂಡನ್ನು ಬಿಟ್ಟು ಒಂಟಿಯಾಗಿ ಜೀವನ...
Team Udayavani, Aug 5, 2023, 9:57 PM IST
ಕುಣಿಗಲ್:ಪರಸ್ತ್ರೀ ಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವೆ ಎಂದು ಪದೇ ಪದೇ ಜಗಳ ಮಾಡುತ್ತಿದ್ದ ಪ್ರೇಯಸಿಯನ್ನು ಪ್ರಿಯಕರನೇ ಚೂಡಿದಾರ್ ವೇಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಪೋಲಿಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಪಟ್ಟಣದಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ.
ಮಾಗಡಿ ತಾಲೂಕಿನ ತಾವರೆ ಕೆರೆ ಸಮೀಪದ ಮೈಲಾರಪುರ ಗ್ರಾಮದ ವಾಸಿ ಲಕ್ಷ್ಮೀ ದೇವಿ(28) ಕೊಲೆಯಾದ ಮಹಿಳೆ. ದಾವಣಗೆರೆ ಜಿಲ್ಲೆಯ ಅವರಗೆರೆ ಗ್ರಾಮದ ಮಂಜುನಾಥ್(22) ಕೊಲೆ ಮಾಡಿ ಪೋಲಿಸರಿಗೆ ಶರಣಾಗಿರುವ ಆರೋಪಿ.
ಗಂಡನನ್ನು ಬಿಟ್ಟಿದ್ದ ಲಕ್ಷ್ಮೀ ದೇವಿ
ಕೊಲೆಯಾದ ಲಕ್ಷ್ಮೀ ದೇವಿ ಹಾಗೂ ಮಂಜುನಾಥ್ ಇಬ್ಬರು ಬೆಂಗಳೂರು ಗ್ರಾಮಾಂತರ ತಾವರೇಕೆರೆ ಬಳಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಲಕ್ಷ್ಮೀ ದೇವಿಗೆ ಮದುವೆಯಾಗಿ ಕಳೆದ ಮೂರು ವರ್ಷದಿಂದ ಗಂಡನ್ನು ಬಿಟ್ಟು ಒಂಟಿಯಾಗಿ ಜೀವನ ನಡೆಸುತ್ತಿದ್ದಳು.
ಎರಡು ವರ್ಷದಿಂದ ಪ್ರೇಮ
ಬೆಂಗಳೂರು ತಾವರೇಕೆರೆಯಲ್ಲಿ ಪ್ರತ್ಯೇಕವಾಗಿ ಮನೆ ಮಾಡಿಕೊಂಡು ಲಕ್ಷ್ಮೀ ದೇವಿ ಹಾಗೂ ಮಂಜುನಾಥ್ ವಾಸವಾಗಿದ್ದು, ಕಾರ್ಖಾನೆಯಲ್ಲಿ ಮಂಜುನಾಥ್ನ ಪರಿಚಯವಾಗಿ ಇಬ್ಬರ ನಡುವೆ ಎರಡು ವರ್ಷದಿಂದ ಪ್ರೇಮ ಬೆಳೆದು ಇಬ್ಬರು ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದರು.
ಅಕ್ರಮ ಸಂಬಂಧ ಅನುಮಾನ
ಲಕ್ಷ್ಮೀ ದೇವಿ ನೀನು ಇನ್ನೊಬ್ಬ ಹೆಂಗಸಿನ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಮಂಜುನಾಥನ ಮೇಲೆ ಅನುಮಾನ ಪಟ್ಟು ಪದೇ ಪದೇ ಜಗಳ ಮಾಡುತ್ತಿದ್ದಳು ಎನ್ನಲಾಗಿದೆ.
ಲಾಜ್ಡ್ ನಲ್ಲಿ ಜಗಳ
ಶುಕ್ರವಾರ ರಾತ್ರಿ ಲಕ್ಷ್ಮೀ ದೇವಿ ಹಾಗೂ ಮಂಜುನಾಥ್ ಕುಣಿಗಲ್ ಪಟ್ಟಣದ ಲಾಜ್ಡ್ ಗೆ ಬಂದು ರೂಂ ಮಾಡಿದ್ದಾರೆ. ರಾತ್ರಿ ಮತ್ತೆ ಇಬ್ಬರ ನಡುವೆ ಜಗಳ ಉಂಟಾಗಿದೆ ಎನ್ನಲಾಗಿದೆ.
ಆತ್ಮಹತ್ಯೆ ಬೆದರಿಕೆ, ಕೊಲೆಯಲ್ಲಿ ಅಂತ್ಯ
ಲಾಜ್ಡ್ ನಲ್ಲಿ ಲಕ್ಷ್ಮೀ ದೇವಿ ಅತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದ್ದು ಇದರಿಂದ ರೋಸಿಹೋಗಿದ್ದ ಮಂಜುನಾಥ್ ಅಕೆಯೇ ಧರಿಸಿದ್ದ ಚೂಡಿದಾರ್ ವೇಲ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಬೆಳಗೆ ಹೊರಗೂ ಶವೆದ ಜೊತೆಯಲ್ಲಿ ಇದ್ದು ನಂತರ ಎದ್ದು ಕುಣಿಗಲ್ ಪೋಲಿಸ್ ಠಾಣಿಗೆ ಬಂದು ಕೊಲೆ ಮಾಡಿರುವುದಾಗಿ ಹೇಳಿ ಪೋಲಿಸರಿಗೆ ಶರಣಾಗಿದ್ದಾನೆ. ಘಟನೆ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಕಲೆ ಹಾಕಲಾಗಿದೆ,
ಈ ಸಂಬಂಧ ಡಿವೈಎಸ್ಪಿ ಲಕ್ಷ್ಮೀಕಾಂತ್, ಸಿಪಿಐ ನವೀನ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿ ಕುಣಿಗಲ್ ಪೋಲಿಸರ ವಶದಲ್ಲಿ ಇದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್