ವಿಶ್ವ ಕುಂಚಿಟಿಗರ ಪರಿಷತ್ ವತಿಯಿಂದ ಪ್ರಶಸ್ತಿ ಪ್ರಧಾನ: ಅರ್ಜಿ ಆಹ್ವಾನ
Team Udayavani, Nov 2, 2020, 12:39 PM IST
Representative Image
ತುಮಕೂರು : ವಿಶ್ವ ಕುಂಚಿಟಿಗರ ಪರಿಷತ್ ವತಿಯಿಂದ ಈ ಬಾರಿ ತುಮಕೂರು ಜಿಲ್ಲಾ ವ್ಯಾಪ್ತಿಗೆ ಸೇರಿದ ಕುಂಚಿಟಿಗ ಬಂಧುಗಳಲ್ಲಿನ ಸಾಧಕರಿಗೆ ಹಾಗೂ ಸಮಾಜ ಸೇವಕರಿಗೆ “ಕುಂಚಿಟಿಗ ರತ್ನ”, ‘ಕುಂಚಶ್ರೀ”,”ಕುಂಚಿಟಿಗ ಶಿರೋಮಣಿ” ಹಾಗೂ “ಕುಂಚಿಟಿಗ ಆದರ್ಶ ದಂಪತಿ ಪ್ರಶಸ್ತಿ” ಪ್ರಧಾನ ಮಾಡಲು ನಿರ್ಧರಿಸಿದ್ದು, ಈ ಕುರಿತು ಅರ್ಹ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ತುಮಕೂರು ಜಿಲ್ಲಾ ವ್ಯಾಪ್ತಿಗೆ ಸೇರಿದ ಅರ್ಹ ಕುಂಚಿಟಿಗ ಬಾಂಧವ ವ್ಯಕ್ತಿಗಳು ತಮ್ಮ ವ್ಯಕ್ತಿ ಪರಿಚಯದ ಜೊತೆಗೆ ಒಂದು ಭಾವಚಿತ್ರವನ್ನು ನ. 15ನೇ ತಾರೀಖಿನೊಳಗೆ ಕಳುಹಿಸಬೇಕು ಎಂದು ವಿಶ್ವ ಕುಂಚಿಟಿಗರ ಪರಿಷತ್ತು ಬೆಂಗಳೂರು ಇದರ ಅಧ್ಯಕ್ಷ ಅಂಜನಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಕಳುಹಿಸಬೇಕಾದ ವಿಳಾಸ
ಅಧ್ಯಕ್ಷರು/ ಕಾರ್ಯಾಧ್ಯಕ್ಷರು/ ವ್ಯವಸ್ಥಾಪಕರು,
ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘ,
ಕೆ.ಪಿ.ಟಿ.ಸಿ.ಎಲ್ ರಸ್ತೆ, ಕೋತಿ ತೋಪು,
ತುಮಕೂರು 572 102