135 ವರ್ಷ ಪೂರೈಸಿದ ಉಪ್ಪುಂದ ಸರಕಾರಿ ಮಾದರಿ ಹಿ.ಪ್ರಾ. ಶಾಲೆ

ಉಪ್ಪುಂದ ಕರಾವಳಿ ತೀರದಲ್ಲಿ ಜನ್ಮತಾಳಿದ ಮೊತ್ತ ಮೊದಲ ಶಿಕ್ಷಣ ಸಂಸ್ಥೆ

Team Udayavani, Nov 6, 2019, 4:02 AM IST

dd-10

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

1884 ಶಾಲೆ ಸ್ಥಾಪನೆ
30 ವರ್ಷಗಳ ಬಳಿಕ ಸ್ವಂತ ಜಾಗ ಹಾಗೂ ಕಟ್ಟಡ

ಉಪ್ಪುಂದ: ಉಪ್ಪುಂದ ಕರಾವಳಿ ತೀರದಲ್ಲಿ ಜನ್ಮತಾಳಿದ ಮೊತ್ತ ಮೊದಲ ಶಿಕ್ಷಣ ಸಂಸ್ಥೆ ಎನ್ನುವ ಹೆಗ್ಗಳಿಕೆಯಿರುವ ಉಪ್ಪುಂದ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಈಗ 135 ವರ್ಷ. ವಿಶೇಷವೆಂದರೆ ಶಾಲೆಯು ಸುಮಾರು 30 ವರ್ಷಗಳ ಬಳಿಕ ಸ್ವಂತ ಜಾಗ ಹಾಗೂ ಕಟ್ಟಡ ಹೊಂದುವಂತೆ ಆಯಿತು.

ಶಾಲೆ ಆರಂಭಗೊಂಡಿದ್ದು 1884ರಲ್ಲಿ. ಕೂಸಮ್ಮನ ಬೆಟ್ಟು ಸದಾಶಿವ ಹೊಳ್ಳ ಎಂಬವರ ಮನೆಯಲ್ಲಿ ( ಈಗಿನ ಉಪ್ಪುಂದ ಟೆಲಿಫೋನ್‌ ಎಕ್ಸ್‌ಚೇಂಜ್‌ ಆಫೀಸ್‌ ಬಳಿ) ಗುರುಕುಲ ಮಾದರಿಯಲ್ಲಿ ವಿದ್ಯಾಸೇವೆ ನಡೆಯುತಿತ್ತು. ಇದನ್ನು ಐಗಳ ಮಠ ಎಂದು ಕರೆಯುತ್ತಿದ್ದರು. ಬಳಿಕ ಉಪ್ಪುಂದ ದೇಗುಲದಲ್ಲೂ ವಿದ್ಯಾಭ್ಯಾಸ ನಡೆದಿದೆ. ಅನಂತರ ಬ್ರಿಟಿಷರ ಆಳ್ವಿಕೆಯಲ್ಲಿ ಮೂಲಪಾಠ ಶಾಲೆ ಹೆಸರಿನೊಂದಿಗೆ 3ನೇ ತರಗತಿಯನ್ನು ಶಾಲೆಯಲ್ಲಿ ಆರಂಭಿಸಲಾಯಿತು.

ಪಠ್ಯಕ್ರಮ
1885ರಲ್ಲಿ ರಾಮ ಉಪಾಧ್ಯಯ ಮೊದಲ ಮೂಖ್ಯೋಪಾಧ್ಯರಾಗಿದ್ದರು. 1888ರ ಸುತ್ತೋಲೆಯ
ಪ್ರಕಾರ ವ್ಯವಸಾಯ, ಆರೋಗ್ಯಶಾಸ್ತ್ರ, ತೋಟಗಾರಿಕೆ ವಿಷಯಗಳನ್ನು ಮಕ್ಕಳಿಗೆ ಪಾಠಮಾಡಲಾಗುತ್ತಿತ್ತು. ಶಾಲೆಯಲ್ಲಿ ಮೂರನೇ ತರಗತಿಯವರೆಗೆ ಶಿಕ್ಷಣವಿದ್ದರೂ ಬ್ರಿಟಿಷರು ನಡೆಸುವ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಮಾತ್ರ ಅರ್ಹತಾ ಪ್ರಮಾಣಪತ್ರ ನೀಡಲಾಗುತ್ತಿತ್ತು. 1890ರಲ್ಲಿ ಮೊದಲ ಬಾರಿಗೆ ಬೈಂದೂರಿನ ಕಿರಿಯ ವಿದ್ಯಾರ್ಥಿಗಳ ಛತ್ರದಲ್ಲಿ ನಡೆದ ಪರೀಕ್ಷೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಇಂಗ್ಲಿಷ್‌ಗೆ ಬೇಡಿಕೆ
ಶಾಲೆಗೆ ಒಂದು ಎಕ್ರೆ ಹತ್ತು ಸೆಂಟ್ಸ್‌ ಜಾಗವನ್ನು ಉಪ್ಪುಂದ ಹೊಲ್ಮನೆ ಭಟ್‌ ಅವರ ಕುಟುಂಬ ದಾನವಾಗಿ ನೀಡಿದೆ. ಊರವರ ಕೊಡುಗೆಯಿಂದ ಕಟ್ಟಡ ನಿರ್ಮಿಸಲಾಗಿದೆ. 1915ರಲ್ಲಿ ಶಾಲಾ ಪರಿವೀಕ್ಷಕ ಎಂ. ಪದ್ಮನಾಭಯ್ಯ ಅವರು ಊರಿನವರ ಬೇಡಿಕೆಯಂತೆ 4ನೇ ತರಗತಿಗೆ ಇಂಗ್ಲಿಷ್‌ ಕಲಿಯಲು ವ್ಯವಸ್ಥೆ ಮಾಡಲು ಶಿಫಾರಸು ಮಾಡಿದ್ದರು.

ಹೆಣ್ಣು ಮಕ್ಕಳ ಶಾಲೆ
1915-17ರಲ್ಲಿ ತೋಟಕಾರಿಕಾ ಕ್ಷೇತ್ರದಲ್ಲಿ ಶಾಲೆ ಗಮನಾರ್ಹ ಸಾಧನೆ ಮಾಡಿದೆ. ಇಲ್ಲಿ ಬೆಳೆದ ತರಕಾರಿಗಳನ್ನು ಮಾರಾಟ ಮಾಡಿ ಆದಾಯ ಗಳಿಸಲಾಗುತಿತ್ತು. ಅಧ್ಯಾಪಕ ಬಿಜೂರು ಸುಬ್ಬಣ್ಣ ಭಟ್‌ ತೋಟಗಾರಿಕೆ ಶಿಕ್ಷಣ ನೀಡುತ್ತಿದ್ದರು. ಇದು ಪರಿವೀಕ್ಷಕರ ಮೆಚ್ಚುಗೆಗೆ ಕಾರಣವಾಗಿತ್ತು. ಬಳಿಕ 1929ರಲ್ಲಿ ಉಪ್ಪುಂದ ದೇವಸ್ಥಾನದ ವಠಾರದಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಒಂದು ವಿಶೇಷ ಶಾಲೆ ಆರಂಭಿಸಲಾಯಿತು. 1935ರಲ್ಲಿ ಅದನ್ನು ಈ ಶಾಲೆಯೊಂದಿಗೆ ಸಂಯೋಜಿಸಲಾಯಿತು. ಆ ಸಂದರ್ಭ 68 ಹುಡುಗರು ಮತ್ತು 11 ಹುಡುಗಿಯರು ಇದ್ದರು. 1940ರಲ್ಲಿ 1-5ರ ವರೆಗೆ ತರಗತಿಗಳನ್ನು ಆರಂಭಿಸಲಾಯಿತು. ಆರು ಮಂದಿ ಅಧ್ಯಾಪಕರು, 130 ವಿದ್ಯಾರ್ಥಿ ಮತ್ತು 37 ವಿದ್ಯಾರ್ಥಿನಿಯರು ಇದ್ದರು. 1918ರಲ್ಲಿ ಹೈಯರ್‌ ಎಲಿಮೆಂಟರಿ ಶಾಲೆಯನ್ನಾಗಿ ಮಾಡಲು ಶಿಫಾರಸು ಮಾಡಲಾಗಿತ್ತಾದರೂ 1972ರಲ್ಲಿ ಹೈಯರ್‌ ಎಲಿಮೆಂಟರಿ ಶಾಲೆಯಾಗಿ ಪರಿವರ್ತನೆಗೊಂಡಿತು. 1996ರ ಶಾಲೆಯ ಶತಮಾನೋತ್ಸವ ಆಚರಣೆಯ ಸಂದರ್ಭ 1,146 ವಿದ್ಯಾರ್ಥಿಗಳು, 11ಮಂದಿ ಶಿಕ್ಷಕರು, 5 ಜನ ಗೌರವ ಶಿಕ್ಷಕರು ಇದ್ದರು.

ವಿದ್ಯಾರ್ಥಿಗಳಿಗೆ ಅನುಗುಣವಾಗಿ ಶಾಲೆಗೆ ಹೊಸ ಕೊಠಡಿಯ ಅಗತ್ಯ ಇದೆ. ಇದಕ್ಕೆ ಹಳೆ ವಿದ್ಯಾರ್ಥಿಗಳು, ದಾನಿಗಳು ಸಹಕಾರ ನೀಡಬೇಕಿದೆ. ಹಾಗೂ ಶಿಕ್ಷರ ಕೊರತೆ ಇದೆ ಇದಕ್ಕೆ ಸಂಬಂಧಪಟ್ಟವರು ಸ್ಪಂದಿಸಬೇಕಿದೆ.
-ವೆಂಕಪ್ಪ ಉಪ್ಪಾರ್‌ , ಮುಖ್ಯ ಶಿಕ್ಷಕರು

ಈಗ ಶಾಲೆಯ ಮೇಲಿನ ಗೌರವ ಮತ್ತು ಅಭಿಮಾನ ಇಲ್ಲ. ಜನರ ಮನಸ್ಸಿನಲ್ಲಿ ನಮ್ಮ ಶಾಲೆಯಾಗಿ ಉಳಿದಿಲ್ಲ. ಸರಕಾರಿ ಶಾಲೆಯಾಗಿ ಬಿಟ್ಟಿದೆ. ನಮ್ಮದು ಎನ್ನುವ ಭಾವನೆ ಇಲ್ಲದೆ ಸರಕಾರಿ ಶಾಲೆಯಾಗಿ ಇದ್ದರೆ ನಮ್ಮೂರಿನ ಶಾಲೆ ಉಳಿಯಲು ಸಾಧ್ಯವಿಲ್ಲ .
-ಚಂದ್ರಶೇಖರ ಹೊಳ್ಳ ಉಪ್ಪುಂದ, ಸಾಹಿತಿ, ಹಿರಿಯ ವಿದ್ಯಾರ್ಥಿ

-  ಕೃಷ್ಣ ಬಿಜೂರು

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.