ಕಾವಡಿ: ಅಕ್ರಮ ಮರಳು ದಕ್ಕೆಗೆ ದಾಳಿ; ಐದು ದಕ್ಕೆಗಳ ನಾಶ
Team Udayavani, Apr 6, 2017, 2:57 PM IST
ಕೋಟ: ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ದಕ್ಕೆಗಳ ಮೇಲೆ ಕಂದಾಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ದಕ್ಕೆಗಳನ್ನು ನಾಶಗೊಳಿಸಿದ ಘಟನೆ ಎ. 5ರಂದು ವಡ್ಡರ್ಸೆ ಗ್ರಾ.ಪಂ. ವ್ಯಾಪ್ತಿಯ ಕಾವಡಿ ಹಾಗೂ ಹೊಸಾಳದಲ್ಲಿ ನಡೆಯಿತು.
ಅಕ್ರಮ ಮರಳು ದಕ್ಕೆ ನಾಶ
ವಡ್ಡರ್ಸೆ ಗ್ರಾ.ಪಂ. ವ್ಯಾಪ್ತಿಯ ಕಾವಡಿ ಹಾಗೂ ಹೊಸಾಳದ ಐದು ಕಡೆಗಳಲ್ಲಿ ಅಕ್ರಮ ದಕ್ಕೆ ನಿರ್ಮಿಸಿ ದೋಣಿ ಮೂಲಕ ಮರಳುಗಾರಿಕೆ ನಡೆಸಲಾಗುತ್ತಿತ್ತು. ಈ ಕುರಿತು ಸ್ಥಳೀಯರು ಹಲವು ಬಾರಿ ದೂರು ನೀಡಿದ್ದರು. ಆದರೆ ಈ ತನಕ ಸಂಬಂಧಪಟ್ಟ ಇಲಾಖೆ ಸಮರ್ಪಕ ಕ್ರಮ ಕೈಗೊಂಡಿರಲಿಲ್ಲ ಎನ್ನುವ ದೂರು ಸ್ಥಳೀಯರಿಂದ ಕೇಳಿಬಂದಿತ್ತು. ಈ ನಡುವೆ ಬುಧವಾರ ಕೋಟ ಕಂದಾಯ ಅಧಿಕಾರಿ ಚಂದ್ರಹಾಸ ಬಂಗೇರ ಅವರು ತಮ್ಮ ತಂಡದೊಂದಿಗೆ ಇಲ್ಲಿಗೆ ಭೇಟಿ ನೀಡಿ ಜೇಸಿಬಿ ಮೂಲಕ ದಕ್ಕೆಗಳನ್ನು ನಾಶಪಡಿಸಿ, ವಾಹನಗಳು ತೆರಳದಂತೆ ಹೊಂಡ ನಿರ್ಮಿಸಿದರು.
ವ್ಯವಸ್ಥಿತ ಮರಳುಗಾರಿಕೆ
ಈ ಐದು ಕಡೆಗಳಲ್ಲಿ ಮಣ್ಣು ಸಮತಟ್ಟು ಮಾಡಿ, ವಾಹನ ಇಳಿಯಲು ರ್ಯಾಂಪ್ಗ್ಳನ್ನು ನಿರ್ಮಿಸಿ, ದೋಣಿಯ ಮೂಲಕ ಮರಳನ್ನು ಹೊಳೆಯಿಂದ ಮೇಲೆತ್ತಳು ವ್ಯವಸ್ಥೆ ಮಾಡಿರುವುದು ತಿಳಿದು ಬಂತು ಹಾಗೂ ಕಾವಡಿ ಸೇತುವೆಯ ಕೆಳಗಡೆಯೇ ಮರಳುಗಾರಿಕೆ ನಡೆಯುತ್ತಿರುವುದು ತಿಳಿದು ಬಂತು.
ಅಕ್ರಮಕ್ಕೆ ಆಸ್ವದವಿಲ್ಲ
ಇನ್ನು ಮುಂದೆ ಯಾವುದೇ ಕಾರಣಕ್ಕೆ ಅಕ್ರಮ ಮರಳುಗಾರಿಕೆ ನಡೆಸಲು ಆಸ್ಪದ ನೀಡುವುದಿಲ್ಲ. ಒಂದು ವೇಳೆ ಮರಳುಗಾರಿಕೆ ನಡೆದರೆ ಸ್ಥಳೀಯರು ನಮ್ಮ ಗಮನಕ್ಕೆ ತಂದಲ್ಲಿ ಕಠಿನ ಕ್ರಮಕೈಗೊಳ್ಳಲಾಗುವುದು ಎಂದು ಉಪಸ್ಥಿತರಿದ್ದ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದರು.
ವಡ್ಡರ್ಸೆ ಗ್ರಾ.ಪಂ. ಪ್ರಭಾರ ಪಿ.ಡಿ.ಒ. ಸತೀಶ್ ಕುಮಾರ್, ಗ್ರಾಮಲೆಕ್ಕಾಧಿಕಾರಿ ವಿಜಯ ಶೆಟ್ಟಿ, ಅವಿನಾಶ್, ಶರತ್ ಶೆಟ್ಟಿ, ರಾಘವೇಂದ್ರ, ಗ್ರಾಮಸೇವಕ ಶ್ರೀನಿವಾಸ ನಾೖರಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…