ಸಿಡಿಲು ಬಡಿದು ಮೂರು ಹಸುಗಳ ಸಾವು; 70 ಸಾವಿರ ರೂಪಾಯಿ ನಷ್ಟ
Team Udayavani, Jun 1, 2018, 2:10 AM IST
ಕಾಪು: ಸಿಡಿಲಿನ ಆಘಾತಕ್ಕೆ ಸಿಲುಕಿ ಮೂರು ಹಸುಗಳು ಮೃತಪಟ್ಟ ಘಟನೆ ಮಂಗಳವಾರ ಕಾಪು ಪಡುಗ್ರಾಮದ ಲೈಟ್ ಹೌಸ್ ರೋಡ್ ನಲ್ಲಿ ಮಂಗಳವಾರ ನಡೆದಿದೆ. ಕಾಪು ಲೈಟ್ ಹೌಸ್ ರೋಡ್ ನಿವಾಸಿ ಶಂಶುದ್ದೀನ್ ಎಂಬವರ ಮನೆಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ಮೂರು ದನಗಳಿಗೆ ಮಂಗಳವಾದ ಮುಂಜಾನೆ ಸಿಡಿಲು ಬಡಿದಿದ್ದು ಇದರಲ್ಲಿ ಎರಡು ದನಗಳು ಸಿಡಿಲಿನ ಆರ್ಭಟಕ್ಕೆ ಸ್ಥಳದಲ್ಲೇ ಬಲಿಯಾಗಿದ್ದವು.
ಮತ್ತೂಂದು ದನ ಗಂಭೀರ ಗಾಯಗೊಂಡು ಎರಡು ದಿನಗಳ ಕಾಲ ಜೀವನ್ಮರಣ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮುಂಜಾನೆ ಮೃತಪಟ್ಟಿದೆ. ಸುಮಾರು ಎಪ್ಪತ್ತು ಸಾವಿರ ರೂಪಾಯಿ ನಷ್ಟವನ್ನು ಅಂದಾಜಿಸಲಾಗಿದೆ. ಶಂಶುದ್ದೀನ್ ಅವರು ಕಳೆದ ಎಂಟು ವರುಷಗಳಿಂದ ಹೈನುಗಾರಿಕೆಯನ್ನು ಕಸುಬನ್ನಾಗಿಸಿಕೊಂಡು ಹಾಲು ಮಾರಿ ಜೀವನ ನಡೆಸುತ್ತಿದ್ದು ಹಸುಗಳ ಸಾವಿನಿಂದ ಕಂಗಾಲಾಗಿದ್ದಾರೆ. ಸಿಡಿಲಿಗೆ ಬಲಿಯಾದ ಎರಡು ಜೆರ್ಸಿ ದನಗಳನ್ನು ಬ್ಯಾಂಕ್ ಸಾಲದ ಮೂಲಕ ಪಡೆದು ಖರೀದಿಸಿದ್ದರು. ಕಾಪು ಪುರಸಭೆ ಸದಸ್ಯೆ ಮಮತಾ ಕೆ. ಸಾಲ್ಯಾನ್, ಪಶು ವೈದ್ಯಾಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು