ನಾಡಿನೆಲ್ಲೆಡೆ ಸಂಭ್ರಮದ ಗೋಪೂಜೆ
Team Udayavani, Nov 9, 2018, 11:42 AM IST
ಉಡುಪಿ: ಬಲಿಪಾಡ್ಯದ ದಿನವಾದ ಗುರುವಾರ ನಾಡಿನ ವಿವಿಧೆಡೆ ಗೋಪೂಜೆಯನ್ನು ನಡೆಸಲಾಯಿತು. ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪಲಿಮಾರು ಮತ್ತು ಶ್ರೀ ಅದಮಾರು ಕಿರಿಯ ಮಠಾಧೀಶರು ಕನಕ ಗೋಪುರದ ಎದುರು ಪೂಜೆ ಸಲ್ಲಿಸಿ ದನಗಳಿಗೆ ತಿನಿಸುಗಳನ್ನು ನೀಡಿದರು.
ಬಳಿಕ ರಥಬೀದಿಯಲ್ಲಿ ದನಗಳ ಮೆರವಣಿಗೆ ನಡೆಯಿತು.ಗೋಪೂಜೆ ನಿಮಿತ್ತ ದೇಸೀ ಹಸುಗಳಿಂದ ತಯಾರಿಸಿದ ಪಂಚಗವ್ಯವನ್ನು ಭಕ್ತರಿಗೆ ವಿತರಿಸಲಾಯಿತು. ವಿವಿಧ ಮಠಗಳು, ದೇವಸ್ಥಾನಗಳಲ್ಲಿ, ಮನೆಗಳಲ್ಲಿಯೂ ಗೋಪೂಜೆ ನಡೆಸಲಾಯಿತು. ಈ ಸಂದರ್ಭ ದನಗಳಿಗೆ ವಿಶಿಷವಾದ ಅಲಂಕಾರಗಳನ್ನು ಮಾಡಲಾಯಿತು. ಜನರಿಗೆ ಅನುಕೂಲವಾಗಲು ಕೆಲವು ಗೋಶಾಲೆಗಳಲ್ಲಿ ಬೇರೆ ದಿನಗಳಲ್ಲಿಯೂ ಗೋಪೂಜೆಯನ್ನು ಆಯೋಜಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ