ಅಪಾಯದ ಅಂಚಿನಲ್ಲಿ ಮುದ್ರಾಡಿ ಮಾವಿನಕಟ್ಟೆ ಸೇತುವೆ
Team Udayavani, Jul 12, 2019, 5:36 AM IST
ಹೆಬ್ರಿ: ಮುದ್ರಾಡಿ ಗ್ರಾ. ಪಂ. ವ್ಯಾಪ್ತಿಯ ಕಬ್ಬಿನಾಲೆ ಗ್ರಾಮದಲ್ಲಿರುವ ಮಾವಿನಕಟ್ಟೆ ಸೇತುವೆಯ ಪಿಲ್ಲರ್ ಶಿಥಿಲಾವಸ್ಥೆಯಲಿದ್ದು ಅಪಾಯದ ಅಂಚಿ ನಲ್ಲಿದೆ.
ಕುಸಿಯುವ ಭೀತಿ
ಈ ಸೇತುವೆ ಸುಮಾರು 25 ವರ್ಷ ಹಳೆಯದು. ಮಳೆ ನೀರು ರಭಸವಾಗಿ ಹರಿದು, ಸೇತುವೆ ಪಿಲ್ಲರ್ಗೆ ಹಾನಿಯಾಗಿದೆ. ಇದರಿಂದ ಕುಸಿಯುವ ಭೀತಿ ಕಾಡಿದೆ. ಕಾಂಕ್ರೀಟ್ ಕಂಬದ ತಳದಲ್ಲಿ ಸರಳುಗಳು ಕಾಣಿಸುತ್ತಿವೆ. ಈ ಕಿರು ಸೇತುವೆಯ ಎರಡೂ ಪಿಲ್ಲರ್ಗಳ ಸ್ಥಿತಿಯೂ ಒಂದೇ ತೆರನಾಗಿವೆ. ಆದ್ದರಿಂದ ಅಪಾಯ ಹೆಚ್ಚಿದೆ.
ಸಂಪರ್ಕಕ್ಕೆ ಅಗತ್ಯ
ನಕ್ಸಲ್ ಪೀಡಿತ ಕಬ್ಬಿನಾಲೆ ಕುಚ್ಚಾರು ಸಂಪರ್ಕಿಸುವ ಅರ್ಕಲ್ ಬಳಿಯ ಮಾವಿನಕಟ್ಟೆ ಸೇತುವೆಯಲ್ಲಿ ನಿತ್ಯ ನೂರಾರು ಜನ ಸಂಚರಿಸುತ್ತಾರೆ. ಕಬ್ಬಿನಾಲೆ ಕುಚ್ಚಾರು, ಕುಳ್ಳಾಂತಬೆಟ್ಟು, ಅಲಂಗಾಡು, ಕೆಳಬೆಟ್ಟು, ಬೀರು ಬೈಲು ,ತಿಂಗಳಮಕ್ಕಿ, ತೆಂಗುಮಾರು, ಒರ್ತುಬೈಲು, ಕಾಜಿಗೆಲ್ಲು, ಕುಚ್ಚಾರು ದರ್ಕಾಸು, ಪೀತಬೈಲು, ಮುಂತಾದ ಜನ ವಸತಿ ಪ್ರದೇಶಗಳಿಗೆ ಸಂಪರ್ಕ ಕೊಂಡಿಯಾಗಿ ಈ ಸೇತುವೆ ಇದ್ದು ಸೇತುವೆ ಕುಸಿಯುವ ಭೀತಿಯಿಂದ ಜನರು ಭಯಭೀತರಾಗಿದ್ದಾರೆ.
ದುರ್ಗಮ ಹಾದಿ
ಸೇತುವೆ ಸಮಸ್ಯೆಯೊಂದಿಗೆ ಹದಗೆಟ್ಟ ರಸ್ತೆ ಸಮಸ್ಯೆಯೂ ಇಲ್ಲಿನದು. ಮರಗಳು ರಸ್ತೆಗೆ ಬಿದ್ದು ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ಭಾಗದಲ್ಲಿ ಸುಮಾರು 65-70 ಮನೆಗಳಿದ್ದು 400ಕ್ಕೂ ಮಿಕ್ಕಿ ಜನ ದುರ್ಗಮ ಹಾದಿಯ ಸಂಚಾರದಿಂದ ಬೇಸತ್ತು ಹೋಗಿದ್ದಾರೆ.
ಜನಪ್ರತಿನಿಧಿಗಳೇ ಇತ್ತ ಗಮನ ಹರಸಿ
ಒಂದೆಡೆ ಸೇತುವೆ ಅಪಾಯದಲ್ಲಿದ್ದರೆ, ರಸ್ತೆಯ ಪರಿಸ್ಥಿತಿ ಹದಗೆಟ್ಟಿದೆ. ಸಮರ್ಪಕವಾದ ರಸ್ತೆಯೂ ಇಲ್ಲ. ರಸ್ತೆ ಬದಿಯ ಚರಂಡಿಗೆ ಕಟ್ಟಿದ ಮೋರಿ ಕುಸಿದಿದೆ. ಮೋರಿ ಸಮಸ್ಯೆಯಿಂದಾಗಿ ರಸ್ತೆಯೂ ಹದಗೆಟ್ಟಿದ್ದು, ಬಾಡಿಗೆ ವಾಹನ ಚಾಲಕರು ಸಂಚರಿಸಲು ನಿರಾಕರಿಸುತ್ತಾರೆ. ಜನಪ್ರತಿನಿಧಿಗಳು ಇತ್ತ ಗಮನಹರಿಸದಿದ್ದರೆ ಪ್ರತಿಭಟನೆ ಅನಿವಾರ್ಯ ಎಂಬುದು ಈ ಭಾಗದ ಗ್ರಾಮಸ್ಥರ ಆಗ್ರಹ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್