ನೀರಿನ ಸುಸ್ಥಿರ ನಿರ್ವಹಣೆಗೆ ಜಾಗೃತಿ ಅಗತ್ಯ


Team Udayavani, Apr 6, 2017, 3:03 PM IST

06-REPORTER-17.jpg

ಉಡುಪಿ: ಕರಾವಳಿ ಪ್ರದೇಶಗಳೆಂದರೆ ಸಮೃದ್ಧ ನಾಡೆಂದು ಜನಜನಿತವಾಗಿತ್ತು. ಆದರೆ ಈಗ ಉಡುಪಿ ಹಾಗೂ ದ. ಕ. ಜಿಲ್ಲೆಗಳಲ್ಲೂ ನೀರಿಗಾಗಿ ತತ್ವಾರ ಪಡುವ ಪರಿಸ್ಥಿತಿ ಉಂಟಾಗಿದೆ. ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದ್ದು, ಒಂದು ರೀತಿಯಲ್ಲಿ ನಾವು ಈಗ ಪಡುತ್ತಿರುವ ಬವಣೆಗೆ ನಾವೇ ಕಾರಣ ಎಂದರೂ ತಪ್ಪಲ್ಲ. ಇರುವ ಅಲ್ಪ ನೀರನ್ನು ಅನಗತ್ಯ ಪೋಲು ಮಾಡದೇ ಸಮರ್ಪಕವಾಗಿ ಬಳಸುವ ಜಾಗೃತಿ ನಮ್ಮೆಲ್ಲರಲ್ಲಿ ಮೂಡಬೇಕಿದೆ.

ಸಾವಿರವಾದರೂ ಅಚ್ಚರಿಯಿಲ್ಲ
5 ವರ್ಷಗಳ ಹಿಂದೆ ಬೋರ್‌ವೆಲ್‌ ಕೊರೆದಾಗ ಕೇವಲ 150ರಿಂದ 200 ಅಡಿ ಆಳದಲ್ಲಿ ನೀರು ಲಭ್ಯವಾಗುತ್ತಿದ್ದರೆ, ಈಗ 400 ಅಡಿಗಿಂತ ಹೆಚ್ಚು ಕೊರೆದರಷ್ಟೇ ನೀರಿನ ಸುಳಿವು ಸಿಗುತ್ತಿದೆ. ಕೆಲವು ಕಡೆಗಳಲ್ಲಿ 700 ಅಡಿ ಆಳದ ವರೆಗೂ ಕೊರೆಯಿಸಿದರೂ ನೀರು ಸಿಗದ ನಿದರ್ಶನ ಕೂಡ ಇದೆ. ಇನ್ನು ಒಂದೆರಡು ವರ್ಷಗಳಲ್ಲಿ ಇದು ಸಾವಿರಕ್ಕೆ ತಲುಪಿದರೂ ಅಚ್ಚರಿಯಿಲ್ಲ ಎನ್ನುತ್ತಾರೆ ಜಲತಜ್ಞರು. 

ಮತ್ತೆ ಮಳೆ ಕಡಿಮೆ
ಕಳೆದ  ವರ್ಷವೇ   ಕಡಿಮೆ ಪ್ರಮಾಣದಲ್ಲಿ ಮಳೆ ಯಾಗಿರುವುದರಿಂದ ರಾಜ್ಯ ಭೀಕರ ಬರಕ್ಕೆ ತುತ್ತಾಗಿದ್ದು, ಗಾಯದ ಮೇಲಿನ ಬರೆ ಎನ್ನುವಂತೆ ಈ ಸಲವೂ ವಾಡಿಕೆಗಿಂತ ಶೇ. 5 ರಷ್ಟು  ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿರುವುದು ಆತಂಕಕಾರಿ ಸಂಗತಿ. ಕಳೆದ ವರ್ಷ ಒಟ್ಟಾರೆ ಮುಂಗಾರಿನಲ್ಲಿ ಶೇ. 18 ಹಾಗೂ ಹಿಂಗಾರಿನಲ್ಲಿ ಶೇ. 68ರಷ್ಟು ಮಳೆ ಕೊರತೆ  ಆದರೆ ಜಿಲ್ಲೆಯಲ್ಲಿ ಮುಂಗಾರು ಹಾಗೂ ಹಿಂಗಾರಿನಲ್ಲಿ ಶೇ. 25.85ರಷ್ಟು ಮಳೆ ಕಡಿಮೆಯಾಗಿದೆ.

ಕಾರಣ ಏನು?
ಭೂಮಿಯ ಅಂತರ್‌ಜಲ ಮಟ್ಟ ದಿನೇ ದಿನೇ ಕುಸಿಯುತ್ತಿರುವುದಕ್ಕೆ ಜಲತಜ್ಞರು ಹಲವಾರು ಕಾರಣಗಳನ್ನು ಕೊಡುತ್ತಾರೆ. ಸಕಾಲಿಕವಾಗಿ ಮತ್ತು ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದು. ಭೂಮಿಗೆ ಬಿದ್ದ ಮಳೆ ನೀರು ಸಮರ್ಪಕವಾದ ಬಳಕೆ ಮಾಡದಿರುವುದು. ಕಡಿಮೆಯಾಗುತ್ತಿರುವ ಕೃಷಿ ಮೇಲಿನ ಆಸಕ್ತಿ. ಹೌದು ಇದು ಕೂಡ ಅಂತರ್‌ಜಲ ಮಟ್ಟ ಕುಸಿಯಲು ಪ್ರಮುಖ ಕಾರಣವಾಗಿದೆ. ಗದ್ದೆಗಳಲ್ಲಿ ಪ್ರತಿ ವರ್ಷ ಎರಡು ಕೊಯ್ಲುಗಳಲ್ಲಿ ಭತ್ತ ಅಥವಾ ಇನ್ನು ಏನೇ ಕೃಷಿ ಮಾಡಿದರೂ ಅಲ್ಲಿ ಭೂಮಿ ಹದವಾಗಿ ನೀರು ಭೂಮಿಗೆ ಸೇರುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಆದರೆ ಈಗ ಕೆಲವರು ಅಂತಹ ಗದ್ದೆಗಳನ್ನು ಹಡಿಲು ಬಿಟ್ಟು, ನೀರಿಂಗಿಸುವಂತಹ ಯಾವುದೇ ಕಾರ್ಯ ಆಗುತ್ತಿಲ್ಲ. 

ಹೇಗೆ ಭೂಮಿಗೆ…!
ಕೃಷಿ ಪ್ರದೇಶಗಳಲ್ಲಿ ಏನಿಲ್ಲವೆಂದರೂ ವರ್ಷದಲ್ಲಿ ಕನಿಷ್ಠ 3-4 ತಿಂಗಳು ನೀರು ನಿಲ್ಲುವ ವ್ಯವಸ್ಥೆಯನ್ನು ಕೃಷಿಕರು ಮಾಡುತ್ತಿದ್ದರು. ಅದರಿಂದ ಸಾಮಾನ್ಯವಾಗಿ ಭೂಮಿ ಯೊಳಗಿನ ನೀರಿನ ಮಟ್ಟವು ಏರಿಕೆಯಾಗುತ್ತದೆ. ಆದರೆ ಈಗ ಕೃಷಿ ಪ್ರದೇಶಗಳೇ ಕಡಿಮೆಯಾಗಿ ಅಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ತಲೆಯೆತ್ತಿ ನಿಂತಿವೆ. ಇಲ್ಲಿ ಎಷ್ಟೇ ಮಳೆ ಬಿದ್ದರೂ ಅದು ಹೇಗೆ ಭೂಮಿಗೆ ಸೇರುತ್ತದೆ ಹೇಳಿ. 

ಜಾಗೃತರಾಗದಿದ್ದರೆ ಬವಣೆ!
ನಾವು ಇಂದು ಬಳಸುವ ನೀರು ಅದು ಮುಂದಿನ ಪೀಳಿಗೆಯದು ಎಂದು ನಮಗೆ ಅರಿವಾಗುವುದು ಯಾವಾಗ? ಈಗಾಲಾದರೂ ಎಚ್ಚೆತ್ತುಕೊಂಡು, ಕೃಷಿ ಪ್ರದೇಶಗಳನ್ನು ಉಳಿಸುವ ಮೂಲಕ, ಮನೆಯ ಸುತ್ತಮುತ್ತ ನೀರಿಂಗಿಸುವ, ಮಳೆ ಕೊಯ್ಲಿನಂತಹ ಕಾರ್ಯ ಮಾಡುವುದರ ಜತೆಗೆ ಇರುವ ಅಲ್ಪ ನೀರನ್ನೇ ಸುಸ್ಥಿರವಾಗಿ ಬಳಸಲು ಕಲಿಯದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿನ ಪರಿಸ್ಥಿತಿಗಳನ್ನು ಎದುರಿಸಬೇಕಾಗಬಹುದು.

ಬಜೆ ಅಣೆಕಟ್ಟು ನೀರಿನ ಮಟ್ಟ  ಮತ್ತಷ್ಟು  ಕುಸಿತ
ಸ್ವರ್ಣ ನದಿಯ ಬಜೆ ಅಣೆಕಟ್ಟಿನಲ್ಲಿ  ನೀರಿನ ಮಟ್ಟ  ಮತ್ತೆ ಕುಸಿತ ಕಂಡಿದೆ. ಬುಧವಾರ ನೀರಿನ ಮಟ್ಟ 3.10 ಮೀ. ಇತ್ತು. ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 4.32 ಮೀ. ಇತ್ತು. ಅಂದರೆ 1. 22 ಮೀ. ಕಡಿಮೆ ಇದೆ. ಮಂಗಳವಾರ ನೀರಿನ ಮಟ್ಟ  3.12ಮೀ. ಇತ್ತು.  

ಜಿಲ್ಲೆಯ ಅಂತರ್ಜಲ ಮಟ್ಟ
ವರ್ಷ            ಪ್ರಮಾಣ
2012          6.38
2013          6.22
2014          6.30
2015          5.50
2016          5.74

ಪ್ರಶಾಂತ್‌ ಪಾದೆ
 

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-uv-fusion

Devotion: ಭಕ್ತಿಯ ಅರ್ಥವಾದರೂ ಏನು?

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.