ಸರಳ ಗಣೇಶೋತ್ಸವಕ್ಕೆ ಗೋಮಯ ಗಣಪತಿ ಆಕರ್ಷಣೆ


Team Udayavani, Aug 29, 2021, 5:33 PM IST

ಸರಳ ಗಣೇಶೋತ್ಸವಕ್ಕೆ ಗೋಮಯ ಗಣಪತಿ ಆಕರ್ಷಣೆ

ಚಿಕ್ಕನಾಯಕನಹಳ್ಳಿ: ಗಣೇಶ ಚತುರ್ಥಿ ಹಿಂದೂ ಸಂಸ್ಕೃತಿಯಲ್ಲಿ ಅತ್ಯಂತ ಶ್ರೇಷ್ಠ ಹಬ್ಬಗಳಲ್ಲಿ ಒಂದಾಗಿದೆ. ಸಣ್ಣ ಮಕ್ಕಳಿಂದ ಹಿಡಿದು
ಹಿರಿಯರಿಗೂ ಈ ಹಬ್ಬ ಅಚ್ಚು ಮೆಚ್ಚು. ಇತ್ತೀಚಿನ ದಿನಗಳಲ್ಲಿ ಪರಿಸರ ಸ್ನೇಹಿ ಗಣಪತಿ ಕೂಗು ಬಹಳ ಜೋರಾಗಿದ್ದು, ಕೋವಿಡ್ ಅರ್ಭಟದ ನಡುವೆ ಸರಳ ಗಣೇಶೋತ್ಸವಕ್ಕೆ ತಾಲೂಕಿನ ಸಿದ್ದನಕಟ್ಟೆಯ ವಿಶ್ವಮಾತಾ ಗೋಶಾಲೆಯಲ್ಲಿ ಸಿದ್ಧಗೊಂಡಿದೆ ಗೋಮಯ ಗಣಪತಿ.

ದೇಶದಲ್ಲಿ ಸತತ ಎರಡು ವರ್ಷಗಳಿಂದ ಕೋವಿಡ್ ದಿಂದ ಸಭೆ, ಸಮಾರಂಭ ಹಾಗೂ ಹಬ್ಬ, ಜಾತ್ರೆಗಳ ಸಡಗರವನ್ನು ಮೊಟಕುಗೊಳಿಸಿತ್ತು. ಈ ವರ್ಷದ ಗಣೇಶೋತ್ಸವವನ್ನು ಆತ್ಯಂತ ಸರಳವಾಗಿ ಆಚರಣೆ ಮಾಡಲು ಸರ್ಕಾರ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು, ಇದರ ನಡುವೆ ಗಣೇಶ
ಹಬ್ಬವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ಹಾಗೂ ಹಬ್ಬದ ಸಡಗರವನ್ನು ಹೆಚ್ಚಿಸಲು ತಾಲೂಕಿನ ಸಿದ್ದನಕಟ್ಟೆಯ ವಿಶ್ವಮಾತಾ ಗೋಶಾಲೆಯ ವ್ಯವಸ್ಥಾಪಕ ಶ್ರೀಹರಿ ಅವರು ದೇಸಿ ತಳಿಯ ಹಸುಗಳ ಗೋಮಯ(ಸಗಣಿ)ದಿಂದ ಗಣಪತಿ ಮೂರ್ತಿಯನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ಸಂಪ್ರದಾಯದ ಪ್ರತೀಕ: ಹಿಂದೂ ಸಂಸ್ಕೃತಿಯಲ್ಲಿ ಯಾವುದೇ ಪೂಜೆ ಆರಂಭಕ್ಕೂ ಮುನ್ನ ಮೊದಲ ಸಗಣಿಯಿಂದ ಪಿಳ್ಳಾರಿ ಗಣಪತಿ ಪೂಜೆ
ಮಾಡುವ ಸಂಪ್ರದಾಯವಿದೆ. ಮೊದಲ ಪೂಜೆ ಅಧಿಪತಿ ಗಣಪತಿಯಾಗಿದ್ದು, ಹಸುವಿನ ಸಗಣಿಯಿಂದ ಮಾಡಿದ ಸಣ್ಣ ಹುಂಡೆಗೆ ಗರಿಕೆ ಇಟ್ಟು ಪೂಜಿಸಲಾಗುತ್ತದೆ. ಆದರೆ, ಗೋಶಾಲೆಯಲ್ಲಿ ತಯಾರಿಸಿರುವ ಗಣಪತಿ ಪೂರ್ತಿ ಸಂಪೂರ್ಣ ಸಗಣಿಯಿಂದ ಮಾಡಿದ ಗಣಪತಿಯಾಗಿದೆ ಇದು ಪೂಜೆ ಶ್ರೇಷ್ಠ ಎಂಬ ನಂಬಿಕೆ ಇದೆ.

ಇದನ್ನೂ ಓದಿ:ಆರ್ ಸಿಬಿ ಪರ ಆಡಲು ಹಸರಂಗ ಮತ್ತು ಚಮೀರಾಗೆ ಗ್ರೀನ್ ಸಿಗ್ನಲ್ ನೀಡಿದ ಲಂಕಾ ಕ್ರಿಕೆಟ್

ಗೋಮಯ ಗಣಪತಿ ಅನುಕೂಲ: ದೇಸಿ ಹಸುಗಳ ಸಗಣಿಯಿಂದ ತಯಾರಾಗಿರುವ ಗೋಮಯ ಗಣಪತಿ ಅತ್ಯಂತ ಹಗುರವಾಗಿದ್ದು, ವಿಕಿರಣ ವಿರೋಧಿ, ಗಾಳಿಯನ್ನು ಶುದ್ಧೀಕರಿಸುವ ಶಕ್ತಿ ಹೊಂದಿದೆ. ಇದು ಪರಿಸರ ಸ್ನೇಹಿ ಗಣಪತಿಯಾಗಿದ್ದು, ಪೂಜೆಯ ನಂತರ ವಿಸರ್ಜನೆ ಮಾಡಿದ ಎರಡು ದಿನಗಳ ನಂತರ ವಿಗ್ರಹ ಗಿಡಗಳಿಗೆ ಗೊಬ್ಬರವಾಗಿ ರೂಪಗೊಳ್ಳುತ್ತದೆ. ಗಣಪತಿ ತಯಾರಕೆ ಒಂದು ಗುಡಿ ಕೈಗಾರಿಕೆಗೆ ಪ್ರೋತ್ಸಹ ಸಿಕ್ಕಿದಂತಾಗುತ್ತದೆ. ಹಾಗೂ ಗೋ ಶಾಲೆಯಿಂದ ತಯಾರಾದ ಗಣಪತಿ ಕೊಂಡುಕೊಳ್ಳುವ ಮೂಲಕ ಗೋವು ಪೋಷಣೆಗೆ ಸಹಾಯ ಮಾಡಿದಂತಾಗುತ್ತದೆ.

ರೈತರಗೆ ವರದಾನ: ಬಹುತೇಕ ರೈತರು ಇತ್ತೀಚಿನ ದಿನಗಳಲ್ಲಿ ದೇಸಿ ಹಸುಗಳ ಸಾಕಾಣಿಕೆಯನ್ನುಕಡಿಮೆ ಮಾಡಿದ್ದು, ಆದರೆ, ದೇಶಿ ಹಸುಗಳ ಸಗಣಿಯಿಂದ ಮಾಡಿದ ಗಣಪತಿಗೆ ಬೇಡಿಕೆ ಹೆಚ್ಚಾಗಿದೆ. 6 ಇಂಚಿನ ಈ ಗಣಪತಿಗೆ 400 ರೂ. ಗಳಿದ್ದು, ರೈತರು ಹಸುಗಳ ಹಾಲಿನಲ್ಲಿ ಲಾಭ ಮಾಡುವ ಜೊತೆಗೆ ಗಣಪತಿ ತಯಾರಿಕೆಯಿಂದ ಸಹ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಗೋಶಾಲೆಯ ನಿರ್ವಹಣೆಗೆ ಪ್ರಯೋಗಿಕವಾಗಿ ಈ ವರ್ಷ ಗೋಮಯ ಗಣಪತಿಯನ್ನು ತಯಾರು ಮಾಡಲಾಗಿದೆ. ಗೋಮಯ ಗಣಪತಿ ಪೂಜೆಗೆ ಶ್ರೇಷ್ಠವಾಗಿದ್ದು, ಹಾಗೂ ಪರಿಸರ ಸ್ನೇಹಿಯಾಗಿದೆ. ವಿಸರ್ಜನೆಯ ನಂತರ ಇದು ಮರ ಗಿಡಗಳಿಗೆ ಗೊಬ್ಬರವಾಗಿ ಪರಿವರ್ತನೆ ಯಾಗುತ್ತದೆ. ರೈತರು ಗೋಮಯ ಗಣಪತಿ ತಯಾರಿಸಲು ಆಸಕ್ತಿ ಹೊಂದಿದ್ದರೆ ನಮ್ಮ ಗೋಶಾಲೆಯಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತದೆ.
-ಶ್ರೀಹರಿ, ಗೋಶಾಲೆ ವ್ಯವಸ್ಥಾಪಕ

ಪರಿಸರ ಸಂರಕ್ಷಣೆ ನಮ್ಮಕರ್ತವ್ಯವಾಗಿದೆ. ದೇಸಿ ಹಸುಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮದು. ಈ ಹಿನ್ನೆಲೆ ತಾಲೂಕಿನಲ್ಲಿ ಮೊದಲ ಬಾರಿಗೆ ಪರಿಸರ ಸ್ನೇಹಿ ಗಣಪತಿ ಸಿದ್ಧಗೊಳಿಸಿದ್ದು, ಆಸಕ್ತರು ಸಿದ್ದನಕಟ್ಟೆ ವಿಶ್ವಮಾತ ಗೋಶಾಲೆಯನ್ನು ಸಂಪರ್ಕ ಮಾಡಬಹುದು.
-ಗಂಗಾಧರ್‌, ನಾಟಿ ವೈದ್ಯರು ವಿಶ್ವಮಾತ ಗೋಶಾಲೆ

-ಚೇತನ್‌

ಟಾಪ್ ನ್ಯೂಸ್

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.