ಅಪಾಯವನ್ನು ಆಹ್ವಾನಿಸುತ್ತಿದೆ ಅಜ್ಜರಕಾಡು ಮಕ್ಕಳ ಪಾರ್ಕ್
Team Udayavani, Aug 11, 2021, 7:05 AM IST
ಉಡುಪಿ: ನಗರದ ಹೃದಯ ಭಾಗದ ಅಜ್ಜರಕಾಡು ಮಕ್ಕಳ (ದೊಡ್ಡ ಪಾರ್ಕ್) ಪಾರ್ಕ್ನಲ್ಲಿ ತುಕ್ಕು ಹಿಡಿದ ಆಟಿಕೆಗಳು ಮಕ್ಕಳ ಜೀವಕ್ಕೆ ಅಪಾಯವನ್ನು ಆಹ್ವಾನಿಸುತ್ತಿವೆ.
ಅಜ್ಜರಕಾಡು ಪಾರ್ಕ್ನಲ್ಲಿ ಬಹಳ ವರ್ಷಗಳ ಹಿಂದೆ ಎರಡು ಮಕ್ಕಳ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಚಿಕ್ಕ ಪಾರ್ಕ್ ಇತ್ತೀಚೆಗಷ್ಟೇ ಅಭಿವೃದ್ಧಿಪಡಿಸಿ ಹೊಸ ಮಕ್ಕಳ ಆಟದ ಪರಿಕರಗಳನ್ನು ಆಳವಡಿಸಲಾಗಿದೆ. ಪ್ರಸ್ತುತ ಮಕ್ಕಳಿಗೆ ತರಗತಿಗಳಿಲ್ಲದಿರುವುದರಿಂದ ಪಾರ್ಕ್ಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಸಣ್ಣ ಪಾರ್ಕ್ನಲ್ಲಿ ಆಟವಾಡಲು ಅವಕಾಶ ಸಿಗದವರು, ಸಮೀಪದ ಇನ್ನೊಂದು ಪಾರ್ಕ್ಗೆ(ದೊಡ್ಡ ಪಾರ್ಕ್) ಹೋಗುತ್ತಿದ್ದಾರೆ. ಆದರೆ ಇಲ್ಲಿನ ಆಟಿಕೆಗಳಲ್ಲಿ ಮಕ್ಕಳನ್ನು ಕೂರಿಸುವ ಮುನ್ನ ಎಚ್ಚರ ವಹಿಸುವುದು ಅಗತ್ಯ. ಏಕೆಂದರೆ ಇಲ್ಲಿರುವ ಕೆಲವು ಆಟಿಕೆಗಳು ತುಂಡಾಗಿದ್ದು, ತುಕ್ಕು ಹಿಡಿದು ಮುರಿದು ಬೀಳುವ ಆತಂಕವಿದೆ.
ಚೂಪಾಗಿರುವ ಜಾರುಬಂಡಿ:
ಜಾರುಬಂಡಿ ಮಕ್ಕಳ ಪ್ರಿಯವಾದ ಆಟದಲ್ಲಿ ಒಂದು. ಆದರೆ ಇಲ್ಲಿನ ಜಾರುಬಂಡಿಯಲ್ಲಿ ಕುಳಿತರೆ ಚರ್ಮವೇ ಜಾರಿ ಹೋಗುವ ಸಾಧ್ಯತೆಯಿದೆ. ಜಾರು ಬಂಡಿಯ ಕೆಳಭಾಗವನ್ನು ಸಮ ತಟ್ಟಾಗಿ ನಿರ್ಮಿಸಲಾಗುತ್ತದೆ. ಮಕ್ಕಳು ಮೇಲಿನಿಂದ ಜಾರುತ್ತಾ ಬಂದು ಸಮತಟ್ಟಿನ ಜಾಗದಲ್ಲಿ ಕುಳಿತು ಕೊಳ್ಳುವಂತಾಗಲು ಈ ಕ್ರಮ. ಆದರೆ ಇಲ್ಲಿ ಜಾರು ಬಂಡಿಯ ಕೆಳಗಿನ ಭಾಗ (ಮಕ್ಕಳ ಜಾರಿ ಬಂದು ಕುಳಿತುಕೊಳ್ಳುವ ಸ್ಥಳ) ತುಕ್ಕು ಹಿಡಿದಿದ್ದು, ಮಕ್ಕಳ ಮೃದು ಚರ್ಮವೇ ಕುಯ್ದು ಹೋಗುವಂತಿದೆ.
ತುಂಡಾದ ಕಬ್ಬಿಣದ ರಾಡ್ :
ಪಾರ್ಕ್ನಲ್ಲಿ ಸುಮಾರು ಮೂರು ಉಯ್ನಾಲೆ ಇದೆ. ಅದರಲ್ಲಿ ಒಂದು ಮಾತ್ರ ಬಳಕೆ ಮಾಡುವ ಸ್ಥಿತಿಯಲ್ಲಿದೆ. ಉಳಿದ ಎರಡರಲ್ಲಿ ಒಂದು ಉಯ್ನಾಲೆಯ ಕಬ್ಬಿಣದ ರಾಡ್ ತುಂಡಾಗಿದೆ. ಇನ್ನೊಂದರಲ್ಲಿ ಉಯ್ನಾಲೆ ಕಣ್ಮರೆಯಾಗಿ ರಾಡ್ ಮಾತ್ರ ಇದೆ. ಪ್ರಸ್ತುತ ಮಕ್ಕಳು ತುಂಡಾದ ರಾಡ್ನಲ್ಲಿರುವ ಉಯ್ನಾಲೆಯಲ್ಲಿ ಆಟವಾಡುತ್ತಿದ್ದು ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸಿದೆ.
ಚಿಕ್ಕ ಪಾರ್ಕ್ನಲ್ಲಿ ಸಂಜೆಯ ಮಕ್ಕಳು ವೇಳೆ ತುಂಬಿ ತುಳುಕುತ್ತಾರೆ. ಅದಕ್ಕಾಗಿ ಮಕ್ಕಳು ದೊಡ್ಡ ಪಾರ್ಕ್ಗೆ ಹೋಗಬೇಕಾಗಿದೆ. ಆದರೆ ಇಲ್ಲಿನ ಆಟಿಕೆ ಸಾಮಗ್ರಿಗಳು ಶಿಥಿಲಾವಸ್ಥೆಯಲ್ಲಿದೆ. ಶೀಘ್ರದಲ್ಲಿ ದುರಸ್ತಿ ಮಾಡಿ ಮಕ್ಕಳು ಆಟವಾಡಲು ಅನುಕೂಲ ಮಾಡಬೇಕು.– ವಿದ್ಯಾ, ಸ್ಥಳೀಯರು
ಪಾರ್ಕ್ನಲ್ಲಿ ಸಮಸ್ಯೆ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲಿ ಅಗತ್ಯವಿರುವ ಕ್ರಮ ಕೈಗೊಳ್ಳಲಾಗುತ್ತದೆ. ವಿದ್ಯುತ್ ಕಂಬದಲ್ಲಿ ನೇತಾಡುತ್ತಿದ್ದ ವೈರ್ಗಳನ್ನು ದುರಸ್ತಿ ಮಾಡಲಾಗಿದೆ. -ರಶ್ಮಿ ಚಿತ್ತರಂಜನ್ ಭಟ್,-ಅಜ್ಜರಕಾಡು ವಾರ್ಡ್ ಸದಸ್ಯೆ ಉಡುಪಿ ನಗರಸಭೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?
Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ