E-KYC: ಅನ್ನದಾತರ ಮನೆ ಬಾಗಿಲಿನಲ್ಲೇ ಇ-ಕೆವೈಸಿ ದಾಖಲು


Team Udayavani, Aug 23, 2023, 4:04 PM IST

E-KYC: ಅನ್ನದಾತರ ಮನೆ ಬಾಗಿಲಿನಲ್ಲೇ ಇ-ಕೆವೈಸಿ ದಾಖಲು

ಹುಳಿಯಾರು: ಕೃಷಿ ಸಮ್ಮಾನ್‌ ಯೋಜನೆಗೆ ಇ-ಕೆವೈಸಿ ದಾಖಲಿಸಲು ರೈತನ ಮನೆ ಬಾಗಿಲಿಗೆ ಚಿಕ್ಕನಾಯಕನಹಳ್ಳಿ ತಾಲೂಕಿನ ಕೃಷಿ ಇಲಾಖೆಯ ತಂಡ ಹೋಗುತ್ತಿದೆ. ಇಲಾಖೆಯ ಯಾವುದೇ ಕಟ್ಟಪ್ಪಣೆ ಇಲ್ಲದಿದ್ದರೂ ಕೃಷಿ ಸಮ್ಮಾನ್‌ ಯೋಜನೆ ಯಿಂದ ರೈತ ವಂಚಿತರಾಗಬಾರದು ಎಂದು ಸ್ವಯಂ ಪ್ರೇರಣೆಯಿಂದ ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರದಿಂದ ಈ ಅಭಿಯಾನ ಕೈಗೊಂಡಿದೆ. ಹಳ್ಳಿಗೆ ತೆರಳಿ ಅವರಿವರನ್ನು ಕೇಳಿ ರೈತನ ಮನೆ ಹುಡಿಕಿ ಇ-ಕೆವೈಸಿ ಮಾಡುತ್ತಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಪಿ.ಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ನೋಂದಾಯಿತ ರೈತರು ಇ-ಕೆವೈಸಿ ಮಾಡುವುದು ಅವಶ್ಯಕವಾಗಿದೆ. ಮುಂದಿನ ಕಂತಿನ ನೆರವಿನ ಹಣ ವರ್ಗಾವಣೆ ಇ- ಕೆವೈಸಿ ಮಾಡಿಸಿರುವ ಮತ್ತು ತಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಮಾಡಿರುವ ಫ‌ಲಾನುಭವಿಗಳಿಗೆ ಮಾತ್ರ ಬರುತ್ತದೆ. ಹೀಗಾಗಿ ಇ-ಕೆವೈಸಿ ಮಾಡಿಸದ ಅರ್ಹರ ಬ್ಯಾಂಕ್‌ ಖಾತೆಗೆ ಕೇಂದ್ರದ ನೆರವಿನ ಹಣ ಜಮೆಯಾಗುವುದಿಲ್ಲ.

ಇ-ಕೆವೈಸಿ ಮಾಡಿಸಿಲ್ಲ: ಚಿಕ್ಕನಾಯಕನಹಳ್ಳಿ ತಾಲೂ ಕಿನ 30,246 ಮಂದಿ ರೈತರ ಪೈಕಿ 6100 ರೈತರು ಇ-ಕೆವೈಸಿ ಮಾಡಿಸದೆ ನಿರ್ಲಕ್ಷಿéಸಿದ್ದಾರೆ. ಇ-ಕೆವೈಸಿ ಮಾಡಿಸದ ರೈತರ ಪಟ್ಟಿಯನ್ನು ರೈತ ಸಂಪರ್ಕ ಕೇಂದ್ರದಲ್ಲಿ ಪ್ರಕಟಿಸಿ ಪತ್ರಿಕಾ ಹೇಳಿಕೆ ನೀಡಿದ್ದರೂ ಸಹ, ರೈತರು ಇ-ಕೆವೈಸಿ ಮಾಡಿಸಲು ನಿರಾಸಕ್ತಿ ತೋರಿ ದ್ದಾರೆ. ದೂರವಾಣಿ ಕರೆ ಮಾಡಿ ಕಚೇರಿಗೆ ಬಂದು ಇ-ಕೆವೈಸಿ ಮಾಡಿಸಿ ಎಂದರೂ ಸ್ಪಂದನೆಯಿಲ್ಲ. ಮೊಬೈಲ್‌ ಆ್ಯಪ್‌ ಮೂಲಕ ನೀವೆ ನಿಮ್ಮ ಮನೆಯಲ್ಲಿ ಕುಳಿತು ಇ-ಕೆವೈಸಿ ಮಾಡಿ ಎಂಬ ಪ್ರಾತ್ಯಕ್ಷಿಕೆ ಕೊಟ್ಟರೂ ಮಾಡಿಸುವ ಗೋಜಿಗೆ ಹೋಗಿಲ್ಲ ಎಂದು ತಿಳಿದು ಬಂದಿದೆ.

ಸ್ವಯಂ ಪ್ರೇರಿತ ಅಭಿಯಾನಕ್ಕೆ ಸ್ಪಂದನೆ: ಚಿಕ್ಕನಾಯ ಕನಹಳ್ಳಿ ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳ ತಂಡ ಹಳ್ಳಿಹಳ್ಳಿಗೆ ತೆರಳಿ, ರೈತನ ಮನೆ ಬಾಗಿಲಿಗೆ ಹೋಗಿ ಇ-ಕೆವೈಸಿ ಮಾಡಲು ನಿರ್ಧ ರಿಸಿದೆ. ಸೋಮವಾರದಿಂದ ಕೈಯಲ್ಲಿ ಇ-ಕೆವೈಸಿ ಮಾಡಿಸದವರ ಪಟ್ಟಿ ಹಿಡಿದು ಊರೂರು ಅಲೆದು ಹುಡುಕಿ ತಡುಕಿ ಫ‌ಲಾನುಭವಿಗಳ ಇ-ಕೆವೈಸಿ ಮಾಡುತ್ತಿದ್ದಾರೆ. ಅಧಿಕಾರಿಗಳ ಈ ಸ್ವಯಂ ಪ್ರೇರಿತ ಅಭಿಯಾನಕ್ಕೆ ರೈತರು ಸ್ಪಂದಿಸುತ್ತಿದ್ದು, ಹಳ್ಳಿಗೆ ಇಲಾಖೆಯ ತಂಡ ಬಂದಿದ್ದೇ ತಡ ಗುಂಪು ಸೇರಿ ಇ-ಕೆವೈಸಿ ಮಾಡಿಸದ ರೈತನ ಮನೆ ತೋರಿಸಿ ಸಹಕಾರ ನೀಡುತ್ತಿದ್ದಾರೆ.

ಸಿಬ್ಬಂದಿ ಅವಿರತ ಪ್ರಯತ್ನ: ಕೃಷಿ ಇಲಾಖೆ ಸಿಬ್ಬಂ ದಿಯ ಅವಿರತ ಪ್ರಯತ್ನದ ನಡುವೆಯೂ ಶೇ.100 ರಷ್ಟು ಇ-ಕೆವೈಸಿ ಪ್ರಗತಿ ಕಷ್ಟವಾಗಿದೆ. ಆಧಾರ್‌ ಲಿಂಕ್‌, ಮೊಬೈಲ್‌ ಸಂಖ್ಯೆ ಲಿಂಕ್‌ ಆಗದ ಕಾರಣ ಇ-ಕೆವೈಸಿ ಮಾಡಿಸಲು ರೈತರಿಗೆ ಸಮಸ್ಯೆಯಾಗುತ್ತಿದೆ. ಇನ್ನು ಹಲವು ರೈತರು ಮರಣ ಹೊಂದಿದ ಹಿನ್ನೆಲೆ ಯಲ್ಲಿ ಅವರ ಮಕ್ಕಳಿಗೆ ಖಾತೆಯಾಗದೆ ಇ-ಕೆವೈಸಿ ಆಗುತ್ತಿಲ್ಲ. ಜಮೀನು ವ್ಯಾಜ್ಯಗಳಿಂದ ಖಾತೆ ಮಾಡಿಸಿ ಕೊಳ್ಳಲಾಗದೆ ಇ-ಕೆವೈಸಿ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನೂ ಬೆಂಗಳೂರು ಸೇರಿದಂತೆ ಅನ್ಯ ಜಿಲ್ಲೆಯವರು ತಾಲೂಕಿನಲ್ಲಿ ಕೃಷಿ ಜಮೀನು ಖರೀದಿಸಿರುವುದರಿಂದ ಅವರಾರೂ ಇ-ಕೆವೈಸಿಗೆ ಸಿಗದೆ ಶೇ.100 ಪ್ರಗತಿಗೆ ತೊಡಕಾಗಿದೆ ಎಂದು ತಿಳಿದು ಬಂದಿದೆ.

100 ರೂ. ದುಡಿಯಲು ಕಷ್ಟವಿರುವ ಈ ಕಾಲದಲ್ಲಿ ವಾರ್ಷಿಕ 6,000 ರೂ. ಸಹಾಯ ಧನ ಸಿಕ್ಕರೆ ಹಳ್ಳಿ ಜನರಿಗೆ ಅನುಕೂಲ ವಾತ್ತದೆ ಎನ್ನುವ ಅರಿವು ಹಳ್ಳಿಯಿಂದ ಬಂದಿರುವ ನನಗಿದೆ. ಹಳ್ಳಿಯ ಅದೆಷ್ಟೋ ವೃದ್ಧರ ಬಳಿ ಸ್ಮಾರ್ಟ್‌ಪೋನ್‌ ಇಲ್ಲ. ಇದ್ದರೂ ಬಳಸಲು ಬರುವುದಿಲ್ಲ. ಮಕ್ಕಳು ಪಟ್ಟಣದಲ್ಲಿರುವುದ

ರಿಂದ ಇ-ಕೆವೈಸಿ ಮಾಡಿಸಲು ಸಾಧ್ಯವಾಗಿಲ್ಲ ಎನ್ನುವುದನ್ನು ಮನಗಂಡು ಇಲಾಖೆ ಸಿಬ್ಬಂದಿ ಮನೆ ಮನೆಗೆ ತೆರಳಿ ಇ-ಕೆವೈಸಿ ಮಾಡುತ್ತಿದ್ದಾರೆ. ರೈತರು ಮನೆ ಬಾಗಿಲಿಗೆ ಬಂದಾಗ ನಿರಾಸಕ್ತಿ ತೋರದೆ ಇ-ಕೆವೈಸಿ ಮಾಡಿಸಿ, ಕೃಷಿ ಸಮ್ಮಾನ್‌ ಹಣ ಪಡೆಯಲು ಅರ್ಹರಾಗಲಿ.-ಎಚ್‌.ಎಸ್‌.ಶಿವರಾಜ್‌ಕುಮಾರ್‌,  ಸಹಾಯಕ ಕೃಷಿ ನಿರ್ದೇಶಕ, ಚಿ.ನಾ.ಹಳ್ಳಿ

ನನಗೆ ಕೃಷಿ ಸಮ್ಮಾನ್‌ ಹಣ ಬರುತ್ತಿರಲಿಲ್ಲ. ಕೇಳಿದರೆ ಇ-ಕೆವೈಸಿ ಮಾಡಿಸಿಲ್ಲ ಮಾಡಿಸಿದರೆ ಹಣ ಬರುತ್ತದೆ ಎನ್ನುತ್ತಾರೆ. ನನ್ನ ಬಳಿ ಸ್ಮಾರ್ಟ್‌ ಪೋನ್‌ ಇರಲಿಲ್ಲ. ವಯಸ್ಸಾದ ನನಗೆ ನಮ್ಮೂರಿನಿಂದ ಹುಳಿ ಯಾರಿಗೆ ಹೋಗಿ ಇ-ಕೆವೈಸಿ ಮಾಡಿಸಲು ಸಾಧ್ಯವಾಗದೆ ಮಗ ಊರಿನಿಂದ ಬಂದಾಗ ಮಾಡಿಸಿದರಾಯ್ತು ಎಂದು ಸುಮ್ಮನಿದ್ದೆ. ಈಗ ಕೃಷಿ ಇಲಾಖೆಯವರೇ ಮನೆ ಬಾಗಿಲಿಗೆ ಬಂದು ಇ-ಕೆವೈಸಿ ಮಾಡಿದ್ದಾರೆ. 3-4 ಕಿ.ಮೀ. ಬಿಸಿಲಿನಲ್ಲಿ ಪಟ್ಟಣಕ್ಕೆ ಹೋಗಿ ಬರುವ ಶ್ರಮ ತಪ್ಪಿದಂತ್ತಾಗಿದೆ.-ನಿಂಗಪ್ಪ, ರೈತ, ಕೆ.ಸಿ.ಪಾಳ್ಯ

-ಕಿರಣ್‌ ಕುಮಾರ್‌

ಟಾಪ್ ನ್ಯೂಸ್

ಡಾ| ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ಡಾ| ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Karkala: ಸುಡುಮದ್ದು ಘಟಕದಲ್ಲಿ ಸ್ಫೋಟ; ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಾಯ

Karkala: ಸುಡುಮದ್ದು ಘಟಕದಲ್ಲಿ ಸ್ಫೋಟ; ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಾಯ

Rain ಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ

Rain ಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ

Malpe Beach: ಲೈಫ್‌ಗಾರ್ಡ್‌ ಮೇಲೆ ಹಲ್ಲೆ

Malpe Beach: ಲೈಫ್‌ಗಾರ್ಡ್‌ ಮೇಲೆ ಹಲ್ಲೆ

Malpe ಷೇರು ಮಾರುಕಟ್ಟೆ ಹೂಡಿಕೆ: ವಂಚನೆ

Malpe ಷೇರು ಮಾರುಕಟ್ಟೆ ಹೂಡಿಕೆ: ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-

Koratagere: ಪಟ್ಟಣಕ್ಕೆ 10 ದಿನಕ್ಕೊಮ್ಮೆ ನೀರು ಸರಬರಾಜು

9-koratagere

Koratagere: ಜೂ.9 ರಂದು ಉಚಿತ ಸಾಮೂಹಿಕ ವಿವಾಹ

Prajwal Revanna ನನಗೆ ಆತ್ಮೀಯ ಸ್ನೇಹಿತ: ಸಂಸದ ಬಸವರಾಜು

Prajwal Revanna ನನಗೆ ಆತ್ಮೀಯ ಸ್ನೇಹಿತ: ಸಂಸದ ಬಸವರಾಜು

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಡಾ| ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ಡಾ| ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Karkala: ಸುಡುಮದ್ದು ಘಟಕದಲ್ಲಿ ಸ್ಫೋಟ; ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಾಯ

Karkala: ಸುಡುಮದ್ದು ಘಟಕದಲ್ಲಿ ಸ್ಫೋಟ; ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಾಯ

Rain ಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ

Rain ಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.