ಶಿಕ್ಷಕರು, ಕೊಠಡಿ, ಪೀಠೊಪಕರಣಗಳ ಕೊರತೆಯ ಆತಂಕ
ವಳಕಾಡು ಸ.ಮಾ.ಹಿ.ಪ್ರಾ.ಶಾಲೆ:1ನೇ ತರಗತಿಯಿಂದ ಆಂಗ್ಲಮಾಧ್ಯಮ
Team Udayavani, May 28, 2019, 6:10 AM IST
ಉಡುಪಿ: ಈ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲಮಾಧ್ಯಮ ಶಿಕ್ಷಣ ಆರಂಭವಾಗಲಿರುವ ಶಾಲೆಗಳಲ್ಲಿ ಉಡುಪಿಯ ವಳಕಾಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೂಡ ಒಂದು. ಶೈಕ್ಷಣಿಕ ಗುಣಮಟ್ಟ, 6ನೇ ತರಗತಿಯಿಂದಲೇ ಆಂಗ್ಲಮಾಧ್ಯಮ ಮೊದಲಾದವುಗಳಿಂದ ಗಮನ ಸೆಳೆದಿರುವ ಈ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ವರ್ಷದಿಂದ ಒಂದನೇ ತರಗತಿಯಿಂದಲೇ ಆಂಗ್ಲಮಾಧ್ಯಮ ಶಿಕ್ಷಣ ಆರಂಭವಾಗಲಿದೆ. ಆದರೆ ಶಾಲೆಯಲ್ಲಿ ಶಿಕ್ಷಕರು, ಕೊಠಡಿ ಮತ್ತು ಪೀಠೊಪಕರಣದ ಕೊರತೆ ಈಗಾಗಲೇ ಇದೆ. ಇದು ಈ ವರ್ಷ ಹೆಚ್ಚಾಗಬಹುದು ಎಂಬ ಆತಂಕವಿದೆ.
ತುಂಬಿ ತುಳುಕುವ ಶಾಲೆ
ವಳಕಾಡು ಸ.ಹಿ.ಪ್ರಾ.ಶಾಲೆಯಲ್ಲಿ ಕಳೆದ ವರ್ಷ ಕೂಡ 647 ಮಂದಿ ವಿದ್ಯಾರ್ಥಿಗಳಿದ್ದರು. ಒಟ್ಟು 17 ವಿಭಾಗಗಳಲ್ಲಿ ತರಗತಿಗಳು ನಡೆದಿವೆ. ಕಳೆದ ವರ್ಷ ಒಂದನೇ ತರಗತಿಗೆ(ಕನ್ನಡ ಮಾಧ್ಯಮ) ಒಟ್ಟು 60 ಮಕ್ಕಳು ದಾಖಲಾಗಿದ್ದರು. ಎ, ಬಿ,ಸಿ ಮತ್ತು ಡಿ ಎಂದು ನಾಲ್ಕು ವಿಭಾಗ ಮಾಡಲಾಗಿತ್ತು. ಈ ವರ್ಷ ಮತ್ತಷ್ಟು ಹೆಚ್ಚು ಮಕ್ಕಳು ದಾಖಲಾತಿ ಪಡೆಯುವ ನಿರೀಕ್ಷೆ ಇದೆ.
ಮೇ 27ರವರೆಗೆ 50ಕ್ಕೂ ಅಧಿಕ ಮಕ್ಕಳು ಒಂದನೇ ತರಗತಿಗೆ ದಾಖಲಾತಿ ಪಡೆದಿದ್ದು ಇದರಲ್ಲಿ ಹೆಚ್ಚಿನ ಮಕ್ಕಳ ಹೆತ್ತವರು ಆಂಗ್ಲ ಮಾಧ್ಯಮವನ್ನೇ ಆಯ್ಕೆ ಮಾಡಿದ್ದಾರೆ. ಒಂದನೇ ತರಗತಿಗೆ ಮಾತ್ರವಲ್ಲದೆ ನಾನಾ ಕಾರಣಗಳಿಂದ ಮೇಲಿನ ತರಗತಿಗಳಿಗೆ ಬೇರೆ ಶಾಲೆಗಳಿಂದ ಬಂದು ಈ ಶಾಲೆಗೆ ಈಗಾಗಲೇ 70 ಮಂದಿ ಸೇರ್ಪಡೆಯಾಗಿದ್ದಾರೆ. ಕಳೆದ ವರ್ಷ ಒಂದನೇ ತರಗತಿ(60) ಮತ್ತು ಇತರ ತರಗತಿಗಳು ಸೇರಿದಂತೆ ಶಾಲೆಗೆ 200 ಮಂದಿ ಮಕ್ಕಳು ದಾಖಲಾಗಿದ್ದರು. ಈ ವರ್ಷ ಆಂಗ್ಲಮಾಧ್ಯಮ ಬೋಧನೆಗಾಗಿ ಇಬ್ಬರು ಶಿಕ್ಷಕರಿಗೆ ತರಬೇತಿ ನಡೆದಿದೆ.
ಶಿಕ್ಷಕರ ಕೊರತೆ
ಪ್ರಸ್ತುತ ಇಲ್ಲಿ 11 ಮಂದಿ ಮಾತ್ರ ಖಾಯಂ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳ ಅನುಪಾತ ಪ್ರಕಾರ 20 ಮಂದಿ ಇರಬೇಕಿತ್ತು. ಕಳೆದ ವರ್ಷ 5 ಮಂದಿ ಅತಿಥಿ ಶಿಕ್ಷಕರು, ಕಂಪ್ಯೂಟರ್ ಹಾಗೂ ಗೌರವ ಶಿಕ್ಷಕರ ಸೇವೆಯೊಂದಿಗೆ ತರಗತಿಗಳು ನಡೆದಿದ್ದವು. ಇಲಾಖೆ ಸಹಕರಿಸಿತ್ತು. ಆದರೆ ಈ ಬಾರಿ ಹೇಗೆಂದು ಗೊತ್ತಿಲ್ಲ. ಇನ್ನೂ 9 ಮಂದಿ ಶಿಕ್ಷಕರ ಅಗತ್ಯವಿದೆ. ಶಿಕ್ಷಕರ ಸಂಖ್ಯೆ ಕಡಿಮೆಯಾದರೆ ಅದರಿಂದ ಮೇಲಿನ ತರಗತಿಗಳ ಮೇಲೂ ಪ್ರಭಾವ ಬೀರುತ್ತದೆ. ಕೊಠಡಿಗಳ ಸಂಖ್ಯೆಯೂ ಕಡಿಮೆ ಇದೆ. ಕಳೆದ ವರ್ಷ ಎರಡು ಕೊಠಡಿಗಳನ್ನು ಪ್ರೌಢಶಾಲೆಯವರು ಪಡೆದಿದ್ದರು. ಅದನ್ನು ವಾಪಸ್ಸು ನೀಡಿದರೆ ದೊಡ್ಡ ಸಮಸ್ಯೆಯಾಗದು. ಇಲ್ಲವಾದರೆ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಶಾಲೆಯ ಮುಖ್ಯೋಪಾಧ್ಯಾಯರು.
ಖುಷಿಯಾಗಿದೆ
ನನ್ನ ದೊಡ್ಡ ಮಗಳು ವಳಕಾಡು ಶಾಲೆಯಲ್ಲಿ 4ನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾಳೆ. ಎರಡನೆಯವಳನ್ನು ಕೂಡ ಇದೇ ಶಾಲೆಯಲ್ಲಿ ಓದಿಸಲು ನಿರ್ಧರಿಸಿದ್ದೆ. ಇದೀಗ ಇಲ್ಲಿ ಒಂದನೇ ತರಗತಿಯಿಂದ ಆಂಗ್ಲಮಾಧ್ಯಮ ಆರಂಭವಾಗುತ್ತಿರುವುದು ಖುಷಿಯಾಗಿದೆ. ಆದರೆ ಇಲ್ಲಿ ಕ್ಲಾಸ್ರೂಮ್, ಶಿಕ್ಷಕರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಇಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವಾಗಲೂ ಗುಣಮಟ್ಟ ಉತ್ತಮವೇ ಇತ್ತು. ಈ ವರ್ಷ ಒಂದನೇ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಇದಕ್ಕೆ ಪೂರಕವಾಗಿ ಶಿಕ್ಷಕರು, ಕೊಠಡಿಗಳ ಅಗತ್ಯವಿದೆ. ಇಲಾಖೆಯ ಜತೆಗೆ ದಾನಿಗಳು ಕೂಡ ಸಹಕರಿಸಿದರೆ ಒಳ್ಳೆಯದು.
– ರಶ್ಮಿ, ಹೆತ್ತವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ