ಶೇ.7.5 ಮೀಸಲಾತಿ ಕಲ್ಪಿಸಲು ಒತ್ತಾಯ
ತಹಶೀಲ್ದಾರ್ಗೆ ತಾಲೂಕು ನಾಯಕ ಸಂಘದಿಂದ ಮನವಿ
Team Udayavani, Jun 16, 2019, 2:29 PM IST
ಕೊರಟಗೆರೆ ತಾಲೂಕು ನಾಯಕ ಸಮುದಾಯಕ್ಕೆ ರಾಜ್ಯ ಸರ್ಕಾರ 7.5 ಮೀಸಲಾತಿ ಒತ್ತಾಯಿಸಿ ತಹಶೀಲ್ದಾರ್ಗೆ ತಾಲೂಕು ನಾಯಕ ಸಂಘ ಮನವಿ ಸಲ್ಲಿಸಿತು.
ಕೊರಟಗೆರೆ: ಪರಿಶಿಷ್ಟ ಪಂಗಡಕ್ಕೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಶೇ.7.5 ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿ ತಹಶೀಲ್ದಾರ್ಗೆ ತಾಲೂಕು ನಾಯಕ ಸಂಘ ಮನವಿ ನೀಡಿತು.
ತಾಲೂಕು ನಾಯಕ ಸಂಘದ ಅಧ್ಯಕ್ಷ ಹಾಗೂ ಪಪಂ ಸದಸ್ಯ ಕೆ.ಎನ್.ಲಕ್ಷ್ಮೀ ನಾರಾಯಣ್ ಪರಿಶಿಷ್ಟ ಪಂಗಡಕ್ಕೆ ರಾಜ್ಯ ಸರ್ಕಾರ ರಾಜಕೀಯ, ಉದ್ಯೋಗದಲ್ಲಿ ಕೇವಲ ಶೇ.3 ಮೀಸಲಾತಿ ನೀಡುತ್ತಿದೆ. ಹೀಗಾಗಿ ಸಮುದಾಯದ ಮಕ್ಕಳು ಶಿಕ್ಷಣ ಹಾಗೂ ಉದ್ಯೋಗದಿಂದ ವಂಚಿ ತರಾಗುತ್ತಿದ್ದಾರೆಂದು ಆರೋಪಿ ಸಿದರು. ಪಪಂ ಸದಸ್ಯ ಕೆ.ಆರ್.ಒಬಳ ರಾಜು ಮಾತನಾಡಿ, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ರೀತಿಯಲ್ಲೆ ಶೇ.7.5 ಮೀಸ ಲಾತಿ ನೀಡಬೇಕು. ನ್ಯಾಯ ದೊರೆಯ ದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಪುಟ್ಟ ನರಸಯ್ಯ, ಮಾಜಿ ಸದಸ್ಯ ಲಾರಿಸಿದ್ದಪ್ಪ, ಕೆ.ವಿ. ಮಂಜುನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ಕುಮಾರ್, ಮುಖಂಡರಾದ ಗಣೇಶ್, ರಮೇಶ್, ಕುದುರೆ ಸತ್ಯನಾರಾಯಣ್, ಕಾರು ಮಹೇಶ್, ಎಚ್.ರಮೇಶ್, ಕೋಟೆ ರಂಗನಾಥ್, ಸಿದ್ದಲಿಂಗಪ್ಪ, ಸಣ್ಣ ಮರಿಯಪ್ಪ, ಕೆಂಪ ರಾಜು, ಗಂಗಣ್ಣ, ಮಂಜುನಾಥ್, ಡೈರಿ ಸುರೇಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ