ಕುಣಿಗಲ್ : ಕಾಡು ಹಂದಿಗೆ ಇಟ್ಟ ಉರುಳಿಗೆ ಸಿಲುಕಿ ಚಿರತೆ ಸಾವು
Team Udayavani, May 8, 2022, 8:58 PM IST
ಕುಣಿಗಲ್ : ಕಾಡು ಹಂದಿ ಬೇಟೆಗೆ ಹಾಕಿದ್ದ ಉರುಳುಗೆ ಸಿಲುಕಿ ಒಂದು ವರ್ಷದ ಹೆಣ್ಣು ಚಿರತೆ ಮೃತಪಟ್ಟಿರುವ ಘಟನೆ ತಾಲೂಕಿನ ರಂಗನಾಥಸ್ವಾಮಿ ಬೆಟ್ಟದ ಕೃಷಿ ಸಂಶೋಧನಾ ಕೇಂದ್ರದ ಬಳಿ ನಡೆದಿದೆ.
ಬೇಟಗಾರರು ಹಂದಿ ಬೇಟೆಗಾಗಿ ರಾತ್ರಿ ವೇಳೆ ದುಷ್ಕರ್ಮಿಗಳು ಬಲೆಹಾಕಿ ಹೊಗಿದ್ದರು ಆದರೆ ಹಂದಿ ಬದಲಿಗೆ ಚಿರತೆ ಸಿಲುಕಿ ಸಾವನಪ್ಪಿದೆ ಕೃಷಿ ಸಂಶೋಧನಾ ಕೇಂದ್ರದವರು ನೀಡಿದ ಮಾಹಿತಿ ಮೇರೆಗೆ ಘಟನೆ ಸ್ಥಳಕ್ಕೆ ಬೇಟಿ ನೀಡಿದ ಹುಲಿಯೂರುದುರ್ಗ ಅರಣ್ಯ ಸಂರಕ್ಷಣಾಧಿಕಾರಿ ಮಹಮದ್ಮನ್ಸೂರ್ ವನ್ಯ ಜೀವಿ ಸಂರಕ್ಷಣಾ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮಕೈಗೊಂಡಿದ್ದಾರೆ.
ಇದನ್ನೂ ಓದಿ : ಮಳೆಯ ರೌದ್ರಾವತಾರಕ್ಕೆ ನಲುಗಿದ ಹುಣಸೂರು : 50ಕ್ಕೂ ಹೆಚ್ಚು ಮರಗಳು, ವಿದ್ಯುತ್ ಕಂಬಗಳು ಧರೆಗೆ