ಸ್ವರ್ಣ ಖರೀದಿಗೆ ಪ್ರಸಕ್ತ ದಿನವೇ “ಅಕ್ಷಯ ತೃತೀಯಾ’: ಜಯ ಆಚಾರ್ಯ
Team Udayavani, May 7, 2019, 6:10 AM IST
ಉಡುಪಿ: ಬಂಗಾರ ಖರೀದಿಸುವ ಹಬ್ಬವಾದ, ಸ್ವರ್ಣಪ್ರಿಯರ ಬಹು ನಿರೀಕ್ಷಿತ ದಿನವೇ “ಅಕ್ಷಯ ತೃತೀಯಾ’. ಈ ದಿನವು ತ್ರೇತಾಯುಗದ ಪ್ರಾರಂಭದ ದಿನ, ಶ್ರೀಕೃಷ್ಣ ಪರಮಾತ್ಮ ದ್ರೌಪದಿಗೆ ಅಕ್ಷಯ ಪಾತ್ರೆ ನೀಡಿದ ದಿನ, ಪರಶುರಾಮರ ಜನ್ಮದಿನವಾಗಿಯೂ ಮಹತ್ವ ಪಡೆದಿದೆ. ಈ ದಿನ ಸ್ವರ್ಣ ಖರೀದಿಗೆ ಉತ್ತಮ ಮುಹೂರ್ತವಾಗಿಯೂ ಪರಿಗಣಿಸಲ್ಪಟ್ಟಿದೆ ಎಂದು ಕರ್ನಾಟಕ ಸ್ಟೇಟ್ ಜುವೆಲರ್ ಫೆಡರೇಶನ್ ಚೇರ್ಮನ್ ಜಯ ಆಚಾರ್ಯ ಜಿ. ತಿಳಿಸಿದ್ದಾರೆ.
ನೋಟ್ ಬ್ಯಾನ್ ಸಂದರ್ಭ ಸ್ವರ್ಣೋದ್ಯಮಕ್ಕೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗಿತ್ತು. ಆದರೆ ಭಾರತೀಯರು ಚಿನ್ನದ ಮೇಲೆ ಇಟ್ಟಿರುವ ವಿಶ್ವಾಸದಿಂದ ಇದು ಅಷ್ಟೊಂದು ಪರಿಣಾಮ ಬೀರಿಲ್ಲ. ಈ ಬಾರಿಯ ಅಕ್ಷಯ ತೃತೀಯಾದಂದು ಬಹುತೇಕ ಸ್ವರ್ಣ ಮಳಿಗೆಗಳು ಬೆಳಗ್ಗೆ 7ರಿಂದ ರಾತ್ರಿ 9-10ರ ವರೆಗೆ ಗ್ರಾಹಕರಿಗಾಗಿ ತೆರೆಯಲಿದ್ದು, ಗ್ರಾಹಕರಿಂದಲೂ ಉತ್ತಮ ಸ್ಪಂದನೆ ದೊರಕುವ ನಿರೀಕ್ಷೆ ಇದೆ ಎಂದರು.
“ಸ್ವರ್ಣ ಜ್ಞಾನ’ ಕಾರ್ಯಕ್ರಮ
ರಾಜ್ಯದ 30 ಜಿಲ್ಲೆಗಳ ಅಸೋಸಿಯೇಶನ್ ಅಧ್ಯಕ್ಷರನ್ನು ನಿರ್ದೇಶಕರನ್ನಾಗಿ ಹೊಂದಿದ ಕೆಜೆಎಫ್ ಸಂಸ್ಥೆ ರಾಜ್ಯದ ಮೂಲೆ ಮೂಲೆಯಲ್ಲಿರುವ ಜುವೆಲರಿ ಉದ್ಯಮಿಗಳು, ಕೆಲಸಗಾರರನ್ನು ಪ್ರತಿನಿಧಿಸುತ್ತಿದ್ದು, ಉದ್ಯಮದ ಸರ್ವತೋಮುಖ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದೆ. ಜುವೆಲರ್ಗಳು ಎದುರಿಸುತ್ತಿರುವ ಎಲ್ಲ ಬಗೆಯ ಸಮಸ್ಯೆಗಳು ಮತ್ತು ಪರಿಹಾರಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಭಾಗಗಳಲ್ಲಿ “ಸ್ವರ್ಣ ಜ್ಞಾನ’ ಎಂಬ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಇದರ ಪ್ರಯೋಜನವನ್ನು ಎಲ್ಲ ಜುವೆಲರ್ಗಳು ಪಡೆಯುವಂತೆ ಪ್ರೋತ್ಸಾಹಿಸಲಾಗುತ್ತಿದೆ ಎಂದವರು ತಿಳಿಸಿದರು.
ಜೆಮ್ ಆ್ಯಂಡ್ ಜುವೆಲರಿಗೆ ಕೌನ್ಸಿಲ್ ರಚನೆ
ದೇಶದಲ್ಲಿ ಜಿಎಸ್ಟಿ ಅಳವಡಿಕೆ ಸಂದರ್ಭ ಜಿಎಸ್ಟಿ ಕಾನೂನು ಪ್ರಕಾರ ಮಿತಿಯು ಕನಿಷ್ಠ ಶೇ. 5, ಗರಿಷ್ಠ ಶೇ. 28 ಇದ್ದಾಗಲೂ ಫೆಡರೇಶನ್ ಕೇಂದ್ರ ಸರಕಾರದೊಂದಿಗೆ ಚರ್ಚಿಸಿ, ಮನವರಿಕೆ ಮಾಡಿ ಸ್ವರ್ಣೋದ್ಯಮದಲ್ಲಿ ಮಿತಿಗಿಂತಲೂ ಕನಿಷ್ಠ ಶೇ. 3 ಬರುವಂತೆ ಮಾಡಲಾಗಿದೆ. ಕೇಂದ್ರ ಸರಕಾರವು ನೀತಿ ಆಯೋಗದ ಅಧೀನದಲ್ಲಿ ಎಲ್ಲ ರಂಗಗಳಲ್ಲಿಯೂ ಆಯಾಯ ಉದ್ಯಮಕ್ಕೆ ಸಂಬಂಧಪಟ್ಟವರೇ ಸದಸ್ಯರಾಗಿದ್ದ ಡೊಮೆಸ್ಟಿಕ್ ಕೌನ್ಸಿಲ್ (ದೇಶೀಯ ಮಂಡಳಿ) ಅನ್ನು ಸ್ಥಾಪಿಸಿದ್ದು, ಜೆಮ್ ಆ್ಯಂಡ್ ಜುವೆಲರಿ ವಿಭಾಗಕ್ಕೂ ಕೌನ್ಸಿಲ್ ರಚಿಸಲಾಗಿದೆ.
ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಸುರೇಶ್ ಪ್ರಭು ಅಧೀನದಲ್ಲಿ ಬರುವ ಈ ಕೌನ್ಸಿಲ್ಗೆ ದೇಶದಲ್ಲಿರುವ ಆಯ್ದ 13 ಫೆಡರೇಶನ್ ಚೇರ್ಮನ್ಗಳನ್ನು ಸದಸ್ಯರನ್ನಾಗಿ ಆಯ್ಕೆ ಮಾಡಿದೆ. 13 ಜನರಲ್ಲಿ ನಾನೂ ಕೂಡ ಒಬ್ಬನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಜಯ ಆಚಾರ್ಯ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ