ವರ್ಲ್ಡ್ ಬುಕ್ ಆಫ್ ರೆಕಾರ್ಡ್ಗೆ ಉಡುಪಿ ಕಾರ್ಪ್ಬ್ಯಾಂಕ ಮ್ಯೂಸಿಯಂ
Team Udayavani, Jun 26, 2018, 3:21 PM IST
ಉಡುಪಿ: ಉಡುಪಿಯ ಕಾರ್ಪೊರೇಶನ್ ಬ್ಯಾಂಕ್ ಹೆರಿಟೇಜ್ ಮ್ಯೂಸಿಯಂ “ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್’ ಸೇರ್ಪಡೆ ಗೌರವ ಪಡೆದಿದೆ.
ಜೂ. 23ರಂದು ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ ಅಧಿಕೃತವಾಗಿ ಘೋಷಣೆ ಮಾಡಿದ್ದು, ಜೂ. 25ರಂದು ಬ್ಯಾಂಕ್ನ ಹಿರಿಯ ಅಧಿಕಾರಿಗಳು ಮ್ಯೂಸಿಯಂನಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಸಿದರು.
ಮ್ಯೂಸಿಯಂನಲ್ಲಿ ಕ್ರಿ.ಪೂ. 400ರಿಂದ ಇಂದಿನವರೆಗಿನ ವಿವಿಧ ಸಾಮ್ರಾಜ್ಯ, ಆಡಳಿತಗಳ 1,800ಕ್ಕೂ ಅಧಿಕ ಅಪೂರ್ವ ನಾಣ್ಯಗಳನ್ನು ಸಂಗ್ರಹಿಸಿಡಲಾಗಿದೆ. ಅಲ್ಲದೆ 10 ರೂ.ಗಳಿಂದ 1,000 ರೂ. ಮುಖಬೆಲೆಯ ಸ್ಮರಣಿಕೆ ನಾಣ್ಯ (ಕಮೆಮೊರೇಟಿವ್ ಕಾಯಿನ್ಸ್)ಗಳು ಹಾಗೂ ದೇಶ ಮತ್ತು ವಿದೇಶಗಳ ಕರೆನ್ಸಿ ನೋಟುಗಳಿವೆ. ಗಾಂಧಾರ, ಸೌರಾಷ್ಟ್ರ, ಆಶೋಕ ಸಹಿತ ಪ್ರತಿಯೊಂದು ಸಾಮ್ರಾಜ್ಯ, ರಾಜರ ಆಡಳಿತದ ನಾಣ್ಯಗಳು, ನಕಾಶೆಗಳ ಮಾಹಿತಿಯನ್ನು ಇಲ್ಲಿ ಅಳವಡಿಸಲಾಗಿದೆ. ಮ್ಯೂಸಿಯಂ ರವಿವಾರ ಹೊರತುಪಡಿಸಿ ಉಳಿದೆಲ್ಲ ದಿನಗಳಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ತೆರೆದಿರುತ್ತದೆ. ಮೂರು ತಿಂಗಳುಗಳ ಹಿಂದೆ ಸುಪ್ರಿಂ ಕೋರ್ಟ್ ನ್ಯಾಯವಾದಿ ಸಂತೋಷ್ ಶುಕ್ಲಾ ಆಗಮಿಸಿ ಮ್ಯೂಸಿಯಂನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅಭಿನಂದನ ಸಮಾರಂಭದಲ್ಲಿ ಬ್ಯಾಂಕ್ನ ಮಹಾಪ್ರಬಂಧಕ ಶ್ರೀವಾತ್ಸವ, ಉಪಮಹಾಪ್ರಬಂಧಕಿ ಡೇಲಿಯಾ ಡಯಾಸ್, ಮುಖ್ಯಪ್ರಬಂಧಕ ಜಗದೀಶ್ ನಾಯಕ್, ಶಿವರಾಂ ಕೃಷ್ಣನ್, ಹಿರಿಯ ಪ್ರಬಂಧಕ ಗುರುಪ್ರಸಾದ್ ಬಲ್ಲಾಳ್, ಮ್ಯೂಸಿಯಂನ ಕ್ಯುರೇಟರ್ ಮತ್ತು ಗೈಡ್ ಎಂ.ಕೆ. ಕೃಷ್ಣಯ್ಯ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ