Brahmavar: ಮಗನಿಂದಲೇ ತಂದೆಯ ಬರ್ಬರ ಹತ್ಯೆ
Team Udayavani, Oct 8, 2023, 2:00 PM IST
ಬ್ರಹ್ಮಾವರ: ಮಗನೇ ತಂದೆಯನ್ನು ಕೊಲೆಗೈದ ಘಟನೆ ಶನಿವಾರ ಕೊಕ್ಕರ್ಣೆ ಸಮೀಪ ಮೊಗವೀರಪೇಟೆಯಲ್ಲಿ ನಡೆದಿದೆ. ಸಾಧು ಮರಕಾಲ(68) ಕೊಲೆಯಾದವರು. ಆರೋಪಿ ಪುತ್ರ ಆನಂದನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಸಾಧು ಮರಕಾಲರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ. ತಂದೆ ಸಾಧು ಮನೆ ಬಿಟ್ಟು ಹೋಗುವಂತೆ ಆನಂದ ಯಾವಾಗಲೂ ಮನೆಯಲ್ಲಿ ಗಲಾಟೆ ಮಾಡುತ್ತಿದ್ದು ಅದರಂತೆ ಶನಿವಾರ ಬೆಳಗ್ಗೆ ಇಬ್ಬರ ನಡುವೆ ಜಗಳವಾಗಿತ್ತು. ಮಧ್ಯಾಹ್ನದ ವೇಳೆ ಆನಂದ ತಂದೆಯನ್ನು ಕತ್ತಿಯಿಂದ ಕಡಿದಿದ್ದು ಮನೆ ಹಿಂಬದಿ ಓಣಿಯಲ್ಲಿ ಗಾಯಗೊಂಡು ಬಿದ್ದಿದ್ದರು. ಸ್ವಲ್ಪ ಸಮಯ ಯಾರೂ ಗಮನಿಸದೆ ತೀವ್ರ ರಕ್ತಸ್ರಾವವಾಗಿದೆ. ಅನಂತರ ತಿಳಿದು ಆಸ್ಪತ್ರೆಗೆ ಕರೆದೊಯ್ದರೂ ಸಾಧು ಮೃತಪಟ್ಟಿದ್ದಾರೆ.
ಆನಂದ ಮೀನುಗಾರಿಕೆ ಕೆಲಸಕ್ಕೆ ಮಲ್ಪೆಗೆ ತೆರಳುತ್ತಿದ್ದು, ಪತ್ನಿ ತನ್ನ ತಾಯಿಮನೆಯಲ್ಲಿ ನೆಲೆಸಿದ್ದಾರೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ
Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು