ಚೀನಿ ವಸ್ತುಗಳನ್ನು ದಹಿಸಿ ಪ್ರತಿಭಟನೆ
Team Udayavani, Sep 2, 2017, 7:10 AM IST
ಉಡುಪಿ: ಚೀನಾ ದೇಶವು ಉತ್ಪತ್ತಿ ಮಾಡಿದ ವಸ್ತುಗಳನ್ನು ಭಾರತೀಯರು ಬಹಿಷ್ಕರಿಸುವಂತೆ ಕರೆ ನೀಡಿದ್ದ ಬಜರಂಗದಳದ ಸದಸ್ಯರು ಸೆ. 1ರಂದು ಅಜ್ಜರಕಾಡಿನ ಹುತಾತ್ಮಕರ ಸ್ಮಾರಕದ ಬಳಿ ಚೀನಾ ನಿರ್ಮಿಸಿದ ವಸ್ತುಗಳನ್ನು ಸುಡುವುದರ ಮೂಲಕ ಪ್ರತಿಭಟನೆ ನಡೆಸಿದರು.
ಬಜರಂಗದಳದ ವಿಭಾಗ ಸಂಚಾಲಕ ಸುನೀಲ್ ಕೆ.ಆರ್. ಮಾತನಾಡಿ ದೇಶದ ಮೇಲೆ ಆಕ್ರಮಣಕ್ಕೆ ಸಿದ್ಧತೆಯನ್ನು ಮಾಡಿದ್ದ ಚೀನಾ ದೇಶದ ವಸ್ತುಗಳನ್ನು ಭಾರತೀಯರು ಉಪಯೋಗಿಸದೆ ಪಾಠವನ್ನು ಕಲಿಸಬೇಕು. ಶೇ. 60 ರಷ್ಟು ವ್ಯಾಪಾರ ವಹಿವಾಟು ನಡೆಸುತ್ತಿರುವ ಚೀನಾಕ್ಕೆ ಇದರಿಂದ ಅತ್ಯುತ್ತಮ ಸಂದೇಶ ರವಾನೇಯಾಗುತ್ತದೆ. ಇದಕ್ಕೆ ಭಾರತೀಯರು ಸಹಕರಿಸಬೇಕೆಂದು ಕೋರಿದರು.
ಬಜರಂಗದಳದ ಪ್ರಮುಖರಾದ ನಾರಾಯಣ ಮಣಿಯಾಣಿ, ದಿನೇಶ್ ಶೆಟ್ಟಿ ಹೆಬ್ರಿ, ಗಿರೀಶ್ ಕುಂದಾಪುರ, ಮಹೇಶ್, ದಿನೇಶ್ ಮೆಂಡನ್, ಸುರೇಂದ್ರ ಕೋಟೇಶ್ವರ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ