3ನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಠಾವಧಿ ಸತ್ಯಾಗ್ರಹ
Team Udayavani, Nov 29, 2019, 5:29 PM IST
ಶಿರಾ: ನಗರದ ತಾಲೂಕು ಕಚೇರಿ ಆವರಣದಲ್ಲಿ ನಡೆಯುತ್ತಿರುವ ಅನಿರ್ದಿಷ್ಠಾವಧಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಮಾಜಿ ಶಾಸಕ ಸಾಲಿಂಗಯ್ಯ ಧರಣಿಯಲ್ಲಿ ಪಾಲ್ಗೊಳ್ಳುವುದರ ಮೂಲಕ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಸಾಲಿಂಗಯ್ಯ, ತಾಲೂಕಿನಲ್ಲಿ ಕಳೆದ 10 ವರ್ಷ ದಿಂದ ಸರಿಯಾಗಿ ಮಳೆಯಾಗದೆ ಅಂತರ್ಜಲ ಸಾವಿರ ಅಡಿ ದಾಟಿದ್ದು ಕುಡಿಯುವ ನೀರಿಗೂ ಕಷ್ಟ ಪಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕೂಡಲೇ ತಾಲೂಕಿನ ಕಳ್ಳಂಬೆಳ್ಳ ಶಿರಾ ಮದಲೂರು ಕೆರೆ ಹಾಗೂ ಹೇಮಾವತಿ ನಾಲಾ ವ್ಯಾಪ್ತಿ ಒಟ್ಟು 14 ಕೆರೆಗಳಿಗೆ ನೀರು ಬಿಡಲೇ ಬೇಕೆಂದು ನಾನೂ ಕೂಡಾ ಒತ್ತಾಯಿಸುತ್ತಿದ್ದೇನೆ ಎಂದು ಮಾಜಿ ಶಾಸಕ ಸಾಲಿಂಗಯ್ಯ ತಿಳಿಸಿದರು.
ಹೇಮಾವತಿ ಶಿರಾ ತಾಲೂಕಿಗೆ ಹರಿಯ ಬೇಕೆನ್ನುವುದು ಕೇವಲ ಒಂದು ಊರಿನ ಕೂಗಲ್ಲಇಡೀ ತಾಲೂಕು ಹೇಮಾವತಿ ನೀರಿನ ಮೇಲೆ ಅವಲಂಭಿತವಾಗಿರುವ ಕಾರಣ ಎಲ್ಲಾ ರಾಜಕೀಯ ಮುಖಂಡರು ಪಕ್ಷಭೇದ ಮರೆತು ಹೋರಾಟದಲ್ಲಿ ಪಾಲ್ಗೊಂಡು ನೀರನ್ನು ನಮ್ಮ ತಾಲೂಕಿಗೆ ತರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಎಸ್.ಎನ್.ಕೃಷ್ಣಯ್ಯ ಎಂದರು. ತುಮುಲ್ ನಿರ್ದೇಶಕ ಎಸ್.ಆರ್.ಗೌಡ, ಹಿರಿಯ ಸಹಕಾರಿ ಧುರೀಣ ಎಸ್.ಎನ್. ಕೃಷ್ಣಯ್ಯ, ಜಿಪಂ ಮಾಜಿ ಸದಸ್ಯ ಪರ್ವತಪ್ಪ, ಧರಣಿ ಸತ್ಯಾಗ್ರಹ ಹೋರಾಟಗಾರರಾದ ಜಯ ರಾಮಯ್ಯ, ಆರ್.ವಿ.ಪುಟ್ಟಕಾಮಯ್ಯ, ತಾಲೂಕು ರೈತಸಂಘದ ಅಧ್ಯಕ್ಷ ಲಕ್ಷ್ಮ ಣ್ಗೌಡ, ಹೆಂಜಾರಪ್ಪ, ರಮೇಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು