ತುಮಕೂರು:ಕುರಿ ಮೇಯಿಸಲು ಹೋದ ಒಂದೇ ಕುಟುಂಬದ ಮೂವರು ಮಕ್ಕಳು ಕೆರೆಯ ಗುಂಡಿಗೆ ಬಿದ್ದು ಸಾವು
Team Udayavani, Jan 29, 2022, 7:55 PM IST
ತುಮಕೂರು: ಕುರಿ ಮೇಯಿಸುವ ವೇಳೆಯಲ್ಲಿ ಕೆರೆಯಲ್ಲಿದ್ದ ಗುಂಡಿಯ ಬಳಿ ಹೋದ ಒಂದೇ ಕುಟುಂಬದ ಮೂವರು ಮಕ್ಕಳು ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಪಾವಗಡದಲ್ಲಿ ಶನಿವಾರ ನಡೆದಿದೆ.
ಜಿಲ್ಲೆಯ ಪಾವಗಡ ತಾಲ್ಲೂಕಿನ ಎಸ್.ಆರ್.ಪಾಳ್ಯದ ಬಳಿಯ ಪದ್ಮರಾಜನ ಕೆರೆಯಲ್ಲಿರುವ ಗುಂಡಿಗೆ ಮಕ್ಕಳು ಬಿದಿದ್ದಾರೆ. ಒಂದೇ ಕುಟುಂಬದ ಇಬ್ಬರು ಬಾಲಕಿಯರು, ಓರ್ವ ಬಾಲಕ ಮೃತಪಟ್ಟಿದ್ದಾರೆ.
ಮೃತರನ್ನು ದೇವರಾಯನ ರೊಪ್ಪದ ಷರೀಫ್(10), ಬಾನ ವಿ(13), ಚಾಂದ್ ಬಿ(14) ಎಂದು ಗುರುತಿಸಲಾಗಿದೆ.
ಕುರಿ ಮೇಯಿಸುವ ಸಲುವಾಗಿ ಎಸ್.ಆರ್.ಪಾಳ್ಯದ ಕೆರೆ ಬಳಿ ಆಗಮಿಸಿದ್ದರು ಎಂದು ತಿಳಿದು ಬಂದಿದೆ.
ಮೂರು ಮಂದಿ ಗುಂಡಿಗೆ ಕಾಲು ಜಾರಿ ಬಿದ್ದಿದ್ದಾರೆ. ಗ್ರಾಮಸ್ಥರು ನೀರಿನಿಂದ ಹೊರತೆಗೆಯುವ ವೇಳೆಗೆ ಮೂವರೂ ಮೃತಪಟ್ಟಿದ್ದಾರೆ. ಅರಸೀಕೆರೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.