ಬೈಂದೂರು ತಾಲೂಕು ರಚನೆ ಮುಂದಿರುವ ಸಾಧಕ-ಭಾದಕಗಳು
Team Udayavani, Mar 17, 2017, 4:30 PM IST
ಬೈಂದೂರು: ಬಹುನಿರೀಕ್ಷಿತ ಬೈಂದೂರು ತಾಲೂಕು ಅಧಿಕೃತ ಘೋಷಣೆಯಾಗಿದೆ.ಇದರಿಂದಾಗಿ ಸುಮಾರು ನಲವತ್ತು ವರ್ಷಗಳ ಹೋರಾಟಕ್ಕೊಂದು ಸಂತೃಪ್ತಿ ದೊರೆತಿದೆ.ಆದರೆ ತಾಲೂಕಿನ ಅನುಷ್ಠಾನದಲ್ಲಿರುವ ಸಾಧಕ ಭಾದಕಗಳನ್ನು ಮನಗಂಡು ಯೋಜನೆ ರೂಪಿಸಬೇಕಾದ ಸವಾಲು ಸರಕಾರ ಮತ್ತು ಇಲಾಖೆಗಳ ಮೇಲಿದೆ.
ಬೈಂದೂರು ತಾಲೂಕು ನಿರ್ಮಾಣದಲ್ಲಿರುವ ನಿರೀಕ್ಷೆಗಳೇನು?
ಬೈಂದೂರು ತಾಲೂಕು ನಿರ್ಮಾಣದ ಬೇಡಿಕೆ ಇದ್ದಿರುವ ಕಾರಣ ಈಗಾಗಲೇ ಬಹುತೇಕ ಕಚೇರಿಗಳು ಹಾಗೂ ಮೂಲಸೌಕರ್ಯಗಳ ಪೂರೈಕೆಯಾಗಿದೆ. ಆದರೆ ಅಧಿಕೃತವಾಗಿ ಅಂತಿಮಗೊಳಿಸಬೇಕಾದ ಸಂದರ್ಭದಲ್ಲಿ ಭವಿಷ್ಯದ ಪರಿಕಲ್ಪನೆಯನ್ನು ಮನಗಂಡು ಕಚೇರಿಗಳನ್ನು ಸ್ಥಾಪಿಸಬೇಕಾಗಿದೆ. ಬಹುತೇಕವಾಗಿ ತಾಲೂಕು ಕೇಂದ್ರಕ್ಕೆ ಪ್ರಮುಖವಾಗಿರುವುದು ಕಂದಾಯ ಕಚೇರಿ. ಬೈಂದೂರಿನಲ್ಲಿ ಈಗಾಗಲೇ ವಿಶೇಷ ತಹಶೀಲ್ದಾರರ ಕಚೇರಿಯಿದೆ. ಪಶು ಆಸ್ಪತ್ರೆಯನ್ನು ಸ್ಥಳಾಂತರಿಸಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಅವಶ್ಯವಿರುವ ಜಾಗ ಕಾದಿರಿಸಲಾಗಿದೆ. ಇದರ ಜತೆಗೆ ಈ ಸ್ಥಳದ ಎದುರುಗಡೆ ಅಂದಾಜು ಎಂಬತ್ತು ಸೆಂಟ್ಸ್ ಜಾಗ ಅಂಚೆ ಕಚೇರಿಗೆ ಮೀಸಲಿಡಲಾಗಿದೆ.ಆದರೆ ಅಂಚೆ ಇಲಾಖೆ ಈ ಜಾಗವನ್ನು ಉಪಯೋಗಿಸಿಕೊಂಡಿಲ್ಲ. ಈ ಜಾಗವನ್ನು ಕಂದಾಯ ಇಲಾಖೆಯ ವ್ಯಾಪ್ತಿಗೆ ಸೇರಿಸಿದರೆ ರಾಷ್ಟ್ರೀಯ ಹೆದ್ದಾರಿ ಸಮೀಪದಿಂದಲೇ ಕಂದಾಯ ಇಲಾಖೆಯ ಕಚೇರಿ ಪ್ರಾರಂಬಿಸಲು ಸಾಧ್ಯವಾಗುತ್ತದೆ. ಮಾತ್ರವಲ್ಲದೆ ಉಡುಪಿ ಜಿಲ್ಲೆಯಲ್ಲಿಯೇ ಮಾದರಿ ತಾಲೂಕು ಕಚೇರಿಗಳ ಸಂಕೀರ್ಣ ಸ್ಥಾಪಿಸಬಹುದಾಗಿದೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಯಬೇಕಾಗಿದೆ. ಬೈಂದೂರಿನಲ್ಲಿ ಹೆದ್ದಾರಿಯ ಸಮೀಪ ಬಸ್ಸು ನಿಲ್ದಾಣವಿದೆ. ನಿಲ್ದಾಣದ ಸಮೀಪ ವಿವಿಧ ಕಚೇರಿಗಳು ದೊರೆಯುವುದರಿಂದ ಸಾರ್ವಜನಿಕರು ಅಲೆದಾಡಬೇಕಾದ ಸಮಸ್ಯೆ ತಪ್ಪುತ್ತದೆ.
ಒಳಮಾರ್ಗಗಳಿಗೆ
ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು
ಬೈಂದೂರು ತಾಲೂಕು ರಚನೆಯಾದಾಗ ಪ್ರಮುಖವಾಗಿ ಸಮಸ್ಯೆಯಾಗುವುದು ಹಳ್ಳಿಹೊಳೆ, ಶಂಕರನಾರಾಯಣ ಮುಂತಾದ ಊರುಗಳಿಗೆ. ಕಾರಣವೆಂದರೆ ಇಲ್ಲಿಯ ಜನರಿಗೆ ಕುಂದಾಪುರಕ್ಕೆ ಸೂಕ್ತ ಬಸ್ಸಿನ ವ್ಯವಸ್ಥೆಯಿದೆ.ಆದರೆ ಬೈಂದೂರಿಗೆ ಬರಬೇಕಾದರೆ ಎರಡೆರಡು ಬಸ್ಸುಗಳನ್ನು ಬದಲಾಯಿಸಬೇಕು. ಹೀಗಾಗಿ ಹಳ್ಳಿಹೊಳೆ, ಸಿದ್ದಾಪುರ, ಜಡ್ಕಲ್, ಆಲೂರು, ನಾಡ ಮುಂತಾದ ಊರುಗಳಿಂದ ಬೈಂದೂರಿಗೆ ನೇರ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು.ಈಗಾಗಲೆ ಒಳ ರಸ್ತೆಗಳು ಅಭಿವೃದ್ಧಿಯಾದುದರಿಂದ ಸಂಪರ್ಕ ವ್ಯವಸ್ಥೆ ಸಮೀಪವಿದೆ. ಒಂದೊಮ್ಮೆ ಒಳರಸ್ತೆಗಳಿಗೆ ಬಸ್ಸು ಸಂಪರ್ಕ ಕಲ್ಪಿಸಿದರೆ ಬೈಂದೂರು ಕುಂದಾಪುರಕ್ಕಿಂತ ಸನಿಹವಾಗಲಿದೆ.ಬೈಂದೂರು ಶಾಸಕರು ರಾಜ್ಯ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿರುವ ಕಾರಣ ಬಸ್ಸು ಸಂಪರ್ಕ ಕಲ್ಪಿಸುವ ವಿಪುಲ ಅವಕಾಶಗಳಿವೆ. ಮಾತ್ರವಲ್ಲದೆ ಕಮಲಶಿಲೆ ಮುದೂರು, ಜಡ್ಕಲ್, ಮಾರ್ಗವಾಗಿ ಬೈಂದೂರು ನೇರ ಸಂಪರ್ಕ ಕಲ್ಪಿಸುವ ಬಸ್ಸುಗಳು ಸದ್ಯದಲ್ಲೆ ಪ್ರಾರಂಭವಾಗುವ ನಿರೀಕ್ಷೆಗಳಿವೆ.
ಅಭಿವೃದ್ಧಿಗೆ ರಾಜಕೀಯ ಲಾಬಿ ಮರೆಯಬೇಕಿದೆ
ಬೈಂದೂರು ತಾಲೂಕು ರಚನೆಗೆ ಪ್ರತಿಯೊಬ್ಬರ ಸಹಕಾರಬೇಕು. ಆದರೆ ರಾಜಕೀಯ ಲೆಕ್ಕಾಚಾರ ಮತ್ತು ಉದ್ದಿಮೆದಾರರ ಲಾಬಿ ಅನಗತ್ಯ ಗೊಂದಲಕ್ಕೆ ಎಡೆಮಾಡಿಕೊಡುತ್ತಿದೆ. ಕುಂದಾಪುರ ನ್ಯಾಯಾಲಯದಲ್ಲಿರುವ ಪ್ರಕರಣಗಳಲ್ಲಿ ಅಧಿಕ ಸಂಖ್ಯೆಯ ಪ್ರಕರಣ ಬೈಂದೂರು ಭಾಗದ್ದಾಗಿದೆ.ಬೈಂದೂರು ಭಾಗದಲ್ಲಿ ನ್ಯಾಯಾಲಯ ನಿರ್ಮಾಣವಾದರೆ ಕುಂದಾಪುರಕ್ಕೆ ತೆರಳುವವರ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ಕುಂದಾಪುರದ ವ್ಯವಹಾರದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ತೆರೆಮರೆಯ ಉದ್ಯಮ ಲಾಬಿ, ರಾಜಕೀಯ ಚಿಂತನೆಗಳು ಹಿನ್ನಡೆ ನೀಡುತ್ತಿವೆ.
ಮೂಲ ಸೌಕರ್ಯ ಶೀಘ್ರ ಒದಗಿಸಬೇಕಾಗಿದೆ
ಬೈಂದೂರು ತಾಲೂಕು ರಚನೆಯಾದರೆ ತಾಲೂಕು ಪಂಚಾಯತ್ ಸಂಕೀರ್ಣ, ನ್ಯಾಯಾಲಯ, ಕೃಷಿ ಕಚೇರಿ, ಚುನಾವಣಾ ವಿಭಾಗ, ಆಹಾರ, ಭೂ ನ್ಯಾಯಮಂಡಳಿ, ಹೋಬಳಿ ಕಂದಾಯ ಪರಿವೀಕ್ಷಕರು, ಭೂ ಮಾಪನ ಅಧಿಕಾರಿಗಳು ನೇಮಕವಾಗಬೇಕು. ಈಗಾಗಲೇ ಶಿರೂರಿನಲ್ಲಿ ಮೂವತ್ತು ಕೋಟಿ ರುಪಾಯಿ ಅನುದಾನದಲ್ಲಿ ಉಪ್ಪುನೀರು ಸಂಸ್ಕರಣ ಘಟಕ ಸ್ಥಾಪನೆ ಪ್ರಕ್ರಿಯೆ ನಡೆಯುತ್ತಿದೆ. ಇವುಗಳೂ ಬಹುಗ್ರಾಮ ಪರಿಕಲ್ಪನೆಯಾದರೆ ಕುಡಿಯುವ ನೀರು ಸಮಸ್ಯೆ ನೀಗಿಸಬಹುದಾಗಿದೆ. ಪ್ರವಾಸೋದ್ಯಮಅಭಿವೃದ್ಧಿಗೆ ವಿಶೇಷ ಒತ್ತು ನೀಡುವ ಮೂಲಕ ಸೋಮೇಶ್ವರ, ಮರವಂತೆ, ಕೊಸಳ್ಳಿ ಜಲಪಾತ, ಕೊಲ್ಲೂರು ಸೇರಿದಂತೆ ಪ್ರಮುಖ ಸ್ಥಳಗಳ ಪ್ರಗತಿಗೆ ಯೋಜನೆ ರೂಪಿಸಬೇಕು.
ಬೈಂದೂರು ಹೋಬಳಿ ವಿಂಗಡನೆಯಾಗದು
ತಾಲೂಕಿಗೆ ಅವಶ್ಯವಿರುವ ಯೋಜನೆಗಳು ಎಪ್ರಿಲ್ 7 ರ ಬಳಿಕ ಹಂತ ಹಂತ ವಾಗಿ ಜಾರಿಯಾಗಲಿವೆ. ಮಾತ್ರವಲ್ಲದೆ ಬೈಂದೂರು ಹೋಬಳಿಗೆ ಒಳಪಡುವ ಯಾವುದೇ ಪ್ರದೇಶಗಳನ್ನು ವಿಂಗಡನೆ ಮಾಡಲಾಗುವುದಿಲ್ಲ.ಇವೆಲ್ಲವು ಬೈಂದೂರು ತಾಲೂಕಿಗೆ ಸೇರ್ಪಡೆಯಾಗುತ್ತವೆ. ಮಾತ್ರವಲ್ಲದೆ ಕಾನೂನಾತ್ಮಕವಾಗಿ ವಿಂಗಡನೆ ಸಾಧ್ಯವಿಲ್ಲ.ವಂಡ್ಸೆ ಕುಂದಾಪುರ ಕುರಿತು ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಜನರ ಅನುಕೂಲದ ಆಧಾರದಲ್ಲಿ ಆದ್ಯತೆ ಪರಿಗಣಿಸಲಾಗುವುದು.
-ಕೆ. ಗೋಪಾಲ ಪೂಜಾರಿ, ಬೈಂದೂರು ಶಾಸಕ
ಮೂಲ ಸೌಕರ್ಯ ಶೀಘ್ರ ಒದಗಿಸಬೇಕು
ತಾಲೂಕು ಘೋಷಣೆಗೆ ಮಾತ್ರ ಸೀಮಿತವಾಗಬಾರದು. ಯೋಜನೆಗಳ ಶೀಘ್ರ ಅನುಷ್ಠಾನ ಗೊಳ್ಳಬೇಕು. ಜನಸಾಮಾನ್ಯರ ನಿರೀಕ್ಷೆಗಳಿಗೆ ಮನ್ನಣೆ ನೀಡಬೇಕು. ಪ್ರಾಂತೀಯ ವಿಭಾಗದ ಸಮಸ್ಯೆಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ವಿಂಗಡಿಸಬೇಕಾಗಿದೆ.ತಾಲೂಕು ಕೇಂದ್ರದಲ್ಲಿ ಎಲ್ಲ ಸೌಲಭ್ಯಗಳು ದೊರೆಯಬೇಕು.
-ಬಿ.ಎಂ. ಸುಕುಮಾರ ಶೆಟ್ಟಿ, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ
– ಅರುಣ ಕುಮಾರ್ ಶಿರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಆಸ್ಪತ್ರೆಯ ಡಾ.ರಾಮದಾಸ್ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್ ಸೇವೆ ಆರಂಭ
ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು
Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್ ಕರೆ
Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ
Malpe ಬೀಚ್: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ
MUST WATCH
ಹೊಸ ಸೇರ್ಪಡೆ
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್