15 ವರ್ಷದ ಬಳಿಕ ಕೊತ್ತಗೆರೆ ಕೆರೆ ಭರ್ತಿ : ಗ್ರಾಮಸ್ಥರಲ್ಲಿ ಸಂತಸ
Team Udayavani, Dec 30, 2021, 4:50 PM IST
ಕುಣಿಗಲ್: 15 ವರ್ಷದ ಬಳಿಕ ಹೇಮಾವತಿ ನೀರು ಹರಿದು ಕೆರೆ ತುಂಬಿ ಕೊಡಿ ಬಿದ್ದಿರುವ ಸಂತೋಷವನ್ನು ತಾಲೂಕಿನ ಕೊತ್ತಗೆರೆ ಗ್ರಾಮಸ್ಥರು ಶಾಸಕ ಡಾ.ಎಚ್ .ಡಿ.ರಂಗನಾಥ್ ಅವರೊಂದಿಗೆ ಕೆರೆಗೆ ಗಂಗಾಪೂಜೆ ಮಾಡಿ, ಬಾಗಿನ ಅರ್ಪಿಸಿ ಸಂಭ್ರಮಿಸಿದರು.
ಕೊತ್ತಗೆರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಂಭ್ರಮದ ದಿನವಾಗಿತ್ತು. 15 ವರ್ಷದ ನಂತರ ಕೊತ್ತಗೆರೆ ಕೆರೆ ಕೋಡಿಬಿದ್ದು, ಕೋಡಿಯ ಮೂಲಕ ನೀರು ಹರಿದ ಕಾರಣ ಈ ಭಾಗದ ಗ್ರಾಮಸ್ಥರು ಕೆರೆ ಏರಿಯನ್ನು ಬಾಳೆ ಕಂದು ಕಟ್ಟಿ, ಹಸಿರು ತೋರಣದಿಂದ ಸಿಂಗಾರ ಗೊಳಿಸಿದರು. ಕೆರೆಯ ದ್ವಾರ ಬಾಗಿಲಿನಿಂದ ಜಾನಪದ ಡೊಳ್ಳು ಕುಣಿತದೊಂದಿಗೆ ಶಾಸಕ ರಂಗನಾಥ್ ಅವರನ್ನು ಕೋಡಿವರೆಗೆ ಮೆರವಣಿಗೆ ಮೂಲಕ ಕರೆ ತಂದರು, ಬಳಿಕ ಶಾಸಕರು ಸಂಪ್ರದಾಯದಂತೆ ಗಂಗಾಪೂಜೆ ಮಾಡಿ, ಬಾಗಿನ ಅರ್ಪಿಸಿದರು.
ಸಾಮಾನ್ಯರು ಕೈ ಜೋಡಿಸಿ: ಶಾಸಕ ಡಾ.ಎಚ್.ಡಿ.ರಂಗನಾಥ್ ಮಾತನಾಡಿ, ಕುಣಿಗಲ್ ದೊಡ್ಡಕೆರೆ ತುಂಬಿ 20 ವರ್ಷ ಕಳೆದಿದೆ. ಈಗಾಗಲೇ ಕೆರೆ ಭರ್ತಿಗೆ ಕ್ರಮ ಕೈಗೊಂಡಿದ್ದು, ಈಗ ಹರಿದು ಬರುತ್ತಿರುವ ನೀರಿನ ಪ್ರಮಾಣ ನಾಲ್ಕು ದಿನ ಹರಿದರೇ ದೊಡ್ಡಕೆರೆ ಸಹ ಕೋಡಿ ಬೀಳಲಿದೆ. ನೀರಾವರಿಯಿಂದ ವಂಚಿತ ವಾಗಿರುವ ತಾಲೂಕಿಗೆ ಶಾಶ್ವತವಾದ ನೀರಾವರಿ ವ್ಯವಸ್ಥೆ ಮಾಡುವುದೇ ನನ್ನ ಹಾಗೂ ಸಂಸದ ಡಿ.ಕೆ. ಸುರೇಶ್ ಕನಸಾಗಿದೆ. ಇದಕ್ಕೆ ತಾಲೂಕಿನ ರೈತರು ಹಾಗೂ ಸಾಮಾನ್ಯರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ಗ್ರಾಪಂ ಅಧ್ಯಕ್ಷೆ ಅಕ್ಷನಾ ಖಾನ್, ಮಾಜಿ ಅಧ್ಯಕ್ಷರಾದ ನಾರಾಯಣ್, ಬಿ.ಡಿ.ಕುಮಾರ್, ಗಂಗರಂಗಯ್ಯ, ಸದಸ್ಯರಾದ ಪರಮೇಶ್, ಗಂಗಧರ್, ಸ್ವಾಮಿ, ಜಿಪಂ ಮಾಜಿ ಸದಸ್ಯ ದೊಡ್ಡಯ್ಯ, ತಾಪಂ ಮಾಜಿ ಸದಸ್ಯರಾದ ಗಂಗರಂಗಯ್ಯ, ಶ್ರೀನಿವಾಸ್, ಮುಖಂಡರಾದ ಚನ್ನೇಗೌಡ, ನಾಗರಾಜು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ