ಸಮರ್ಥವಾಗಿ ಚುನಾವಣೆ ಎದುರಿಸುವೆ
Team Udayavani, Dec 16, 2020, 5:43 PM IST
ಹುಳಿಯಾರು: ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿಬಿಜೆಪಿ, ಜೆಡಿಎಸ್ಗಿಂತ ಸಮರ್ಥವಾಗಿಚುನಾವಣೆ ಎದುರಿಸುತ್ತೇವೆ ಎಂದುಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಾ.ಸಾಸಲು ಸತೀಶ್ ಭರವಸೆ ನೀಡಿದರು.
ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ರಾಜಕೀಯ ಪಕ್ಷದಸಂಘಟನೆಗೆ ಕಾರ್ಯಕರ್ತರೆ ಶಕ್ತಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಗ್ರಾಪಂ ಬುನಾದಿ.ಆದರೂ ಕಾರ್ಯಕರ್ತರ ದುಡಿಮೆಯಿಂದ ಅಧಿಕಾರಕ್ಕೆ ಬಂದವರು, ಅಧಿಕಾರಅನುಭವಿಸಿದ್ದವರು ಕಾರ್ಯಕರ್ತರಚುನಾವಣೆ ಬಂದಾಗ ಕೈ ಕೊಡುತ್ತಾರೆ.ಆದರೆ ಇಲ್ಲಿಯವರೆಗೂ ಯಾವುದೇ ಅಧಿಕಾರ ಅನುಭವಿಸದ, ಸರ್ಕಾರದನೆರವು ಪಡೆಯದ ನಾನು ಕಳೆದ ಗ್ರಾಪಂ, ತಾಪಂ, ಜಿಪಂ ಚುನಾವಣೆಗಳಲ್ಲಿ ಕಾರ್ಯಕರ್ತರ ಕೈ ಹಿಡಿದಿದ್ದೇನೆ. ಈಗಲೂಅಷ್ಟೇ ಗ್ರಾಪಂ ಚುನಾವಣೆಯಲ್ಲಿ ಕಾರ್ಯಕರ್ತರ ಗೆಲುವಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದರು.
ಕಾಂಗ್ರೆಸ್ 30 ವರ್ಷಗಳಕಾಲ ಠೇವಣಿ ಕಳೆದುಕೊಂಡಿದ್ದ ಕ್ಷೇತ್ರದಲ್ಲಿ ಒಬ್ಬ ಸಾಮಾನ್ಯ ರೈತನ ಮಗನಾದ ನಾನುಟಿಕೆಟ್ ಪಡೆದಿದ್ದೆ. ಸೋತರೂಕಾರ್ಯಕರ್ತರಿಗೆ ಬೆನ್ನು ತೋರಿಸದೆ ಅವರ ನಡುವೆ ಉಳಿದು ಮನೆಮಠ ಬಿಟ್ಟು ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದ ಉದ್ದಗಲಕ್ಕೂ ಪಕ್ಷ ಕಟ್ಟಿದೆ. ಚಿ.ನಾ. ಹಳ್ಳಿಯಲ್ಲಿ ಹಿಂದೆಂದೂ ಕಂಡುಕೇಳರಿಯದಷ್ಟು ಜನರನ್ನು ಸೇರಿಸಿ ಕಾಂಗ್ರೆಸ್ ಸಭೆ ಮಾಡಿ ಇತಿಹಾಸ ಸೃಷ್ಟಿಸಿದೆ ಎಂದರು.
ಹುಳಿಯಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ವೆಂಕಟೇಶ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್, ಬಗರ್ ಹುಕುಂಕಮಿಟಿ ಮಾಜಿ ಸದಸ್ಯ ಎಚ್.ಅಶೋಕ್, ತಾ.ಒಬಿಸಿ ಕಾಂಗ್ರೆಸ್ ಅಧ್ಯಕ್ಷ ಉಮೇಶ್,ಗ್ರಾಪಂ ಮಾಜಿ ಉಪಾಧ್ಯಕ್ಷ ಮೋಹನ್, ತಾಪಂ ಮಾಜಿ ಸದಸ್ಯ ರುದ್ರೇಶ್ ಇದ್ದರು.